Nagarjuna Slams Media : ಈ ಕಾರಣಕ್ಕೆ ಮಾಧ್ಯಮಗಳ ಮೇಲೆ ಕೆಂಡಾಮಂಡಲರಾದ ಸೂಪರ್​ ಸ್ಟಾರ್​ ನಾಗಾರ್ಜುನ

Nagarjuna Slams Media : ನಟಿ ಸಮಂತಾ ರುತ್​ ಪ್ರಭು ಹಾಗೂ ನಟ ನಾಗಚೈತನ್ಯ ತಮ್ಮ ವೈವಾಹಿಕ ಜೀವನದಿಂದ ಬೇರ್ಪಟ್ಟ ಬಳಿಕ ಇಂಟರ್ನೆಟ್​ನಲ್ಲಿ ಇವರ ವಿವಾಹ ವಿಚ್ಚೇದನಕ್ಕೆ ಸಂಭದಿಸಿದ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ವದಂತಿಗಳ ಕುರಿತು ನಟ ನಾಗ ಚೈತನ್ಯ ತಂದೆ ಸೂಪರ್​ ಸ್ಟಾರ್​ ನಾಗಾರ್ಜುನ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇಂಟರ್ನೆಟ್​ನಲ್ಲಿ ಹರಿದಾಡುತ್ತಿರುವ ವದಂತಿಗಳ ಪ್ರಕಾರ ವಿವಾಹವನ್ನು ಮುರಿದುಕೊಳ್ಳಲು ಒತ್ತಡ ಹೇರಿದ್ದೇ ನಟಿ ಸಮಂತಾ ಪ್ರಭು. ನಾಗಚೈತನ್ಯ ವಿಚ್ಚೇದನದ ಕಡೆಗೆ ಮೊದಲು ಮನಸ್ಸು ಮಾಡಿರಲಿಲ್ಲ. ಅಲ್ಲದೇ ನಾಗಾರ್ಜುನ ಕೂಡ ಈ ವಿಚಾರವಾಗಿ ಮಾಜಿ ದಂಪತಿ ಜೊತೆಯಲ್ಲಿ ಸಂವಾದ ನಡೆಸಿದ್ದರು. ಆದರೆ ಸಮಂತಾ ವಿಚ್ಚೇದನಕ್ಕೆ ಪಟ್ಟು ಹಿಡಿದಿದ್ದರು ಎಂದು ತೆಲಗು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಎಲ್ಲಾ ವದಂತಿಗಳಿಗೆ ಟ್ವಿಟರ್​ ಮೂಲಕ ಹಿರಿಯ ನಟ ನಾರ್ಗಾಜುನ ತೆರೆ ಎಳೆದಿದ್ದಾರೆ.


ವದಂತಿಗಳನ್ನು ಹರಡದಂತೆ ಮಾಧ್ಯಮಗಳಿಗೆ ವರದಿ ಮಾಡಿದ ನಟ ನಾಗಾರ್ಜುನ , ಸಾಮಾಜಿಕ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್​ ಮಾಧ್ಯಮಗಳಲ್ಲಿ ಪ್ರಸಾರವಾದ ಈ ಸುದ್ದಿ ಸಂಪೂರ್ಣ ಸತ್ಯಕ್ಕೆ ದೂರವಾಗಿದೆ. ಅಲ್ಲದೇ ಇದು ಅಸಂಬದ್ಧ ಕೂಡ ಹೌದು. ದಯವಿಟ್ಟು ಇಂತಹ ಸುದ್ದಿಗಳನ್ನು ಪೋಸ್ಟ್​ ಮಾಡಬೇಡಿ ಎಂದು ಮಾಧ್ಯಮ ಮಿತ್ರರಲ್ಲಿ ಮನವಿ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಸಮಂತಾ ಹಾಗೂ ನಾಗಚೈತನ್ಯ ತಮ್ಮ ವಿವಾಹ ವಿಚ್ಛೇದನದ ಬಗ್ಗೆ ಘೋಷಣೆ ಮಾಡಿದ ದಿನದಂದು ಟ್ವೀಟ್​ ಮಾಡಿದ್ದ ನಟ ನಾಗಾರ್ಜುನ, ಭಾರವಾದ ಹೃದಯದಿಂದ ನಾನು ಇದನ್ನು ಹೇಳುತ್ತಿದ್ದೇನೆ. ಸ್ಯಾಮ್​ ಹಾಗೂ ಚಯ್​ ಜೀವನದಲ್ಲಿ ನಡೆದದ್ದು ತುಂಬಾ ದುರಾದೃಷ್ಟಕರವಾಗಿದೆ. ಆದರೆ ಪತಿ – ಪತ್ನಿ ನಡುವೆ ನಡೆಯುವ ವಿಚಾರ ತೀರಾ ವೈಯಕ್ತಿಕವಾದದ್ದು. ನಮ್ಮ ಕುಟುಂಬವು ಸ್ಯಾಮ್​ ಜೊತೆ ಕಳೆದ ಎಲ್ಲಾ ಕ್ಷಣಗಳನ್ನು ಎಂದಿಗೂ ನೆನಪಿಡುತ್ತದೆ. ಆಕೆ ಎಂದಿಗೂ ನಮಗೆ ಪ್ರಿಯಳು..! ದೇವರು ಈ ಇಬ್ಬರಿಗೂ ಶಕ್ತಿ ನೀಡಲಿ ಎಂದು ಬರೆದುಕೊಂಡಿದ್ದರು.

‘Absolute Nonsense’: Nagarjuna Slams Media Who Reported His Comment on Naga Chaitanya, Samantha’s Separation

ಇದನ್ನು ಓದಿ : CM Ibrahim persuasion : ಆಪ್ತನ ಬಂಡಾಯಕ್ಕೆ‌ ಬೆದರಿದ ಸಿದ್ದು: ಇಬ್ರಾಹಿಂ ಮನವೊಲಿಕೆಗೆ ರಿಜ್ವಾನ್ ಮೊರೆ ಹೋದ ಸಿದ್ಧರಾಮಯ್ಯ

ಇದನ್ನೂ ಓದಿ : BJP vs Siddaramaiah : ಸಿದ್ಧರಾಮಯ್ಯರನ್ನು ವಲಸಿಗರಾಮಯ್ಯ ಎಂದ ಬಿಜೆಪಿ : ಮತ್ತೆ ಶುರುವಾಯ್ತು ಟ್ವೀಟ್ ವಾರ್

Comments are closed.