Aamir Khan : ಕಳೆದ ವರ್ಷ ಚಿತ್ರರಂಗ ತೊರೆಯುವ ತೀರ್ಮಾನ ಮಾಡಿದ್ದೆ! ಮನದಾಳದ ಮಾತು ಬಿಚ್ಚಿಟ್ಟ ಬಾಲಿವುಡ್‌ ನಟ ಅಮೀರ್‌ ಖಾನ್‌

ಅಮೀರ್ ಖಾನ್(Aamir Khan)-ಕಿರಣ್ ರಾವ್ ಡೈವರ್ಸ್ ಮೂಲಕ ಇಡೀ ಬಾಲಿವುಡ್ ಗೆ ಶಾಕ್ ನೀಡಿದ ದಂಪತಿ. ದಶಕಗಳ ಕಾಲ ಮಾಡೆಲ್ ರೀತಿ ಇದ್ದ ಈ ಇಬ್ಬರೂ ಇದ್ದಕ್ಕಿದ್ದಂತೆ ಕಳೆದ ವರ್ಷ ಜುಲೈನಲ್ಲಿ ವಿಚ್ಛೇದನ ನೀಡಿದ್ದು ಏಕೆ ಅನ್ನೋದು ಈಗಲೂ ಮಿಲಿಯನ್ ಡಾಲರ್ ಪ್ರಶ್ನೆಯೇ ಆಗಿದೆ. ನಾವಿಬ್ಬರು ಬೇರೆ ಆಗಿರಬಹುದು. ಆದರೆ, ನಮ್ಮ ಗೆಳೆತನಕ್ಕೆ ಕೊನೆ ಇಲ್ಲ ಅಂತ ಖಾನ್ ದಂಪತಿ ಘೋಷಣೆ ಮಾಡಿದ್ದು ಅಲ್ಲದೇ, ಆಗಾಗ ಪಾರ್ಟಿ, ಸಭೆಗಳಲ್ಲಿ ಕಾಣಿಸಿಕೊಳ್ಳುವುದನ್ನು ಮುಂದುವರಿಸಿದ್ದಾರೆ.

ಇಂತಿಪ್ಪ ಅಮೀರ್ ಖಾನ್ ಹಣ, ಆಸ್ತಿ, ಹೆಸರು ಎಲ್ಲವೂ ಹರಿದು ಬರುತ್ತಿರುವಾಗಲೇ ಸಿನಿಮಾ ರಂಗದಿಂದ ದೂರ ನಿಲ್ಲಲ್ಲು ನಿರ್ಧರಿಸಿದ್ದರು ಅಂದರೆ ನೀವು ನಂಬಲೇಬೇಕು. ಕಿರಣ್ ರಾವ್ ಅವರಿಗೆ ವಿಚ್ಛೇದನ ನೀಡಿ, ಬೇಸತ್ತು ಈ ನಿರ್ಧಾರ ಮಾಡಿದ್ದರು ಅಂದು ಕೊಳ್ಳಬೇಡಿ. ಲಾಲ್ ಸಿಂಗ್ ಛಡ್ಡಾ ಸಿನಿಮಾ ಚಿತ್ರೀಕರಣ ಮುಗಿದ ಮೇಲೆ, ಕೊರೋನ ದಟ್ಟವಾಗಿ ಹಬ್ಬಿತ್ತಲ್ಲ ಈ ಸಂದರ್ಭದಲ್ಲಿ ಒಂದು ದಿನ ಕಿರಣ್ ರಾವ್ ಮತ್ತು ಮಕ್ಕಳನ್ನು ಮುಂದೆ ಕೂಡ್ರಿಸಿಕೊಂಡು ಅಮೀರ್ ಖಾನ್, ‘ಇನ್ನು ಮುಂದೆ ನಾನು ಯಾವುದೇ ಸಿನಿಮಾದಲ್ಲಿ ನಟಿಸೋಲ್ಲ. ನಿವೃತ್ತಿ ಘೋಷಿಸುತ್ತೇನೆ. ಒಂದೋ ನಾನು ಸಿನಿಮಾ ನಿರ್ಮಾಣ ಮಾಡಬೇಕು ಇಲ್ಲವೇ ನಟನೆ ಮಾಡ್ಕೊಂತಾ ಹೋಗಬೇಕು. ಎರಡೆರಡು ಕೆಲಸ ಒಬ್ಬನೇ ಮಾಡೋಕೆ ಆಗ್ತಿಲ್ಲ. ನನ್ನ ಸಮಯವನ್ನು ಕುಟುಂಬದ ಜೊತೆ ಕಳೆಯಬೇಕು. ಯಾವಾಗಲು ಇದೇ ಮಾಡಿಕೊಂಡಿರೋದಕ್ಕೆ ಆಗೋಲ್ಲ’ ಅಂತ ಮಾನಸಿಕ ಒತ್ತಡದಲ್ಲಿ ಹೇಳಿದರಂತೆ. ತಕ್ಷಣ ಹೆಂಡತಿ ಕಿರಣ್ ರಾವ್ ಕಣ್ಣಲ್ಲಿ ನೀರು ಬಂತಂತೆ. ಕುಟುಂಬದಲ್ಲಿ ಕೂಡ ಇದು ತಪ್ಪು ಅಂತ ಕೂಡ ಹೇಳಲಿಲ್ಲವಂತೆ. ಇದನ್ನು ಸ್ವತಃ ಅಮೀರ್ ಖಾನ್ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.

