Director R Chandru : ನಟ ಕಿಚ್ಚ ಸುದೀಪ್ ಕಬ್ಜ ತೊರೆದಿಲ್ಲ! ಗಾಳಿ ಸುದ್ದಿಗೆ ಕಿವಿಗೊಡಬೇಡಿ : ನಿರ್ದೇಶಕ ಆರ್ ಚಂದ್ರು

ನಿರ್ದೇಶಕ ಆರ್. ಚಂದ್ರು (Director R Chandru) ರವರ ಕಬ್ಜ(Kabja) ಚಿತ್ರ ಆರಂಭವಾಗಿ ಸುಮಾರು ಮೂರು ವರ್ಷಗಳೇ ಕಳೆದಿವೆ. ಸಿನಿಮಾ ಆರಂಭಕ್ಕೂ ಮುನ್ನ ಸುದೀಪ್, ಉಪೇಂದ್ರ ಅವರ ಜೋಡಿಯ ಆಯ್ಕೆಯಿಂದಾಗಿಯೇ ದೊಡ್ಡ ಸುದ್ದಿಯಾಗಿತ್ತು. ನಿರೀಕ್ಷೆಗಳು ಸಿಕ್ಕಾಪಟ್ಟೆ ಏರಿದ್ದವು. ಜೋಗಿ ಪ್ರೇಮ್ ಅವರಂತೆ ಆರ್. ಚಂದ್ರು ಕೂಡ ದೊಡ್ಡ ದೊಡ್ಡ ಹೀರೋಗಳನ್ನು ಚೆನ್ನಾಗಿ ಸಂಭಾಳಿಸುತ್ತಾರೆ ಅನ್ನೋ ಮಾತೂ ಮಾತು ಕೇಳಿಬಂದು, ಕುತೂಹಲ ಗರಿಗೆದರಿತ್ತು.

ಆದರೆ, ಅಂದುಕೊಂಡಂತೆ ಕಬ್ಜ ಚಿತ್ರೀಕರಣವಾಗಲೇ ಇಲ್ಲ. ಇದು ಗಳಿಸಿದ ಪ್ರಚಾರದ ವೇಗಕ್ಕೆ ತಕ್ಕಂತೆ ಚಂದ್ರು ಸಿನಿಮಾ ಪೂರೈಸಲಿಲ್ಲ ಅನ್ನೋ ಮಾತೂ ಇದೆ. ಉಪೇಂದ್ರ, ಸುದೀಪ್ ಅಭಿಮಾನಿಗಳಿಗೆ ಇದರಿಂದ ಬೇಸರವಾಗುತ್ತಿದೆ ಎಂದು ತಿಳಿಯುತ್ತಿದ್ದಂತೆ ಹೊಸ ಸುದ್ದಿ ಹೊರಬಿತ್ತು. ಫಲಶೃತಿ ಎನ್ನುವಂತೆ ಕಳೆದ ಡಿಸೆಂಬರ್ 15 ರಿಂದಲೇ ಸುದೀಪ್ ಕಬ್ಜ ಚಿತ್ರತಂಡ ಸೇರಿಕೊಂಡರು. ತಮ್ಮ ಪಾಲಿನ ಶೂಟಿಂಗ್ ಮುಗಿಸಿಕೊಟ್ಟರು.
ಆದರೆ, ಉಪೇಂದ್ರ ಅವರದು ಪಾಲಿನ ಚಿತ್ರೀಕರಣ ಏನಾಯ್ತು. ಗೊತ್ತಿಲ್ಲ.

