ಬೆಂಗಳೂರು : karnataka ratna award to puneeth : ಚಂದನವನದ ಹೆಸರಾಂತ ನಟ ಪುನೀತ್ ರಾಜ್ಕುಮಾರ್ ನಮ್ಮನಗಲಿ ವರ್ಷ ಉರುಳುತ್ತಾ ಬಂದಿದೆ. ಆದರೂ ಸಹ ಅಪ್ಪುವಿನ ನೆನಪು ಮಾತ್ರ ಅಜರಾಮರವಾಗಿದೆ. ಪುನೀತ್ ರಾಜ್ಕುಮಾರ್ ಮರಣದ ಬಳಿಕ ರಾಜ್ಯ ಸರ್ಕಾರವು ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು. ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಯಾವ ದಿನದಂದು ಪುನೀತ್ ಕುಟುಂಬಕ್ಕೆ ಈ ಪ್ರಶಸ್ತಿಯನ್ನು ಹಸ್ತಾಂತರ ಮಾಡಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಸಾಧಕರಿಗೆ ನೀಡಲಾಗುವ ರಾಜ್ಯ ಮಟ್ಟದ ಅತ್ಯುನ್ನತ ಪ್ರಶಸ್ತಿ ಇದಾಗಿದೆ. ಈಗಾಗಲೇ ರಾಜ್ಯದಲ್ಲಿ 9 ಮಂದಿ ಸಾಧಕರು ಕರ್ನಾಟಕ ರತ್ನ ಗೌರವಕ್ಕೆ ಪಾತ್ರರಾಗಿದ್ದಾರೆ. ಪುನೀತ್ ರಾಜ್ಕುಮಾರ್ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾದ 10ನೇ ವ್ಯಕ್ತಿಯಾಗಿದ್ದಾರೆ. ಇಂದು ತೋಟಗಾರಿಕಾ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ವತಿಯಿಂದ ಲಾಲ್ಬಾಗ್ನ ಗಾಜಿನ ಮನೆಯಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಕರ್ನಾಟಕ ರಾಜ್ಯೋತ್ಸವದಂದು ಪುನೀತ್ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಈ ಪ್ರಶಸ್ತಿ ಪ್ರದಾನಕ್ಕೂ ಮುನ್ನ ಸಿದ್ಧತೆಗೆಂದು ರಚಿಸಲಾಗುವ ಸಮಿತಿಯಲ್ಲಿ ಪುನೀತ್ ಕುಟುಂಬದ ಸದಸ್ಯರಿಗೂ ಸ್ಥಾನ ನೀಡಲಾಗುತ್ತದೆ. ಪುನೀತ್ ರಾಜ್ಕುಮಾರ್ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲು ನಮಗೂ ಹೆಮ್ಮೆಯಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಲಾಲ್ಬಾಗ್ನಲ್ಲಿ ಆರಂಭಗೊಂಡಿರುವ ಫಲಪುಷ್ಪ ಪ್ರದರ್ಶನದಲ್ಲಿಯೂ ಡಾ.ರಾಜ್ ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ಗೆ ವಿಶೇಷ ಗೌರವವನ್ನು ಸಲ್ಲಿಸಲಾಗಿದೆ. ಇಂದು ನಡೆದ ಫಲಪುಷ್ಪ ಉದ್ಘಾಟನಾ ಸಮಾರಂಬದಲ್ಲಿ ಶಿವಣ್ಣ ಸೇರಿದಂತೆ ಶಕ್ತಿಧಾಮದ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಇದೇ ವೇಳೆ ಮಾತನಾಡಿದ ನಟ ಶಿವಣ್ಣ, ಅಪ್ಪ – ಅಮ್ಮ ಹಾಗೂ ಅಪ್ಪು ಸದಾ ಜೊತೆಯಲ್ಲಿಯೇ ಇರುತ್ತಾರೆ. ಪುನೀತ್ ಸಾಧನೆ ಹಾಗೂ ಆತನ ಜೀವನ ಹೇಳಿಕೆಗೂ ಮೀರಿದ್ದಾಗಿದೆ. ಪುಷ್ಪಗಳಂತೆಯೇ ಅಪ್ಪು ಎಂದಿಗೂ ಫ್ರೆಶ್ ಆಗಿ ಇರುತ್ತಾರೆ ಎಂದು ಹೇಳಿದರು .
ಇದನ್ನು ಓದಿ : 108 tender Scam : ಐಎಎಸ್ ಅಧಿಕಾರಿ ಪಂಕಜ್ ಪಾಂಡೆ ವಿರುದ್ಧ ತನಿಖೆಗೆ ಹೈಕೋರ್ಟ್ ಸೂಚನೆ
ಇದನ್ನೂ ಓದಿ : Paytm Down : ಪೇಟಿಯಂ ಆ್ಯಪ್, ವೆಬ್ಸೈಟ್ ಡೌನ್ : ಗ್ರಾಹಕರ ಪರದಾಟ
cm basavaraj bommai reveals posthumous karnataka ratna award to puneeth rajkumar on november 1
Comments are closed.