‘ನನ್ನ ಈ ತೀರ್ಮಾನ ಉದ್ದೇಶಪೂರ್ವಕಾಗಿಯೇ ಇತ್ತು. ಆದರೆ, ಈ ಬಗ್ಗೆ ಹೇಳಿದಾಗ ಕುಟುಂಬದವರಿಗೆ ಶಾಕ್ ಆಯಿತಾದರೂ, ಯಾರೂ ಪ್ರತ್ಯುತ್ತರ ಕೊಡಲಿಲ್ಲ. ಆ ನಂತರ, ಈ ವಿಚಾರವನ್ನು ಅಭಿಮಾನಿಗಳಿಗೆ ಹೇಳಬೇಕು ಅಂತ ತೀರ್ಮಾನ ಮಾಡಿದೆ. ತಕ್ಷಣ ನನಗೆ ಹೊಳೆಯಿತು. ಈ ಸಂದರ್ಭದಲ್ಲಿ ನಿವೃತ್ತಿ ಘೋಷಣೆ ಮಾಡಿದರೂ, ಇವನು ಲಾಲ್ ಸಿಂಗ್ ಛಡ್ಡಾ ಸಿನಿಮಾ ಪ್ರಮೋಷನ್ ಗಾಗಿ ಈ ರೀತಿ ಮಾಡ್ತಾ ಇದ್ದಾನೆ ಅಂತ ಜನ ಭಾವಿಸಿಬಿಡುತ್ತಾರೆ ಅಂತ ಸುಮ್ಮನಾದೆ’ ಎಂದು ಅಮೀರ್ ನೆನಪಿಸಿಕೊಳ್ಳುತ್ತಾರೆ.

ಇದನ್ನೂ ಓದಿ: Kamal Hassan : ಕಮಲ್ ಸಿನಿಮಾ ಮುಗೀತು! ನಾಯಕಿ ಯಾರು ಅನ್ನೋದು ಗುಪ್ತ್ ಗುಪ್ತ್…

ಅಮೀರ್ ಖಾನ್ ಇಷ್ಟಕ್ಕೆ ಸುಮ್ಮನಾಗಲಿಲ್ಲ. ಲಾಲ್ ಸಿಂಗ್ ಛಡ್ಡಾ ಬಿಡುಗಡೆಯಾಗಲಿ. ಆಮೇಲೆ ಎರಡು ಮೂರು ವರ್ಷ ಸುಮ್ಮನಿದ್ದು ನಿವೃತ್ತಿ ಘೋಷಣೆ ಮಾಡಿದರಾಯಿತು. ಆಗ ತೀರ್ಮಾನ ಇಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ ಅಂತ ಸಮಾಧಾನ ಮಾಡಿಕೊಂಡರು. ಹೀಗೆ ಕೊರೋನದ ಎರಡು ತಿಂಗಳು ಕಳೆಯಿತಂತೆ. ಆಮೇಲೆ ಏನಾಯಿತು ಅಂತ ಅವರೇ ಹೇಳಿಕೊಂಡಿದ್ದಾರೆ.