ಈ ಮಧ್ಯೆ, ನಿನ್ನೆ ಕಬ್ಜ ಚಿತ್ರದ ವಿಚಾರವಾಗಿ ದೊಡ್ಡ ಗಾಳಿಸುದ್ದಿ ಗಾಂಧೀನಗರದ ತಲೆಯ ಮೇಲೆಲ್ಲಾ ಓಡಾಡುತ್ತಿದೆ. ಅದೇನೆಂದರೆ, ಕಬ್ಜ ಚಿತ್ರದಿಂದ ಕಿಚ್ಚ ಸುದೀಪ್ ಹೊರನಡೆದಿದ್ದಾರೆ ಅನ್ನೋದು. ಇದಕ್ಕೆ ಮೂಲ ಕಾರಣ ಸುದೀಪ್ ಅವರು ವಿಕ್ರಾಂತ ರೋಣ ಸಿನಿಮಾ ಬಿಡುಗಡೆಯಾಗುತ್ತಿರುವುದು. ಅದರ ಪ್ರಮೋಷನ್ ನಲ್ಲಿ ತೊಡಗಿಕೊಂಡಿರುವುದು. ಹೀಗಾಗಿ, ಕಬ್ಜ ಚಿತ್ರೀಕರಣಕ್ಕೆ ಸಮಯ ನೀಡಲು ಆಗುತ್ತಿಲ್ಲ ಎನ್ನಲಾಗುತ್ತಿದೆ. ಇನ್ನೊಂದು ಕಡೆ, ಕಳೆದು ಮೂರು ನಾಲ್ಕು ತಿಂಗಳಿಂದ ಸುದೀಪ್ ಕಬ್ಜ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರೂ, ಚಂದ್ರು ಸಿನಿಮಾ ಪೂರೈಸಿಲ್ಲ ಅನ್ನೋ ಮಾತು ಕೇಳಿಬರುತ್ತಿದೆ. ಸುದೀಪ್ ನಿರ್ಗಮನದ ಗಾಳಿಸುದ್ದಿ ಎಲ್ಲಡೆ ಸುತ್ತಿ ಕಡೆಗೆ ನಿರ್ದೇಶಕ ಆರ್. ಚಂದ್ರು ಕಿವಿಗೂ ಬಿತ್ತು ಎನಿಸುತ್ತದೆ. ತಕ್ಷಣ ಚಂದ್ರು ಎಚ್ಚೆತ್ತುಕೊಂಡು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಯೊಂದನ್ನು ನೀಡಿ, ಕಬ್ಜ ಚಿತ್ರ ವಿಚಾರವಾಗಿ ಈಗ ಎದ್ದಿರುವ ಗಾಳಿಸುದ್ದಿಗೆ ಯಾರೂ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ. ಆರ್. ಚಂದ್ರು ನೀಡಿರುವ ಸ್ಪಷ್ಟನೆ ಹೀಗಿದೆ.

ಇದನ್ನೂ ಓದಿ : The Kashmir Files : 20 ಕೋಟಿ ಬಂಡವಾಳಕ್ಕೆ 231 ಕೋಟಿ ಆದಾಯ: ಇದು ದಿ‌ ಕಾಶ್ಮೀರಿ ಫೈಲ್ಸ್ ಸಾಧನೆ

‘ ಎಲ್ಲರಿಗೂ ನಮಸ್ಕಾರ,
ನಿನ್ನೆಯಿಂದ ಸುದೀಪ್ ಅವರು ಕಬ್ಜ ತಂಡದಿಂದ ಹೊರಗೆ ನಡೆದಿದ್ದಾರೆ ಎಂಬು ಸುದ್ದಿ ಹರಿದಾಡುತ್ತಿದೆ. ಆ ಸುದ್ದಿ ಸತ್ಯಕ್ಕೆ ದೂರವಾದದ್ದು. ಶ್ರೀ ಕಿಚ್ಚ ಸುದೀಪ್ ಅವರು ಈಗಾಗಲೇ ಕಬ್ಜ ಚಿತ್ರೀಕರಣದಲ್ಲಿ ಪಾಲ್ಗೊಂಡು ನಡೆಸಿದ್ದಾರೆ. ಹಾಗಾಗಿ, ದಯವಿಟ್ಟು ಈ ರೀತಿಯ ಸುಳ್ಳು ಸುದ್ದಿಗೆ ಯಾರು ಕಿವಿಗೊಡಬಾರದು’

ಹೀಗೆ ಚಂದ್ರು ಅವರು ಸ್ಪಷ್ಟನೆ ನೀಡಿದ್ದಾರೆ.

ಅಂದಹಾಗೇ, ಕಬ್ಜ ಸಿನಿಮಾ ಮರಾಠಿ, ಬೆಂಗಾಲಿ, ಮಲೆಯಾಳಂ ಸೇರಿದಂತೆ 7 ಭಾಷೆಯಲ್ಲಿ ತೆರೆಕಾಣಲಿದೆ. ಎಲ್ಲಾ ಭಾಷೆಯಲ್ಲಿ ಒಟ್ಟಿಗೆ ಬಿಡುಗಡೆ ಯಾಗುತ್ತದೆಯೇ ಎನ್ನುವುದು ತಿಳಿದು ಬಂದಿಲ್ಲ. ಇತ್ತೀಚೆಗಷ್ಟೇ ನಟ ಉಪೇಂದ್ರ ಏಪ್ರಿಲ್ ತಿಂಗಳಲ್ಲಿ ಅಂತಿಮ ಹಂತದ ಚಿತ್ರೀಕರಣ ಮುಗಿದರೆ, ಸೆಪ್ಟೆಂಬರ್ ನಲ್ಲಿ ಕಬ್ಜ ತೆರೆಕಾಣಲಿದೆ ಎನ್ನುವ ಸಿಹಿಸುದ್ದಿ ನೀಡಿದ್ದರು.

ಇದನ್ನೂ ಓದಿ : Pushpa-2 Samantha : ಪುಷ್ಪ-2 ಗೆ ಸಮಂತಾ ಸ್ಪೆಷಲ್ ಎಂಟ್ರಿ : ಸುಕುಮಾರನ್ ಹೇಳಿದ್ದೇನು ಗೊತ್ತಾ

(Director R Chandru said Actor Sudeep is in Kabja team)

Comments are closed.