ರಾಜ್ಯದಲ್ಲಿಂದು ಸೆಂಚುರಿ ಶಾಕ್ ಕೊಟ್ಟ ಕೊರೊನಾ : ಚಿತ್ರದುರ್ಗ 20, ಉಡುಪಿ 3, ದ.ಕ. 3 ಮಂದಿಗೆ ಸೋಂಕು

0

ಬೆಂಗಳೂರು : ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿ ಮತ್ತೆ ಸೆಂಚುರಿ ಬಾರಿಸಿದೆ. ಚಿತ್ರದುರ್ಗ ಜಿಲ್ಲೆಗೆ ಕೊರೊನಾ ಶಾಕ್ ಕೊಟ್ಟಿದ್ದು, ಇಂದು ಒಂದೇ ದಿನ 20 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದರೆ, ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಮೂರು ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 2,282ಕ್ಕೆ ಏರಿಕೆಯಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ 20 ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದರೆ, ಯಾದಗಿರಿ 14, ಬೆಳಗಾವಿ 13, ಹಾಸನ 13, ದಾವಣಗೆರೆ 11, ಬೀದರ್ 10, ವಿಜಯಪುರ 5, ದಕ್ಷಿಣ ಕನ್ನಡ 3, ಉತ್ತರ ಕನ್ನಡ 3, ಉಡುಪಿ 3, ಬೆಂಗಳೂರು 2, ಕೋಲಾರ 2, ಬಳ್ಳಾರಿ 1, ಕೊಪ್ಪಳ 1, ಬಾಗಲಕೋಟೆ 1 ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಓರ್ವರಿಗೆ ಸೋಂಕು ದೃಢಪಟ್ಟಿದೆ.

Leave A Reply

Your email address will not be published.