ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ದಿ.ಸಂಚಾರಿ ವಿಜಯ್ ಅವರ ಪುಕ್ಸಟ್ಟೆ ಲೈಫು ಸಿನಿಮಾ ಸೆ.24 ರಂದು ತೆರೆ ಕಾಣಲಿದ್ದು, ಸಿನಿಮಾ ತಂಡ ಪ್ರಮೋಶನ್ ಗಾಗಿ ಸಂಚಾರಿ ವಿಜಯ್ ಕಾರ್ಟೂನ್ ಬಳಸಿಕೊಂಡು ವಿಭಿನ್ನ ಸಾಹಸ ಮಾಡಿದೆ.
ಹಲವು ಚಿತ್ರಗಳು ಬಿಡುಗಡೆಗೆ ಬಾಕಿ ಇರುವಾಗಲೇ ನಟ ಸಂಚಾರಿ ವಿಜಯ್ ಅಪಘಾತವೊಂದರಲ್ಲಿ ನಿಧನರಾಗಿದ್ದು, ಸ್ಯಾಂಡಲ್ ವುಡ್ ನ ಅಪಾರ ಅಭಿಮಾನಿಗಳನ್ನು ಅಗಲಿ ಹೋಗಿದ್ದಾರೆ. ಈಗ ಪ್ರಚಾರಕ್ಕೆ ಸಂಚಾರಿ ವಿಜಯರನ್ನೇ ಬಳಸಿಕೊಂಡಿರೋ ಚಿತ್ರತಂಡ ಕಾರ್ಟೂನ್ ಸಿದ್ಧಪಡಿಸಿದೆ.
ಅಗಲಿದ ಸ್ಯಾಂಡಲ್ ವುಡ್ ನಟರಾ ಡಾ.ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಹಲವು ಕಲಾವಿದರನ್ನು ಬಳಸಿಕೊಂಡು ಅವರೊಂದಿಗೆ ಸಂಚಾರಿ ವಿಜಯ್ ತೆರೆ ಮೇಲೆ ತಮ್ಮ ಚಿತ್ರವನ್ನು ಬೆಂಬಲಿಸುವಂತೆ ಕೋರಿದಂತೆ ವಿಡಿಯೋ ಸಿದ್ಧಪಡಿಸಿದ್ದಾರೆ.
ಇದರಲ್ಲಿ ತಮ್ಮ ಪುಕ್ಸಟ್ಟೆ ಲೈಫು ಟ್ರೇಲರ್ ಮೆಚ್ಚಿದ ನೀವೆಲ್ಲರೂ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸಿ ಎಂದು ಸಂಚಾರಿ ವಿಜಯ್ ಮನವಿ ಮಾಡಿದ್ದರೇ, ಅದಕ್ಕೆ ಎಲ್ಲ ಹಿರಿಯ ಕಲಾವಿದರೂ ಧ್ವನಿಗೂಡಿಸಿದ್ದಾರೆ. ಮಾತ್ರವಲ್ಲ ಕನ್ನಡಿಗರು ಯಾವತ್ತೂ ಒಂದೊಳ್ಳೆ ಸಿನಿಮಾದ ಕೈ ಬಿಡಲ್ಲ ಎಂದು ಅಂಬರೀಶ್ ವಿಜಯ್ ಗೆ ಧೈರ್ಯ ತುಂಬುವಂತೆ ವಿಡಿಯೋ ಮೂಡಿಬಂದಿದೆ.
ಅಷ್ಟೇ ಅಲ್ಲ ಚಿಕ್ಕ ವಯಸ್ಸಿನಲ್ಲೇ ನಿಧನರಾದ ಸಂಚಾರಿ ವಿಜಯ್ ಗೆ ನಟ ಶಂಕರ ನಾಗ್ ನನ್ನ ತರನೇ ಬೇಗ ಬಂದು ಬಿಟ್ಟೆ ಎಂದು ಕಾಲೆಳೆದರೇ ಹೌದಪ್ಪಾ ಹೇಳಿದ್ರೆ ನಾನು ನಿನ್ನ ಜೊತೆನೇ ಬರ್ತಿದ್ದೆ ಎಂದು ಅಂಬಿ ಕಿಚಾಯಿಸಿದಂತೆ ವಿಡಿಯೋ ಸಿದ್ಧಪಡಿಸಲಾಗಿದೆ.
ಕೊನೆಯಲ್ಲಿ ಎಲ್ಲ ಕಲಾವಿದರು ಸೆ.24 ರಂದು ಬಿಡುಗಡೆಯಾಗ್ತಿರೋ ಸಂಚಾರಿ ವಿಜಯ್ ಅಭಿನಯದ ಸಿನಿಮಾ ವೀಕ್ಷಿಸುವಂತೆ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಅರವಿಂದ್ ಕುಪ್ಲಿಕರ್ ನಿರ್ದೇಶಿಸುತ್ತಿರುವ ಈ ಸಿನಿಮಾವನ್ನು ನಾಗರಾಜ್ ನಿರ್ಮಿಸುತ್ತಿದ್ದಾರೆ.
(Sanchari Vijay: Puthukatte Life Movie Promotion Vijay: different video release )
Comments are closed.