Ambareesh:ಕೂಲ್ ಕ್ಯಾಪ್ಟನ್ ಗೆ ನೆರವಾಗಿದ್ರಂತೆ ಕಲಿಯುಗಕರ್ಣ: ಅಂಬಿ ಬಗ್ಗೆ ಸುಮಲತಾ ಇಂಟ್ರಸ್ಟಿಂಗ್ ಟ್ವೀಟ್!

ಸ್ಯಾಂಡಲ್ ವುಡ್ ನ ರೆಬೆಲ್ ಸ್ಟಾರ್  ದಿ.ನಟ ಅಂಬರೀಶ್ ಕಲಿಯುಗದ ಕರ್ಣ ಎಂದೇ ಹೆಸರಾದವರು. ಮಾತು ಒರಟಾದರು ಮನಸ್ಸು ಬೆಣ್ಣೆಯಂತ ಮೃದು. ಅಂಬಿ ಕಷ್ಟ ಎಂದೋರನ್ನು ಬರಿಗೈಯಲ್ಲಿ ಕಳಿಸಿದವರಲ್ಲ. ಇಂತಿಪ್ಪ ಅಂಬಿ ಕ್ರಿಕೆಟ್ ಪ್ಲೇಯರ್ ಎಂ.ಎಸ್.ದೋನಿಗೆ 2 ಲಕ್ಷ ರೂಪಾಯಿ ನೀಡಿದ್ದರಂತೆ.

ತಾವು ಮಾಡಿದ ಒಳ್ಳೆ ಕೆಲಸದ ಬಗ್ಗೆ ತಾವಾಗಿಯೇ ಹೇಳಿಕೊಳ್ಳುವ ಅಭ್ಯಾಸ ಅಂಬರೀಶ್ ಅವರಿಗೆ ಇರಲಿಲ್ಲ. ಅವರ ನಿಧನದ ಬಳಿಕ ಸಂಸದೆ, ನಟಿ ಹಾಗೂ ಅಂಬಿ ಪತ್ನಿ ಸುಮಲತಾ ಈ ಸಂಗತಿ ಹಂಚಿಕೊಂಡಿದ್ದು, ಟ್ವೀಟ್ ಮಾಡಿದ್ದಾರೆ.

2014 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಪಂದ್ಯಾವಳಿ ನಡೆದಿತ್ತು. ಈ ವೇಳೆ ದೋನಿ ಆಟಕ್ಕೆ ಮನಸೋತಿದ್ದ ಅಂಬಿ ದೋನಿಯ ಕಷ್ಟವನ್ನು ತಿಳಿದು ಅವರಿಗೆ 2 ಲಕ್ಷ ರೂಪಾಯಿ ಸಹಾಯ ನೀಡಿದ್ದರಂತೆ. ಅಲ್ಲದೇ ರಾಂಚಿಯಂತಹ ಸಣ್ಣ ಹಳ್ಳಿಯಿಂದ ಬಂದ ಬಡಹುಡುಗನಿಗೆ ನೆರವಾಗಬೇಕು ಎಂದಿದ್ದರಂತೆ.

ಆದರೆ ತಾವು ಮಾಡಿದ ಒಳ್ಳೆ ಕಾರ್ಯವನ್ನು ಹೇಳಿಕೊಳ್ಳುವ ಅಭ್ಯಾಸ ಅಂಬಿಗೆ ಇಲ್ಲದೇ ಇರೋದರಿಂದ ಈ ವಿಚಾರ ಬೆಳಕಿಗೆ ಬಂದಿರಲಿಲ್ಲ. ಈಗ ಸುಮಲತಾ ಟ್ವೀಟ್ ನಲ್ಲಿ ಈ ಸಂಗತಿ ಬಹಿರಂಗ ಪಡಿಸಿದ್ದಾರೆ.

ಚಿತ್ರರಂಗದಲ್ಲೂ ಹಲವರಿಗೆ ಸಹಾಯ ಮಾಡಿರೋ ಅಂಬಿ ಸಿನಿಮಾ ನಟ-ನಟಿಯರ ನಡುವಿನ ವಿವಾದವನ್ನು ಬಗೆಹರಿಸಲು ತಾವೇ ನೇತೃತ್ವ ವಹಿಸುತ್ತಿದ್ದರು.

Comments are closed.