ಸಿಡಿಲು, ಮಿಂಚಿನ ಆರ್ಭಟಕ್ಕೆ 23 ಮಂದಿ ಬಲಿ, 29 ಮಂದಿಗೆ ಗಂಭೀರ ಗಾಯ

0

ಲಕ್ನೊ : ಮಳೆಯ ನಡುವಲ್ಲೇ ಭಾರೀ ಭಾರೀ ಪ್ರಮಾಣದ ಸಿಡಿಲು, ಮಿಂಚು ಬಡಿದು 23 ಮಂದಿ ಮೃತಪಟ್ಟಿದ್ದು, 29 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶ ರಾಜ್ಯದ ಅಲಹಾಬಾದ್ ಜಿಲ್ಲೆಯಲ್ಲಿ 8 ಮಂದಿ, 6 ಮಂದಿ ಮಿರ್ಜಾಪುರದಲ್ಲಿ, ಬಡೊಹಿ ಜಿಲ್ಲೆಯಲ್ಲಿ 6 ಮಂದಿ, ಕೌಶಂಬಿ ಜಿಲ್ಲೆಯಲ್ಲಿ ತಲಾ ಇಬ್ಬರು ಮತ್ತು ಜೌನ್ಪುರ್ ಜಿಲ್ಲೆಯಲ್ಲಿ ಓರ್ವರು ಒಬ್ಬರು ಮೃತಪಟ್ಟಿದ್ದಾರೆ.

ಇನ್ನು ಪ್ರಯಾಗ್ ರಾಜ್ ಜಿಲ್ಲೆಯಲ್ಲಿ 9 ಮಂದಿ, ಮಿರ್ಜಾಪುರದಲ್ಲಿ 10 ಮಂದಿ, ನಾಲ್ವರು ಕೌಶಂಬಿಯಲ್ಲಿ ಸಿಡಿಲು ಮಿಂಚಿನ ಆರ್ಭಟದಿಂದಾಗಿ ತೀವ್ರ ಗಾಯಗೊಂಡಿದ್ದಾರೆ ಎಂದು ಪರಿಹಾರ ಆಯುಕ್ತರ ಕಚೇರಿ ತಿಳಿಸಿದೆ. ಇನ್ನು ಸಿಡಿಲು, ಮಿಂಚಿನಿಂದ ಮೃತಪಟ್ಟ ಕುಟುಂಬಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಗಾಯಗೊಂಡವರಿಗೆ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.

Leave A Reply

Your email address will not be published.