actor diganth injured : ನಟ ದಿಗಂತ್​ ಕತ್ತಿಗೆ ಬಲವಾದ ಏಟು : ಮಣಿಪಾಲ ಆಸ್ಪತ್ರೆಯತ್ತ ಧಾವಿಸಿದ ಯೋಗರಾಜ್​ ಭಟ್​

ಬೆಂಗಳೂರು : actor diganth injured : ಸ್ಯಾಂಡಲ್​ವುಡ್​ನ ದೂದ್​ಪೇಡ ದಿಗಂತ್​​ ಗೋವಾದಲ್ಲಿ ಮಸ್ತಿ ಮಾಡಲು ಹೋಗಿ ಅವಘಡ ಮಾಡಿಕೊಂಡಿದ್ದಾರೆ. ಸಮ್ಮರ್​ ಸಾಲ್ಟ್​​​​​ ಹೊಡೆಯುವ ವೇಳೆಯಲ್ಲಿ ನಟ ದಿಗಂತ್​ ಕತ್ತಿಗೆ ಬಲವಾದ ಪೆಟ್ಟು ಬಿದ್ದಿದೆ. ಕುಟುಂಬಸ್ಥರ ಜೊತೆಯಲ್ಲಿ ಗೋವಾ ಬೀಚ್​​ನಲ್ಲಿ ಜಾಲಿ ಮಾಡುತ್ತಿದ್ದ ನಟ ದಿಗಂತ್​ ಈ ಅಪಘಾತದ ಬಳಿಕ ಆಸ್ಪತ್ರೆ ಸೇರಿದ್ದಾರೆ.


ಗೋವಾದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ನಟ ದಿಗಂತ್ ಆಗಮಿಸಲಿದ್ದಾರೆ. ಸದಾ ಸೈಕ್ಲಿಂಗ್​, ಟ್ರೆಕ್ಕಿಂಗ್​ ಎಂದುಕೊಂಡು ಡಿಫರೆಂಟ್​ ಆಗಿ ಏನಾದರೊಂದು ಮಾಡುತ್ತಿದ್ದ ನಟ ದಿಗಂತ್​​ರಿಗೆ ಅಪಘಾತ ನಡೆದ ಸುದ್ದಿ ಕೇಳಿ ಸ್ಯಾಂಡಲ್​ವುಡ್​ನ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ನಟ ದಿಗಂತ್​ಗೆ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿರುವ ಯೋಗರಾಜ್​ ಭಟ್​ ಕೂಡ ಈ ಘಟನೆ ಕುರಿತು ಪ್ರತಿಕ್ರಿಯಿಸಿದ್ದಾರೆ .


ಈ ವಿಚಾರವಾಗಿ ಮಾತನಾಡಿರುವ ನಿರ್ದೇಶಕ ಯೋಗರಾಜ್​ ಭಟ್​, ಸಮುದ್ರ ತೀರದಲ್ಲಿ ಪಲ್ಟಿ ಹೊಡೆಯಲು ಹೋಗಿ ನಟ ದಿಗಂತ್​ ಈ ಏಟು ಮಾಡಿಕೊಂಡಿದ್ದಾರೆ. ಗಾಳಿಪಟ 2 ಸಿನಿಮಾ ರಿಲೀಸ್​ ಹಂತದಲ್ಲಿರುವಾಗ ನಟ ದಿಗಂತ್​ಗೆ ಈ ರೀತಿ ತೊಂದರೆ ಉಂಟಾಗಿರುವುದು ನಿಜಕ್ಕೂ ನನಗೆ ನೋವು ತಂದಿದೆ. ನಾನು ಈಗಲೇ ಮಣಿಪಾಲ ಆಸ್ಪತ್ರೆಗೆ ತೆರಳುತ್ತೇನೆ ಎಂದು ಹೇಳಿದ್ದಾರೆ.


ನಟ ದಿಗಂತ್​ ಗೋವಾದಲ್ಲಿ ಸಮ್ಮರ್​ ಶಾಟ್​ ಹೊಡೆಯಲು ಹೋಗಿ ಕತ್ತಿಗೆ ಏಟು ಮಾಡಿಕೊಂಡಿದ್ದಾರೆಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಆದರೆ ನಟ ದಿಗಂತ್​​ ಪ್ರಸ್ತುತ ಯಾವ ಸ್ಥಿತಿಯಲ್ಲಿದ್ದಾರೆ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.

ಚಂದನವನದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ದಿಗಂತ್​ ಗಾಳಿಪಟ, ಲೈಫು ಇಷ್ಟೇನೆ, ಪಂಚರಂಗಿ ಸಿನಿಮಾಗಳ ಮೂಲಕ ಹೆಚ್ಚು ಖ್ಯಾತಿಯನ್ನು ಗಳಿಸಿದ್ದಾರೆ. ಚಂದನವನದ ದೂದ್​ ಪೇಡಾ ಅಂತಲೇ ಖ್ಯಾತಿ ಪಡೆದಿರುವ ನಟ ದಿಗಂತ್​​ರ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ ಕೆಲವು ದಿನಗಳ ಹಿಂದೆಯಷ್ಟೇ ತೆರೆ ಕಂಡಿದೆ. ಪ್ರಸ್ತುತ ನಟ ದಿಗಂತ್​ ಗಾಳಿಪಟ 2 ಸಿನಿಮಾದ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದರು.


ನಟ ದಿಗಂತ ಕೆಲವು ವರ್ಷಗಳ ಹಿಂದೆ ವಿದೇಶದಲ್ಲಿ ಸಿನಿಮಾ ಶೂಟಿಂಗ್​ನಲ್ಲಿ ಭಾಗಿಯಾಗಿದ್ದ ವೇಳೆ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದರು. ಸ್ವತಃ ದಿಗಂತ್​ರೇ ಈ ಅವಘಡದ ಬಗ್ಗೆ ಮಾಹಿತಿಯನ್ನು ನೀಡಿದ್ದರು.

ಇದನ್ನು ಓದಿ : Ayodhya Ram Mandir : ರಾಮಮಂದಿರ ನಿರ್ಮಾಣ ಸಮಿತಿಗೆ ಶಾಕ್ : ದೇಣಿಗೆ ಮೊತ್ತದ 22 ಕೋಟಿ ರೂ. ಚೆಕ್ ತಿರಸ್ಕೃತ

ಇದನ್ನೂ ಓದಿ : diganth : ಕಣ್ಣಿಗೆ ಏಟು… ಕತ್ತಿಗೆ ಪೆಟ್ಟು..ದಿಗಂತ್​​ ಲೈಫಲ್ಲಿ ಸಾಲು ಸಾಲು ಸಂಕಷ್ಟ..!

actor diganth injured in goa director yogaraj bhat reaction gaalipata-2

Comments are closed.