‘ಒಂದು ದಿನ ನನ್ನ ಮಗಳು, ಅಪ್ಪಾ ನೀನು ಇಂಥ ಆತುರ ನಿರ್ಧಾರ ತಗೊಳ್ತಾ ಇದ್ಯಾ ಅನ್ನೋದನ್ನು ನಂಬಕ್ಕಾಗಿಲ್ಲ. ಬದುಕಲ್ಲಿ ಸಮತೋಲನ ಕಂಡುಕೊಳ್ಳುವುದರಿಂದ ಖುಷಿಯಾಗಿರಬಹುದು ಅಂದಳಂತೆ. ಆಗ ನನ್ನ ಮನದಲ್ಲಿದ್ದ ಸಿನಿಮಾರಂಗ ತೊರೆಯುವ ನಿರ್ಧಾರ ಕೈ ಬಿಟ್ಟೆ. ನನ್ನ ಹೆಂಡತಿ ಕಿರಣ್ ರಾವ್ ಮತ್ತು ಮಕ್ಕಳು ನನ್ನ ಕೂಡಿಸಿಕೊಂಡು, ಅಳುತ್ತಾ, ನಿಮ್ಮದು ತಪ್ಪು ನಿರ್ಧಾರ. ನಿನ್ನ ನೋಡಿದಾಗೆಲ್ಲಾ ನಿನ್ನೊಳಗೆ ಸಾವಿರಾರು ಸಿನಿಮಾಗಳು ಇರೋದನ್ನು ಕಾಣುತ್ತಿರುತ್ತದೆ. ಹೀಗಿರುವಾಗ, ನಿನ್ನ ಈ ನಿರ್ಧಾರ ಉದ್ದೇಶ ಮಾತ್ರ ನನಗೆ ಅರ್ಥವಾಗುತ್ತಿಲ್ಲ. ಈ ಎರಡು ವರ್ಷದಲ್ಲಿ ಏನು ಬೇಕಾದರು ಆಗಬಹುದು ಅಂತೆಲ್ಲ ಸಮಾಧಾನ ಮಾಡಿದರು’ ಎಂದು ಅಮೀರ್ ಹೇಳಿಕೊಂಡಿದ್ದಾರೆ.

ಅಮೀರ್ ಚಿತ್ರರಂಗ ತೊರೆದ ಮೇಲೆ ಮುಂದೇನು ಅನ್ನೋ ಪ್ರಶ್ನೆ ಎದುರಾಗಬಹುದು. ಅದಕ್ಕಾಗಿ, ಮಗಳು ಇರಾಕಿರಣ್ ಜೊತೆ ಸೇರಿ ಕೆಲಸ ಮಾಡುವ ನಿರ್ಧಾರ ಮಾಡಿದ್ದರಂತೆ. ಅಮೀರ್ ಖಾನ್ ಅವರ ಲಾಲ್ ಸಿಂಗ್ ಛಡ್ಡಾ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗುತ್ತಿದೆ. ಮೂರುಸಲ ಬಿಡುಗಡೆಯನ್ನು ಮುಂದೂಡಿರುವ ಚಿತ್ರ, ಆಗಸ್ಟ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

ಇದನ್ನೂ ಓದಿ: Vikrant Rona Kichcha Sudeep : ಇಂಗ್ಲೀಷ್ ನಲ್ಲೂ ಅಬ್ಬರಿಸಿದ ಕಿಚ್ಚ ಸುದೀಪ್ : ವಿಕ್ರಾಂತ್ ರೋಣ ಟೀಂನಿಂದ ಬಂತು ಅಪ್ಡೇಟ್

(Aamir Khan Bollywood actor had decided to quit acting says himself)

Comments are closed.