Ginirama Serial : ಶಿವ – ಮಹತಿ ಲವ್​ ಕಹಾನಿಗೆ ಬಿಗ್​ ಟ್ವಿಸ್ಟ್​ : ನೇಹಾ ಎಂಟ್ರಿ ಬಳಿಕ ಮಹತಿ ಬಾಳಲ್ಲಿ ಬಿರುಗಾಳಿ

Ginirama Serial : ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಹೊಂದಿರುವ ಗಿಣಿರಾಮ ಧಾರವಾಹಿ ತನ್ನ ಭಾಷಾ ಸೊಗಡಿನ ಕಾರಣದಿಂದಾಗಿಯೇ ಸಾಕಷ್ಟು ಪ್ರೇಕ್ಷಕರಿಗೆ ಇಷ್ಟವಾಗಿದೆ. ಶಿವರಾಮನ ಖಡಕ್​ ಲುಕ್​, ಮಹತಿಯ ಪ್ರಬುದ್ಧ ನಟನೆ ಈ ಧಾರವಾಹಿಯ ಪ್ಲಸ್​ ಪಾಯಿಂಟ್​. ಈ ಧಾರವಾಹಿಯಲ್ಲಿ ಆಗಾಗ ಬರುವ ಶಿವ ಹಾಗೂ ಮಹತಿ ನಡುವಿನ ಕಾಮಿಡಿ ಸೀನ್​ಗಳಂತೂ ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಗುತ್ತದೆ .


ಮಹತಿ ಹಾಗೂ ಶಿವರಾಮ ಪರಸ್ಪರ ಇಷ್ಟಪಟ್ಟು ವಿವಾಹವಾದವರಲ್ಲ . ಗೌರವ್​ ಜೊತೆ 8 ವರ್ಷ ಪ್ರೀತಿಸಿ ಬಳಿಕ ಇನ್ನೇನು ಮದುವೆಯಾಗಬೇಕು ಎಂದುಕೊಂಡಿದ್ದಾಗ ಮಹತಿ ಬಾಳಲ್ಲಿ ಬಿರುಗಾಳಿಯಂತೆ ಬಂದವನು ಶಿವರಾಮ. ಇತ್ತ ಶಿವರಾಮನಿಗೂ ಇದು ಇಷ್ಟದ ವಿವಾಹವಲ್ಲ. ನೇಹಾ ಎಂಬಾಕೆಯನ್ನು ಪ್ರೀತಿಸಿದ್ದ ಶಿವರಾಮ ಆಕೆ ಮೃತಪಟ್ಟ ಬಳಿಕ ಜೀವನದಲ್ಲಿ ಇನ್ಯಾರನ್ನೂ ಮದುವೆಯಾಗೋದಿಲ್ಲ ಎಂಬ ಪ್ರತಿಜ್ಞೆ ತೊಟ್ಟವನು. ಆದರೆ ಆಹಿ ಸಾಹೇಬರ ಒತ್ತಡಕ್ಕೆ ಸಿಲುಕಿ ಈತ ಮಹತಿಯನ್ನು ವಿವಾಹವಾಗುತ್ತಾನೆ.


ಆದರೆ ಇದೀಗ ಇವರಿಬ್ಬರ ನಡುವೆ ಪ್ರೀತಿ ಹಂತ ಹಂತವಾಗಿ ಅರಳುತ್ತಿದೆ.ಹಿಂದಿನ ಎಪಿಸೋಡ್​ನಲ್ಲಿ ಮಹತಿ ಸತ್ತು ಹೋಗಿದ್ದಾನೆ ಎಂದುಕೊಂಡಿದ್ದ ಗೌರವ್​ ರೀ ಎಂಟ್ರಿ ಕೊಟ್ಟಿದ್ದ. ಆಹಿ ಸಾಹೇಬ ನೀಡುವ ದುಡ್ಡಿನ ಆಸೆಗೆ ಬಿದ್ದು ಮಹತಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗುವ ಪ್ಲಾನ್​ ಮಾಡಿದ್ದ. ಆದರೆ ಶಿವರಾಮ ಈತನ ಬಣ್ಣವನ್ನು ಬಯಲು ಮಾಡುವ ಮೂಲಕ ಮಹತಿಯನ್ನು ಬಚಾವ್​ ಮಾಡಿದ್ದ.


ಎಲ್ಲಾ ಮುಗೀತು. ಇನ್ನು ಶಿವರಾಮ ಮಹತಿ ಬಾಳಲ್ಲಿ ಯಾವುದೇ ಟ್ವಿಸ್ಟ್​ ಬರೋದಿಲ್ಲ ಎಂದು ಪ್ರೇಕ್ಷಕರು ಎಂದುಕೊಳ್ಳುವಷ್ಟರಲ್ಲಿ.. ಶಿವರಾಮನ ಹಳೆ ಲವ್ವರ್​ ನೇಹಾಳ ಎಂಟ್ರಿಯಾಗಿದೆ. ಆದರೆ ನೇಹಾಗೆ ಹಿಂದಿನದ್ದೆಲ್ಲ ಮರೆತು ಹೋಗಿರುವಂತೆ ಕಾಣುತ್ತಿದೆ, ಶಿವರಾಮ ಎಂದರೆ ಯಾರೋ ಎಂಬಂತೆ ವರ್ತಿಸುತ್ತಿದ್ದಾಳೆ. ನಿಜಕ್ಕೂ ಈಕೆ ನೇಹಾ ಇರಬಹುದೇ..? ಶಿವ ಹೇಳಿದಂತೆ ಈಕೆ ನಿಜಕ್ಕೂ ಒಳ್ಳೆಯವಳೇ..? ಇಷ್ಟು ದಿನ ಈಕೆ ಎಲ್ಲಿದ್ದಳು..? ಶಿವರಾಮ ಹಾಗೂ ನೇಹಾ ಭೇಟಿ ಕಾಕತಾಳೀಯವೇ..? ಅಥವಾ ಇದೂ ಕೂಡ ಆಯಿಸಾಹೇಬನ ಪ್ಲಾನ್​ ಇರಬಹುದೇ..? ಎಂಬುದಕ್ಕೆ ಮುಂದಿನ ಎಪಿಸೋಡ್​ಗಳಲ್ಲಿ ಪ್ರೇಕ್ಷಕರಿಗೆ ಉತ್ತರ ಸಿಗಲಿದೆ.

ಇದನ್ನು ಓದಿ : Hardik Pandya : ಹಾರ್ದಿಕ್‌ ಪಾಂಡ್ಯಗೆ ಕೃನಾಲ್‌ ಪಾಂಡ್ಯ ಭಾವನಾತ್ಮಕ ಸಂದೇಶ

ಇದನ್ನೂ ಓದಿ : mandya : ಪುತ್ರಿಯ ಮೃತದೇಹದ ಜೊತೆ ನಾಲ್ಕು ದಿನ ಕಳೆದ ತಾಯಿ : ಮಂಡ್ಯದಲ್ಲೊಂದು ವಿಚಿತ್ರ ಘಟನೆ

Ginirama Serial Colors Kannada Update

Comments are closed.