ಉಡುಪಿಯಲ್ಲಿ ಬಸ್ ಹತ್ತುವ ಮುನ್ನ ಇರಲಿ ಎಚ್ಚರ …! ಪ್ರಯಾಣಿಕರ ಸೋಗಿನಲ್ಲಿ ಪರ್ಸ್ ಕದ್ದ 3 ಮಹಿಳೆಯರು

ಉಡುಪಿ : ಇನ್ಮುಂದೆ ನೀವು ಬಸ್ ಗಳಲ್ಲಿ ಸಂಚಾರ ಮಾಡುವ ವೇಳೆಯಲ್ಲಿ ಎಚ್ಚರವಾಗಿರಬೇಕು. ಅರೆ ಕ್ಷಣ ಯಾಮಾರಿದ್ರೂ ಕೂಡ ನಿಮ್ಮ ಬಳಿಯಿರುವ ಬೆಲೆಬಾಳುವ ವಸ್ತುಗಳು ಕಳ್ಳರ ಪಾಲಾಗೋದು ಗ್ಯಾರಂಟಿ. ಪ್ರಯಾಣಿಕರ ಸೋಗಿನಲ್ಲಿ ಕಳವು ಮಾಡುವ ಮಹಿಳೆಯರ ತಂಡವೊಂದು ಉಡುಪಿಯಲ್ಲಿ ಸಕ್ರೀಯವಾಗಿದೆ.

ಹೌದು, ಬೆಂಗಳೂರಿನಿಂದ ಬಂದಿದ್ದ ಅರ್ಚನಾ ರಾವ್ ಎಂಬವರು ಕುಂಜಿಬೆಟ್ಟುವಿಗೆ ಸಿಟಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ರು. ಕಡಿಯಾಳಿಯಲ್ಲಿ ಮೂವರು ಮಹಿಳೆಯರು ಬಸ್ ಹತ್ತಿದ್ರು. ಮಹಿಳೆಯರ ಬಳಿಯಲ್ಲಿದ್ದ ಮಗುವನ್ನು ಅರ್ಚನಾ ರಾವ್ ಅವರು ತೊಡೆಯ ಮೇಲೆ ಕೂರಿಸಿ ಕೊಂಡಿದ್ದಾರೆ. ಈ ವೇಳೆಯಲ್ಲಿ ಮಹಿಳೆಯರು ಅರ್ಚನಾ ರಾವ್ ಅವರ ಬ್ಯಾಗಿನಲ್ಲಿದ್ದ ಪರ್ಸ್ ಎಗರಿಸಿದ್ದಾರೆ. ಬಸ್ಸಿನಿಂದ ಇಳಿದು ಬ್ಯಾಗ್ ಚೆಕ್ ಮಾಡಿದಾಗ ಅದರಲ್ಲಿ ಪರ್ಸ್ ಇರಲಿಲ್ಲ.

ಅಲ್ಲದೇ ಪರ್ಸ್ ನಲ್ಲಿದ್ದ 5 ಸಾವಿರ ರೂಪಾಯಿ ನಗದು, 4 ಎಟಿಎಂ ಕಾರ್ಡ್, ದಾಖಲೆ ಪತ್ರಗಳು ಕಳವಾಗಿತ್ತು. ಭಯಗೊಂಡು ಮೊಬೈಲ್ ತೆಗೆದು ನೋಡಿದ್ರೆ ಬ್ಯಾಂಕ್ ಖಾತೆಯಿಂದ 25 ಸಾವಿರ ರೂಪಾಯಿ ವಿಥ್ ಡ್ರಾ ಆಗಿರುವ ಮೆಸೇಜ್ ಬಂದಿದೆ.

ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಗೆ ಅರ್ಚನಾ ರಾವ್ ದೂರು ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

Comments are closed.