ಮಂಗಳೂರು : ತುಳು ಸಿನಿಮಾ ನಟ, ರೌಡಿಶೀಟರ್ ವೋರ್ವನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ. ಚಾಲಿಪೊಲೀಲು ಚಿತ್ರದ ನಟ ಸುರೇಂದ್ರ ಬಂಟ್ವಾಳ್ ಅವರನ್ನು ಹತ್ಯೆ ಮಾಡಲಾಗಿದೆ.
ಬಂಟ್ವಾಳದ ಬಿ.ಸಿ.ರೋಡ್ ಸಮೀಪದ ಭಂಡಾರಿ ಬೆಟ್ಟುವಿನಲ್ಲಿರುವ ವಾಸ್ತಿ ಅಪಾರ್ಟ್ ಮೆಂಟ್ ನಲ್ಲಿ ಸುರೇಂದ್ರ ಬಂಟ್ವಾಳ್ ವಾಸವಾಗಿದ್ದರು. ಆದ್ರೀಗ ವಾಸವಿದ್ದ ಪ್ಲಾಟ್ ನಲ್ಲಿಯೇ ಹತ್ಯೆ ಮಾಡಲಾಗಿದೆ.
ನಿನ್ನೆಯಿಂದಲೇ ಸುರೇಂದ್ರ ಬಂಟ್ವಾಳ್ ಅವರು ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿತ್ತು. ಬಂಟ್ವಾಳ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಅಪಾರ್ಟ್ ಮೆಂಟ್ ಒಳಗೆ ಪರಿಶೀಲಿಸಿದಾಗ ಸುರೇಂದ್ರ ಬಂಟ್ವಾಳ್ ಅವರ ಶವ ಪತ್ತೆಯಾಗಿದೆ.
ಯಾವ ಕಾರಣಕ್ಕೆ ಈ ಹತ್ಯೆ ನಡೆದಿದೆ ಅನ್ನೋದು ತಿಳಿದುಬಂದಿಲ್ಲ. ಸುರೇಂದ್ರ ಬಂಟ್ವಾಳ್ ಅವರಿಗೆ ತೀರಾ ಹತ್ತಿರದವರೇ ಈ ಕೃತ್ಯವನ್ನೆಸಗಿರಬಹುದು ಎಂದು ಶಂಕಿಸಲಾಗುತ್ತಿದೆ. ಈ ಹಿಂದೆ ಸುರೇಂದ್ರ ಬಂಟ್ವಾಳ್ ಅವರು ಬಿಜೆಪಿ ಕಾರ್ಯಕರ್ತರ ಮೇಲೆ ಲಾಂಗ್ ಜಳಪಿಸಿ ಕುಖ್ಯಾತಿಯನ್ನು ಪಡೆದುಕೊಂಡಿದ್ದರು.
2018ರಲ್ಲಿ ಜೈಲು ಸೇರಿದ್ದ ಸುರೇಂದ್ರ ಬಂಟ್ವಾಳ್ ನಂತರ ಜಾಮೀನಿನ ಮೇಲೆ ಬಿಡುಗೆಯಾಗದ್ದರು. ಹಲವು ವರ್ಷಗಳಿಂದಲೂ ಹಣಕಾಸಿನ ವ್ಯವಹಾರವನ್ನು ನಡೆಸುತ್ತಿದ್ದ ಸುರೇಂದ್ರ ಬಂಟ್ವಾಳ್, ಇದೀಗ ಹಣಕಾಸಿನ ವಿಚಾರವಾಗಿಯೇ ಹತ್ಯೆಯಾಗಿರಬೇಕು ಎನ್ನಲಾಗುತ್ತಿದೆ.
ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಲಾಗಿದೆ. ಬಂಟ್ವಾಳ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.
ಸುರೇಂದ್ರ ಬಂಟ್ವಾಳ್ ತುಳು ಚಿತ್ರರಂಗದಲ್ಲಿಯೇ ಹೊಸ ದಾಖಲೆಯನ್ನು ಬರೆದ ಚಾಲಿಪೊಲೀಲು ಸಿನಿಮಾದಲ್ಲಿ ನಟರಾಗಿ ಅಭಿನಯಿಸಿದ್ರು. ಅಲ್ಲದೇ ಕನ್ನಡ ಸವರ್ಣದೀರ್ಘ ಸಂದಿ ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದರು.
Comments are closed.