ಬಿಡುವಿಲ್ಲದ ಶೂಟಿಂಗ್ ಮಧ್ಯೆಯೂ ಕರ್ತವ್ಯ ಮರೆಯದ ಧ್ರುವ್ರ ಸರ್ಜಾ….! ಮೈದುನ ನೋಡಿ ಕಣ್ಣಿರಿಟ್ಟ ಮೇಘನಾ ಸರ್ಜಾ…!

ಚಿರಂಜೀವಿ ಸರ್ಜಾ... ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿ ಆರು ತಿಂಗಳೇ ಕಳೆದಿದ್ದರೂ ಅವರ ಕುಟುಂಬ ಇನ್ನೂ ಈ ದುಃಖದಿಂದ ಹೊರಬಂದಿಲ್ಲ. ಅಷ್ಟೇ ಅಲ್ಲ ತನ್ನ ಬಿಡುವಿಲ್ಲದ ಶೂಟಿಂಗ್ ಮಧ್ಯೆಯೂ ಧ್ರುವ ಸರ್ಜಾ ತಮ್ಮ ಕರ್ತವ್ಯ ಮರೆತಿಲ್ಲ. ಮೈದುನನ ಈ ಅಭಿಮಾನ ಕಂಡು ಮೇಘನಾ ರಾಜ್ ಕಣ್ಣೀರಿಟ್ಟಿದ್ದಾರೆ.

ಹೌದು, ಧ್ರುವಸರ್ಜಾ ಸಾಲು ಸಾಲು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಪೊಗರು ಸಿನಿಮಾ ರಿಲೀಸ್ ಗೆ ಸಿದ್ಧವಾಗಿದ್ದು, ದುಬಾರಿ ಸಿನಿಮಾ ಶೂಟಿಂಗ್ ಆರಂಭವಾಗಿದೆ. ಆದರೇ ಈ ಬ್ಯುಸಿ ಶೆಡ್ಯೂಲ್ ನಲ್ಲೂ ಧ್ರುವಸರ್ಜಾ ಅಣ್ಣನ ಸಮಾಧಿ ನಿರ್ಮಾಣದ ಕೆಲಸ ಮರೆತಿಲ್ಲ. ಆನ್ಯಿವರ್ಸರಿ ಹಿನ್ನೆಲೆಯಲ್ಲಿ ಗೋವಾಕ್ಕೆ ತೆರಳಿದ್ದ ಧ್ರುವ ಸರ್ಜಾ ಹಾಗೂ ಪ್ರೇರಣಾ ಮನೆಗೆ ವಾಪಸ ಆಗುತ್ತಲೇ ಚಿರು ಸಮಾಧಿ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ.

ಚಿರು ನಿಧನದ ವೇಳೆ ಎಲ್ಲಿ ಅಂತ್ಯಸಂಸ್ಕಾರ ಮಾಡಬೇಕೆಂಬ ಚರ್ಚೆ ನಡೆದ ವೇಳೆ ಧ್ರುವ ಸರ್ಜಾ ಅಣ್ಣ ಸದಾ ನನ್ನೊಂದಿಗೆ ಇರಬೇಕು. ಹಾಗಾಗಿ ಚಿರು ಅಂತ್ಯಸಂಸ್ಕಾರವನ್ನು ತನ್ನ ಫಾರಂಹೌಸ್ ನಲ್ಲೇ ನಡೆಸಬೇಕೆಂದು ಒತ್ತಾಯಿಸಿದ್ದರು. ಧ್ರುವ ಸರ್ಜಾ ಒತ್ತಾಯದಂತೆ ಚಿರು ಅಂತ್ಯಸಂಸ್ಕಾರ ಅವರ ಫಾರ್ಮ್ ಹೌಸ್ ನಲ್ಲೇ ನಡೆದಿದೆ. ಇದೀಗ ಅಂತ್ಯಸಂಸ್ಕಾರದ ಬಳಿಕ ಸಮಾಧಿ ನಿರ್ಮಾಣಕ್ಕೆ ಧ್ರುವ ಸರ್ಜಾ ಹಾಗೂ ಪ್ರೇರಣಾ ಸ್ವತಃ ಕುಳಿತು ಪೂಜೆ ಸಲ್ಲಿಸಿದ್ದಾರೆ.

ಇನ್ನೆರಡು ತಿಂಗಳಲ್ಲಿ ಸಮಾಧಿ ನಿರ್ಮಾಣ ಪೂರ್ಣಗೊಳ್ಳಲಿದ್ದು, ಸಮಾಧಿ ನಿರ್ಮಾಣವಾದ ಬಳಿಕ ಅಲ್ಲಿಗೆ ಮೇಘನಾ ರಾಜ್ ಭೇಟಿ ನೀಡಲಿದ್ದಾರೆ. ಕನಕಪುರ ರಸ್ತೆಯಲ್ಲಿರುವ ನೆಲಗುಳಿ ಫಾರಂಹೌಸ್ ನಲ್ಲಿ ಚಿರು ಸಮಾಧಿ ನಿರ್ಮಾಣವಾಗಲಿದೆ. ಬಾಣಂತಿಯಾಗಿರುವ ಕಾರಣಕ್ಕೆ ಮೇಘನಾರಾಜ್ ಸಮಾಧಿ ನಿರ್ಮಾಣದ ಪೂಜೆಗೆ ತೆರಳಿಲ್ಲ.

ಸಮಾಧಿ ನಿರ್ಮಾಣವಾದ ಬಳಿಕ ಮೇಘನಾ ರಾಜ್ ಹಾಗೂ ಮಗುವನ್ನು ಚಿರು ಸರ್ಜಾ ಮನೆಗೆ ಕರೆತರುವ ಶಾಸ್ತ್ರ ನಡೆಯಲಿದ್ದು, ಚಿರು ಮನೆಯಲ್ಲಿ ಅದ್ದೂರಿಯಾಗಿ ತೊಟ್ಟಿಲು ಶಾಸ್ತ್ರ ನಡೆಯಲಿದೆ. ತೊಟ್ಟಿಲು ಶಾಸ್ತ್ರದ ಬಳಿಕ ಮೇಘನಾ ರಾಜ್ ಮಗು ಸಮೇತ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಲಿದ್ದಾರೆ.

https://kannada.newsnext.live/uncle-great-gift-for-junior-chiru-dhruvsarja-brother-witnesses-love/

ಇನ್ನು ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲೂ ಅಣ್ಣ ಸಮಾಧಿ ನಿರ್ಮಾಣ ಕಾರ್ಯಕ್ಕೆ ಸಕಾಲದಲ್ಲಿ ಚಾಲನೆ ಕೊಟ್ಟ ಧ್ರುವಸರ್ಜಾ ಡೆಡಿಕೇಶನ್ ಕಂಡು ಮೇಘನಾ ಕಣ್ಣಿರಿಟ್ಟಿದ್ದು ಇಂಥ ಸಹೋದರನನ್ನು ಪಡೆಯಲು ನಾವು ಪುಣ್ಯ ಮಾಡಿದ್ವಿ ಎಂದಿದ್ದಾರೆ.

Comments are closed.