ಪುನೀತ್‌ ರಾಜ್‌ ಕುಮಾರ್‌ 11 ನೇ ದಿನದ ಕಾರ್ಯಕ್ಕೆ ಸಿದ್ಧತೆ : ನ.9 ರಂದು ಅಭಿಮಾನಿಗಳಿಗೆ ಅನ್ನದಾನ

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿರನಿದ್ರೆಗೆ ಜಾರಿ 8 ದಿನ ಕಳೆದಿದೆ. ಅಭಿಮಾನಿಗಳ ಹುಚ್ಚು ಅಭಿಮಾನ,ಆತ್ಮಹತ್ಯೆ ಎಲ್ಲವೂ ಸಾಗುತ್ತಲೇ ಇದೆ. ಈ ಮಧ್ಯೆ ಪುನೀತ್ ಕುಟುಂಬ 11 ದಿನದ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದು, ಪುನೀತ್ ಆತ್ಮಕ್ಕೆ ಶಾಂತಿಕೋರಿ ಅಭಿಮಾನಿಗಳಿಗೆ ತಿಥಿ ಊಟ ಹಾಕಿಸಲಿದೆ.

Puneet Rajkumar s death demanded to find out the truth, fir registered in Sadashiva Nagar Police Station
ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಈಗಾಗಲೇ 8 ದಿನ ಸಂದಿದೆ. ನವೆಂಬರ್ 8 ರಂದು ಪುನೀತ್ 11ನೇ ದಿನದ ಕಾರ್ಯ ನಡೆಯಲಿದೆ. ಹೀಗಾಗಿ ನವೆಂಬರ್ 9 ರಂದು ಪುನೀತ್ ಅಭಿಮಾನಿಗಳಿಗೆ ತಿಥಿ ಊಟ ಹಾಕಿಸಲು ದೊಡ್ಮನೆ ಕುಟುಂಬ ನಿರ್ಧರಿಸಿದೆ.

ನವೆಂಬರ್ 8 ರ ಸೋಮವಾರ ಪುನೀತ್ ಸಮಾಧಿ ಬಳಿ 11 ನೇ ದಿನದ ಕಾರ್ಯ ನಡೆಯಲಿದ್ದು ಹಾಲು ತುಪ್ಪದಂತೆ 11 ನೇ ದಿನದ ಕಾರ್ಯಕ್ಕೂ ಕೇವಲ ಕುಟುಂಬಸ್ಥರಿಗೆ ಮಾತ್ರ ಅವಕಾಶ ನೀಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಪುನೀತ್ ಆಪ್ತರು, ಸಿನಿರಂಗದ ಗಣ್ಯರು,ಕುಟುಂಬಸ್ಥರು ಮಾತ್ರ 11 ನೇ ದಿನದ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

ಆದರೆ 12 ದಿನದಂದು ಅರಮನೆ ಮೈದಾನದಲ್ಲಿ ರಾಜ್ಯದ ಎಲ್ಲ ಅಭಿಮಾನಿಗಳಿಗೂ ಊಟ ಹಾಕಿಸಲು ಕುಟುಂಬ ನಿರ್ಧರಿಸಿದೆ. ಮೂಲಗಳ ಪ್ರಕಾರ ರಾಜ್ಯದ ಹಲವು ಜಿಲ್ಲೆಯಲ್ಲೂ ನವೆಂಬರ್ 9 ರಂದು ಪುನೀತ್ ನೆನಪಿನಲ್ಲಿ ಅನ್ನದಾನ ನಡೆಯಲಿದೆ ಎನ್ನಲಾಗುತ್ತಿದೆ. ಇನ್ನು ಪುನೀತ್ ಕುಟುಂಬದ ಈ ಎಲ್ಲ ಕಾರ್ಯಕ್ರಮಗಳಿಗೆ ಸಂಪೂರ್ಣ ಭದ್ರತೆ ಹಾಗೂ ಅಗತ್ಯ ವ್ಯವಸ್ಥೆ ಕಲ್ಪಿಸಿಕೊಡಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬೊಮ್ಮಾಯಿ ಭರವಸೆ ಕೂಡ ನೀಡಿದ್ದಾರೆ.

ಇದನ್ನೂ ಓದಿ : Puneeth Raj Kumar ನಿಧನದ ಐದೇ ದಿನಕ್ಕೆ ಅಪ್ಪು ಪುತ್ರಿ ಧೃತಿ ವಿದೇಶಕ್ಕೆ : ದಿಟ್ಟ ನಿರ್ಧಾರದ ಹಿಂದಿದೆ ಭಾವನಾತ್ಮಕ ವಿಚಾರ

ಇದನ್ನೂ ಓದಿ: ಪುನೀತ್ ರಾಜ್‌ ಕುಮಾರ್ ಸಾವಿನ ಸತ್ಯ ಹುಡುಕಲು ಆಗ್ರಹ: ತನಿಖೆಗೆ ಆಗ್ರಹಿಸಿ ದಾಖಲಾಯ್ತು ದೂರು

Comments are closed.