ವಿಷ್ಣುದಾದಾ ವಿರುದ್ಧ ಅವಹೇಳನ…! ಸಿಡಿದೆದ್ದ ಸ್ಯಾಂಡಲ್ ವುಡ್…! ಕ್ಷಮೆಯಾಚಿಸುವಂತೆ ಆಗ್ರಹಿಸಿದ ಗಣೇಶ್, ಪುನೀತ್, ರಿಶಬ್ ಶೆಟ್ಟಿ…!!

  • ಫೂರ್ಣಿಮಾ ಹೆಗಡೆ

ಕನ್ನಡದ ಮೇರು ನಟ ಡಾ.ವಿಷ್ಣುವರ್ಧನ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ತೆಲುಗು ನಟ ವಿಜಯ್ ರಂಗರಾಜನ್ ವಿರುದ್ಧ ಸ್ಯಾಂಡಲ್ ವುಡ್ ಸಿಡಿದೆದ್ದಿದೆ. ಹಿರಿ- ಕಿರಿಯರೆನ್ನದೇ ಎಲ್ಲರೂ ವಿಜಯ್ ರಂಗರಾಜನ್ ವಿರುದ್ಧ ತಿರುಗಿ ಬಿದ್ದಿದ್ದು, ತಕ್ಷಣ ಸುದ್ದಿಗೋಷ್ಟಿ ನಡೆಸಿ ವಿಷ್ಣು ಅಭಿಮಾನಿಗಳ ಬಳಿ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ.

ನಟ ಸುದೀಪ್ ವಿಡಿಯೋ ಮಾಡಿ ತೆಲುಗು ನಟನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರೇ, ನಟ ಪುನೀತ್ ರಾಜಕುಮಾರ್, ಟ್ವೀಟ್ ಮಾಡಿ, ಒಬ್ಬ ಕಲಾವಿದನಿಗೆ ಮೊದಲು ಇರಬೇಕಾದ ಗುಣ ಎಂದ್ರೇ ಇನ್ನೊಬ್ಬ ಕಲಾವಿದನನ್ನು ಗೌರವಿಸುವುದು ಹಾಗೂ ಪ್ರೀತಿ ತೋರುವುದು. ಯಾವ ಭಾಷೆ ಕಲಾವಿದರಾದರು ಗೌರವಮೊದಲು. ವಿಷ್ಣು ಸರ್ ಬಗ್ಗೆ ಹೇಳಿಕೆ ಹಿಂಪಡೆದು ಕನ್ನಡಿಗರ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ ಮೊದಲು ಮಾನವನಾಗು ಎಂದಿದ್ದಾರೆ.

ಇನ್ನು ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ವಿಷ್ಣುದಾದಾಗೆ ಅವಮಾನ ಮಾಡಿರೋದನ್ನು ಖಂಡಿಸಿರುವ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಕಲಾವಿದನಿಗೆ ಗಡಿ ರೇಖೆಗಳಿಲ್ಲ. ಯಾವುದೇ ಸಿನಿಮಾ ಕಲಾವಿದರಾದರು ಬೇರೆ ಕಲಾವಿದರ ಜೊತೆ ಪರಸ್ಪರ ಅಭಿಮಾನ ಮತ್ತು ಗೌರವದಿಂದ ನಡೆದುಕೊಳ್ಳುವುದು ಆ ಮೂಲಕ ಚಿತ್ರೋದ್ಯಮದ ಸೌಹಾರ್ದತೆ ಕಾಪಾಡುವುದು ಅವನ ಕರ್ತವ್ಯ ಎಂದಿದ್ದಾರೆ. ಅಷ್ಟೇ ಅಲ್ಲ ವಿಷ್ಣುದಾದಾ ಸೇರಿದಂತೆ ಎಲ್ಲರೂ ಈ ನೀತಿಯನ್ನು ಪಾಲಿಸಿಕೊಂಡು ಬಂದಿದ್ದಾರೆ. ವಿಷ್ಣು ದಾದಾ ಬಗೆಗಿನ ಹೇಳಿಕೆ ನಮ್ಮೆಲ್ಲರಿಗೂನೋವು ತಂದಿದೆ. ಹೀಗಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಇನ್ನು ನಿರ್ದೇಶಕ ಹಾಗೂ ನಟ ರಿಶಬ್ ಶೆಟ್ಟಿ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ತಮ್ಮ ವ್ಯಕ್ತಿತ್ವ ದಿಂದಲೇ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ ವಿಷ್ಣು ಸರ್ ನಡತೆ ಬಗ್ಗೆ ನಟನೊಬ್ಬನು ತುಚ್ಛವಾಗಿ ಮಾತನಾಡಿದ್ದು ತಪ್ಪು.ಆತ ಕೂಡಲೇ ತಪ್ಪೊಪ್ಪಿಕೊಂಡು ಕಲೆ ಮತ್ತು ಕಲಾವಿದರನ್ನು ಗೌರವಿಸಲು ಕಲಿಯಬೇಕು ಎಂದಿದ್ದಾರೆ.

ಇನ್ನು ಹಿರಿಯ ನಟ ಜಗ್ಗೇಶ್ ಸೇರಿದಂತೆ ಹಲವು ನಟ-ನಟಿಯರು ವಿಜಯ್ ರಂಗರಾಜನ್ ಹೇಳಿಕೆ ಖಂಡಿಸಿದ್ದು, ವಿಷ್ಣುದಾದಾ ಅಳಿಯ ಹಾಗೂ ನಟ ಅನಿರುದ್ಧ ಕರ್ನಾಟಕಕ್ಕೆ ಅಥವಾ ಕನ್ನಡಿಗರು ಇರುವ ಕಡೆ ಹೋಗುವ ಮುನ್ನ ಎಚ್ಚರ ವಹಿಸಿ ಎಂದು ತೆಲುಗು ನಟನನ್ನು ಎಚ್ಚರಿಸಿದ್ದಾರೆ.

Comments are closed.