Lakshana serial : ಲಕ್ಷಣ ಧಾರವಾಹಿಯಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​ : ಗೊಂದಲದಲ್ಲಿ ಭೂಪತಿ

Lakshana serial : ಕಲರ್ಸ್​ ಕನ್ನಡ ಧಾರವಾಹಿಯಲ್ಲಿ ರಾತ್ರಿ 9:30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ ಧಾರವಾಹಿ ಅತ್ಯಂತ ವಿಭಿನ್ನವಾಗಿ ಮೂಡಿ ಬರ್ತಿದೆ. ಈ ಧಾರವಾಹಿಯಲ್ಲಿ ಟ್ವಿಸ್ಟ್​​ ಮೇಲೆ ಟ್ವಿಸ್ಟ್​ಗಳು ಎದುರಾಗುತ್ತಿದೆ. ಧಾರವಾಹಿಯಲ್ಲಿ ವಿಲನ್​ ಪಾತ್ರಧಾರಿಗಳು ಹೆಚ್ಚೇ ಇದ್ದಾರೆ. ಆದರೆ ಇನ್ನೂ ಅನೇಕರ ಮುಖವನ್ನು ರಿವೀಲ್​​ ಮಾಡಲಾಗಿಲ್ಲ.


ಚಂದ್ರಶೇಖರ್​ ಮಾಡಿದ ಪ್ಲಾನ್​ನಿಂದಾಗಿ ಶ್ವೇತಾಳನ್ನು ಮದುವೆಯಾಗಬೇಕಾಗಿದ್ದ ಭೂಪತಿ ನಕ್ಷತ್ರಾಳನ್ನು ಇಷ್ಟವಿಲ್ಲದ್ದರೂ ಮದುವೆಯಾಗಿದ್ದಾನೆ. ಶ್ವೇತಾ ಅಸಲಿಯತ್ತು ತಿಳಿದ ಬಳಿಕ ಆಕೆಯನ್ನು ವಠಾರಕ್ಕೆ ಓಡಿಸಲಾಗಿದೆ. ನಕ್ಷತ್ರಾ ಜೀವನದಲ್ಲಿ ಎಲ್ಲವೂ ಸರಿಯಾಯ್ತು ಅಂದುಕೊಳ್ಳುವಷ್ಟರಲ್ಲಿ ಇದೀಗ ಹೊಸದೊಂದು ಟ್ವಿಸ್ಟ್​ ಎದುರಾಗಿದೆ. ನಕ್ಷತ್ರಾ ಹಾಗೂ ಭೂಪತಿ ಬಾಳಲ್ಲಿ ಬಹುದೊಡ್ಡ ಬಿರುಗಾಳಿಯೆದ್ದಿದ್ದು ಇದಕ್ಕೆ ಕಾರಣ ಯಾರು ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.


ಮಿಲಿ ಹಾಗೂ ಆಕೆ ತಾಯಿಗೆ ಸಿಎಸ್​ ಕುಟುಂಬ ಮೇಲೇಕೆ ದ್ವೇಷ..? ಮಿಲಿ ತಾಯಿ ಯಾರು ಎನ್ನುವುದು ಇನ್ನೂ ನಿಗೂಢವಾಗಿದೆ. ಇದರ ಜೊತೆಯಲ್ಲಿ ಭೂಪತಿ ತಮ್ಮ ಮೌರ್ಯ ಯಾರು ಎನ್ನುವ ಗುಟ್ಟನ್ನೂ ಇನ್ನೂ ಧಾರವಾಹಿ ತಂಡ ಬಿಟ್ಟುಕೊಟ್ಟಿಲ್ಲ. ಇದೀಗ ನಕ್ಷತ್ರಾ ಹಾಗೂ ಭೂಪತಿಗೆ ಹೋದಲ್ಲಿ ಬಂದಲ್ಲಿ ಬೆದರಿಕೆಯ ಪತ್ರಗಳು ಸಿಗುತ್ತಿವೆ. ಅಲ್ಲದೇ ಅವರಿಗೇ ಗೊತ್ತಿಲ್ಲದಂತೆ ನಕ್ಷತ್ರಾ ಹಾಗೂ ಭೂಪತಿ ಕಿಡ್ನಾಪ್​ ಆಗುತ್ತಿದ್ದಾರೆ.
ಹೊಸ ವಿಲನ್​ ಎಂಟ್ರಿ ಆಗಿರಬಹುದೇ..? ಭೂಪತಿ ತಾಯಿ ಈ ಕೆಲಸ ಮಾಡಿಸುತ್ತಿರಬಹುದೇ..? ಎಂಬೆಲ್ಲ ಪ್ರಶ್ನೆಗಳ ನಡುವೆ ಲಕ್ಷಣ ತಂಡ ಹೊಸದೊಂದು ಸುಳಿವನ್ನು ಬಿಟ್ಟುಕೊಟ್ಟಿದೆ. ಅದೇನೆಂದರೆ ಭೂಪತಿಯೇ ಆತನಿಗೆ ತಿಳಿಯದಂತೆ ಈ ಕೆಟ್ಟ ಕೆಲಸವನ್ನು ಮಾಡುತ್ತಿರಬಹುದೇ..? ಎಂಬ ಪ್ರಶ್ನೆ ಎದುರಾಗಿದೆ.


ತನ್ನ ಜೀವನದಲ್ಲಾಗುತ್ತಿರುವ ಬೆಳವಣಿಗೆಗಳ ಕುರಿತು ಭೂಪತಿ ಮನಶಾಸ್ತ್ರಜ್ಞರ ಬಳಿ ಚರ್ಚೆ ನಡೆಸುತ್ತಾನೆ. ಈ ವೇಳೆ ಮನಶಾಸ್ತ್ರಜ್ಞ ನಿನ್ನ ಮನಸ್ಸಿಗೆ ಆದ ಆಘಾತಗಳಿಂದ ನಿನಗೆ ತಿಳಿಯದಂತೆ ನೀನೇ ಈ ರೀತಿ ಮಾಡುತ್ತಿರಲೂಬಹುದು ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಬಳಿಕ ಭೂಪತಿ ಗೊಂದಲಕ್ಕೆ ಸಿಲುಕಿದ್ದಾನೆ.

ಇದನ್ನು ಓದಿ : No Place for Virat Kohli : ಸೆಹ್ವಾಗ್ ಟಿ20 ವಿಶ್ವಕಪ್ ತಂಡದಲ್ಲಿ ವಿರಾಟ್ ಕೊಹ್ಲಿಯೇ ಇಲ್ಲ

ಇದನ್ನೂ ಓದಿ : India Vs New Zealand : ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಟೂರ್: ಕಿವೀಸ್ ವಿರುದ್ಧ ಟಿ20, ಏಕದಿನ ಸರಣಿ ಆಡಲಿದೆ ಟೀಮ್ ಇಂಡಿಯಾ

Lakshana serial update : bhoopati in confusion

Comments are closed.