kannadathi serial : ಭಾರಿ ದೊಡ್ಡ ಟ್ವಿಸ್ಟ್​ಗೆ ನಾಂದಿ ಹಾಡಿದೆ ಹರ್ಷ – ಭುವಿ ಕಲ್ಯಾಣ

kannadathi serial : ಕಲರ್ಸ್ ಕನ್ನಡ ಧಾರವಾಹಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರವಾಹಿ ಕಿರುತೆರೆಯ ಹೆಸರಾಂತ ಧಾರವಾಹಿಗಳಲ್ಲಿ ಒಂದು. ಕನ್ನಡವನ್ನೇ ಎಳೆಯಾಗಿಟ್ಟುಕೊಂಡು ಸಂಪೂರ್ಣ ಧಾರವಾಹಿಯ ಕತೆಯನ್ನು ಹೆಣೆಯಲಾಗಿದೆ. ಕಥಾನಾಯಕಿ ಭುವಿ ಕನ್ನಡ ಟೀಚರ್, ಕನ್ನಡದ ಬಗ್ಗೆ ಅತಿಯಾದ ಅಭಿಮಾನವನ್ನು ಹೊಂದಿರುವ ಈ ಹಸಿರುಪೇಟೆ ಟೀಚರ್​ ಇದೀಗ ಕನ್ನಡದಲ್ಲಿಯೇ ವಿವಾಹವಾಗಿದ್ದಾರೆ.


ಸಾಕಷ್ಟು ಟ್ವಿಸ್ಟ್​ಗಳ ನಡುವೆಯೇ ಕೊನೆಗೂ ಹರ್ಷ ಭುವಿಯ ಕೊರಳಿಗೆ ತಾಳಿ ಕಟ್ಟಿದ್ದಾನೆ. ವರೂಧಿನಿ ಮದುವೆಯನ್ನು ನಿಲ್ಲಿಸಲು ಕೈ ಕೊಯ್ದುಕೊಂಡ ಬಳಿಕ ಮದುವೆ ಆಗಮಿಸಿದ್ದವರೆಲ್ಲರೂ ಆಸ್ಪತ್ರೆಗೆ ಬರಬೇಕಾಯ್ತು. ಆ ಬಳಿಕ ಮುಹೂರ್ತ ದಾಟಿ ಬಿಟ್ಟರೆ ಮತ್ತೆ ಮದುವೆಯಾಗೋದಿಲ್ಲ ಎಂಬ ಆತಂಕ ಅಮ್ಮಮ್ಮನದ್ದು. ಆದರೆ ಈ ಎಲ್ಲಾ ಆತಂಕಗಳಿಗೆ ತೆರೆ ಇಳಿಯಲು ಬಂದ ರಾಮಾಚಾರಿ ಧಾರವಾಹಿಯ ಮುಖ್ಯ ಪಾತ್ರಧಾರಿ ತಾನು ಆಸ್ಪತ್ರೆಯಲ್ಲಿಯೇ ಈ ಮದುವೆ ನೆರವೇರಿಸೋದಾಗಿ ಹೇಳುತ್ತಾರೆ.


ಕೊನೆಗೆ ಎಲ್ಲರ ಒಪ್ಪಿಗೆ ಪಡೆದು ಹರ್ಷ ಹಾಗೂ ಭುವಿಯ ಕಲ್ಯಾಣ ಆಸ್ಪತ್ರೆಯಲ್ಲಿಯೇ ನೆರವೇರಿದೆ. ವಿಶೇಷ ಅಂದರೆ ಮದುವೆಯ ಮಂತ್ರಗಳನ್ನು ಸಂಸ್ಕೃತದಲ್ಲಿ ಹೇಳದೇ ಕನ್ನಡದಲ್ಲಿಯೇ ಹೇಳಲಾಗಿದ್ದು ಈ ಕಾರಣಕ್ಕೆ ಈ ಮದುವೆಗೆ ಕನ್ನಡದ ಮದುವೆ ಎಂದೇ ಧಾರವಾಹಿ ತಂಡ ಹೆಸರಿಟ್ಟಿದೆ.


ಹಿರೋ ತನ್ನನ್ನು ಮದುವೆಯಾಗಲು ಆಸ್ಪತ್ರೆಗೆ ಬಂದಿದ್ದಾನೆ ಎಂದುಕೊಂಡ ವರೂಧಿನಿಗೆ ಇದೀಗ ಭಾರೀ ನಿರಾಶೆಯಾಗಿದೆ. ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಸ್ನೇಹಿತೆಯೇ ತನ್ನ ಹಿರೋನನ್ನು ನನ್ನಿಂದ ಕಸಿದುಕೊಂಡಿದ್ದಾಳೆ ಎಂಬ ಕೋಪ ವರೂಧಿನಿ ಮನದಲ್ಲಿ ಮೂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ವರೂಧಿನಿ ಭುವಿಗೆ ತಿರುಗಿ ಬೀಳ್ತಾಳಾ ಎಂಬ ಪ್ರಶ್ನೆ ಮೂಡಿದೆ.


ಇತ್ತ ಅಮ್ಮಮ್ಮನ ಸಂಪೂರ್ಣ ಆಸ್ತಿಯ ಮೇಲೆ ಕಣ್ಣಿಟ್ಟಿರುವ ಸಾನಿಯಾ ಮದುವೆ ತಡೆಯಲು ಎಷ್ಟೇ ಪ್ರಯತ್ನಪಟ್ಟರೂ ಸಹ ಸಾಧ್ಯವಾಗದೇ ಹೋಗಿದೆ. ಅಮ್ಮಮ್ಮ ತನ್ನೆಲ್ಲ ಆಸ್ತಿಯನ್ನು ಹರ್ಷನ ಪತ್ನಿಯ ಹೆಸರಿಗೆ ಮಾಡಿದ್ದಾರೆ . ಮುಂದಿನ ದಿನಗಳಲ್ಲಿ ಇದು ಹರ್ಷ ಹಾಗೂ ಭುವಿಯ ನಡುವೆ ಕಲಹಕ್ಕೆ ಕಾರಣವಾಗಬಹುದೇ..? ಸಾನಿಯಾ ಇದರ ಲಾಭ ಪಡೆಯಬಹುದೇ..? ಕ್ಷೀಣಿಸುತ್ತಿರುವ ಅಮ್ಮಮ್ಮನ ಆರೋಗ್ಯ ಮುಂದಿನ ದಿನಗಳಲ್ಲಿ ಈ ಕುಟುಂಬಕ್ಕೆ ದೊಡ್ಡ ಆಘಾತ ಉಂಟು ಮಾಡಬಹುದೇ ಎನ್ನುವುದು ಮುಂದಿನ ಎಪಿಸೋಡ್​ಗಳಲ್ಲಿ ತಿಳಿದು ಬರಲಿದೆ.

ಇದನ್ನು ಓದಿ : India Vs New Zealand : ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಟೂರ್: ಕಿವೀಸ್ ವಿರುದ್ಧ ಟಿ20, ಏಕದಿನ ಸರಣಿ ಆಡಲಿದೆ ಟೀಮ್ ಇಂಡಿಯಾ

ಇದನ್ನೂ ಓದಿ : No Place for Virat Kohli : ಸೆಹ್ವಾಗ್ ಟಿ20 ವಿಶ್ವಕಪ್ ತಂಡದಲ್ಲಿ ವಿರಾಟ್ ಕೊಹ್ಲಿಯೇ ಇಲ್ಲ

kannadathi serial written update harsha gets married to bhuvi

Comments are closed.