ವಿಟ್ಲ : (Death by Heart attack )ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವೇಳೆ ಆಟೋ ರಿಕ್ಷಾ ಚಾಲಕನೋರ್ವರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ವಿಟ್ಲದ ಮಾಣಿ ಸಮೀಪ ನಡೆದಿದೆ . ಕಲ್ಲಡ್ಕ ಕುದ್ರೆಬೆಟ್ಟು ನಿವಾಸಿ ಜಯಕರ ಪೂಜಾರಿ ಎನ್ನುವವರೇ ಮೃತಪಟ್ಟವರು .
ಜಯಕರ ಪೂಜಾರಿ ಎನ್ನುವವರು ಆಟೋ ರಿಕ್ಷಾ ಚಾಲಕರಾಗಿದ್ದು , ಹೊಟ್ಟೆ ಪಾಡಿಗಾಗಿ ಆಟೋ ಓಡಿಸಿಕೊಂಡು ದುಡಿಯುವ ವ್ಯಕ್ತಿ . ಪ್ರತಿದಿನ ಬೆಳಗ್ಗೆ ಕೆಲವು ಮಕ್ಕಳನ್ನು ಶಾಲೆಗೆ ಬಿಡುತ್ತಿದ್ದರು . ಎಂದಿನಂತೆ ಇಂದೂ ಕೂಡ ಕೆಲವು ಮಕ್ಕಳನ್ನು ಆಟೋ ರಿಕ್ಷಾದಲ್ಲಿ ಕರೆದುಕೊಂಡು ಬರುತ್ತಿದ್ದರು . ಈ ವೇಳೆ ಮಕ್ಕಳು ಜೆರಾಕ್ಸ್ ಶಾಪ್ ಹತ್ತಿರ ಆಟೋ ನಿಲ್ಲಿಸಲು ಹೇಳಿದ್ದು , ಜಯಕರ ಪೂಜಾರಿ ಆಟೋ ರಿಕ್ಷಾ ನಿಲ್ಲಿಸಿದ್ದರು . ಮಕ್ಕಳು ಜೆರಾಕ್ಸ್ ತೆಗೆದು ಹಿಂತಿರುಗುವ ವೇಳೆ ಜಯಕರ ಪೂಜಾರಿ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು(Death by Heart attack ) ಎನ್ನಲಾಗಿದೆ .
ಇದನ್ನೂ ಓದಿ : A terrible accident : ಮಂಗಳೂರಲ್ಲಿ ಲಾರಿ ಬೈಕ್ ನಡುವೆ ಭೀಕರ ಅಪಘಾತ : 2 ಸಾವು, ಇಬ್ಬರು ಗಂಭೀರ
ಇದನ್ನೂ ಓದಿ : Permission for 9 beef shops : ಮಂಗಳೂರಲ್ಲಿ 9 ಗೋಮಾಂಸ ಮಾರಾಟ ಮಳಿಗೆಗೆ ಅನುಮತಿ : ಮನಪಾ ವಿರುದ್ದ ವಿಶ್ವ ಹಿಂದೂ ಪರಿಷತ್ ಆಕ್ರೋಶ
ಇದನ್ನೂ ಓದಿ : Separate Milk Union : ಉಡುಪಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ : ಬೇಡಿಕೆಯಿಟ್ಟ ಬಿಜೆಪಿ
ತಕ್ಷಣ ಅವರನ್ನು ಹತ್ತಿರದ ಕ್ಲಿನಿಕ್ ಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದು , ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಕ್ಲಿನಿಕ್ ಗೆ ಕರೆತರುವ ಮೊದಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ .
ವಿಧಿ ಯಾರ ಜೊತೆ ಯಾವ ಸಮಯಕ್ಕೆ ಹೇಗೆ ಆಟವಾಡುತ್ತದೆಂದು ಯಾರಿಗೂ ಹೇಳತೀರದು . ಕ್ಷಣಮಾತ್ರದಲ್ಲೇ ಎಲ್ಲವೂ ಕಾಣೆಯಾಗಿಬಿಡುತ್ತದೆ . ಹೀಗೆ ಜಯಕರ ಪೂಜಾರಿ ಎನ್ನುವವರು ಕೂಡ ವಿಧಿಯಾಟಕ್ಕೆ ಬಲಿಯಾದರು . ಎಂದಿನಂತೆ ಆರಾಮವಾಗಿ ಆಟೋ ಓಡಿಸಿಕೊಂಡು ಬರುತ್ತಿದ್ದ ಜಯಕರ ಪೂಜಾರಿ ಹೃದಯಾಘಾತ ಎಂಬ ವಿಧಿಯ ಕ್ರೂರ ಲೀಲೆಗೆ ಬಲಿಯಾದರು .
(Death by Heart attack) An auto rickshaw driver died of a heart attack while taking school children near Mani in Vitla. Jayakara Pujari, a resident of Kalladka Kudrebettu, died.
Comments are closed.