ಮತ್ತೆ ಬೈಕ್ ಏರಿದ ದಚ್ಚುಪಡೆ…! ಈ ಭಾರಿ ದರ್ಶನ್ ಹೊರಟಿದ್ದೆಲ್ಲಿಗೆ ಗೊತ್ತಾ…!?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದಾ ಸಾಹಸ ಪ್ರವೃತ್ತಿಯ ವ್ಯಕ್ತಿ. ಶೂಟಿಂಗ್ ಇಲ್ಲದೇ ಇದ್ದರೇ ದರ್ಶನ್ ಸದಾ ಒಂದಿಲ್ಲೊಂದು ಮೆಚ್ಚಿನ ಕೆಲಸದಲ್ಲಿ ಬ್ಯುಸಿ ಇರ್ತಾರೆ. ಸಧ್ಯ ದರ್ಶನ್ ಬೈಕ್ ಏರಿದ್ದು ದೇವರ ಸ್ವಂತನಾಡಿನತ್ತ ಪಯಣ ಆರಂಭಿಸಿದ್ದಾರೆ.

ದರ್ಶನ್ ಶೂಟಿಂಗ್ ಇಲ್ಲದ ವೇಳೆಯಲ್ಲಿ ಮನೆಯಲಿದ್ದು ರೆಸ್ಟ್ ಮಾಡೋ ವ್ಯಕ್ತಿಯಲ್ಲ ಬದಲಾಗಿ ಫಾರ್ಂ ಹೌಸ್,ಪ್ರಾಣಿಗಳ ಆರೈಕೆ ಅಂತೆಲ್ಲ ಬ್ಯುಸಿಯಾಗಿರ್ತಾರೆ. ಅದಿಲ್ಲ ಅಂದ್ರೇ ಗೆಳೆಯರ ತಂಡ ಕಟ್ಟಿಕೊಂಡು ಬೈಕ್ ಏರಿ ಹೊರಟು ಬಿಡ್ತಾರೆ.

ಇತ್ತೀಚಿಗಷ್ಟೇ ಬೈಕ್ ನಲ್ಲಿ ಸ್ನೇಹಿತರ ಜೊತೆ ಕೊಡಗಿನ ಪ್ರವಾಸಕ್ಕೆ ತೆರಳಿದ್ದ ದರ್ಶನ್ ಈ ಭಾರಿ ಕೇರಳ ಹಾಗೂ ವೈನಾಡಿನತ್ತ ಮುಖಮಾಡಿ ದ್ದಾರೆ. ಹೆವಿ ಬೈಕ್ ಹಾಗೂ ತಮ್ಮ ಆಪ್ತ ಸ್ನೇಹಿತರ ತಂಡದ ಜೊತೆ ದರ್ಶನ್ ಜರ್ನಿ ಆರಂಭಿಸಿದ್ದು, ಕೇರಳ ಹಾಗೂ ವೈನಾಡಿನಲ್ಲಿ ಜಾಲಿರೈಡ್ ಮುಗಿಸಿ ವಾಪಸ್ಸಾಗಲಿದ್ದಾರೆ.

ಇತ್ತೀಚಿಗಷ್ಟೇ ತಮ್ಮ ಸ್ನೇಹಿತ ಚಿಕ್ಕಣ್ಣನ ಫಾರ್ಂ ಹೌಸ್ ಗೆ ಭೇಟಿ ನೀಡಿದ್ದ ದರ್ಶನ್ ಅಲ್ಲಿ ಚಿಕ್ಕಣ್ಣನ ಕುಟುಂಬಸ್ಥರ ಜೊತೆ ಕಾಲಕಳೆದು ಬಂದಿದ್ದರು. ದರ್ಶನ್ ಗೆ ಚಿಕ್ಕಣ್ಣ ಫ್ಯಾಮಿಲಿ ಕುರಿಮರಿ ಯೊಂದನ್ನು ಗಿಫ್ಟ್ ಆಗಿಯೂ ನೀಡಿತ್ತು.

ಈಗ ಮತ್ತೆ ದರ್ಶನ್ ಜಾಲಿರೈಡ್ ಮೂಡಿನಲ್ಲಿ ಬೈಕ್ ಏರಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಜೊತೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ನಿರ್ಮಾಪಕ ಡಿ.ಉಮಾಪತಿ ಹಾಗೂ ಚಿಕ್ಕಣ್ಣ ಸೇರಿದಂತೆ ಹಲವರು ಸಾಥ ನೀಡಿದ್ದಾರೆ. ಟ್ರಿಪ್ ಗೂ ಮುನ್ನ ಗ್ರೂಪ್ ಪೋಟೋಗೆ ದರ್ಶನ್ ಪೋಸು ನೀಡಿದ್ದು ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಡಿ ಬಾಸ್ ಫ್ಯಾನ್ಸ್ ಅಣ್ಣನ‌ ಸಾಹಸ ನೋಡಿ ಖುಷಿಯಾಗಿದ್ದಾರೆ.

Comments are closed.