ಭವಿಷ್ಯ ಹೇಳಿದ್ದೇ ಮುಳುವಾಯ್ತು : ಜ್ಯೋತಿಷಿಗೆ ಚಾಕು ಇರಿದು ದುಷ್ಕರ್ಮಿಗಳು ಪರಾರಿ..!!

ಬಂಟ್ವಾಳ : ಭವಿಷ್ಯ ಹೇಳುತ್ತಿದ್ದ ಜ್ಯೋತಿಷಿ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಲ್ಲಿ ನಡೆದಿದೆ.

ಬಿ.ಸಿ.ರೋಡ್ ನ ಪದ್ಮಾ ಕಾಂಪ್ಲೆಕ್ಸ್ ನಲ್ಲಿ ಶ್ರೀದುರ್ಗಾಪರಮೇಶ್ವರಿ ಜ್ಯೋತಿಷಾಲಯ ಹೆಸರಿನಲ್ಲಿ ಜ್ಯೋತಿಷ್ಯ ಕೇಂದ್ರವನ್ನು ನಡೆಸುತ್ತಿದ್ದ ಪಂಡಿತ್ ಲಕ್ಷ್ಮೀಕಾಂತ್ ಭಟ್ ಎಂಬವರೇ ಚಾಕು ಇರಿತಕ್ಕೆ ಒಳಗಾದವವರು.

https://kannada.newsnext.live/corona-hike-school-holiday-karataka-lockdown/

ಲಕ್ಷ್ಮೀ ಕಾಂತ್ ಭಟ್ ತನ್ನ ಕಚೇರಿಯಲ್ಲಿ ವೇಳೆಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದ ಅಪರಿಚಿತರ ತಂಡ ಒಮ್ಮಿಂದೊಮ್ಮೆಲೆ ಲಕ್ಷೀಕಾಂತ್ ಭಟ್ ಮೇಲೆ ಹಲ್ಲೆಗೆ ಯತ್ನಿಸಿದೆ. ನಂತರದಲ್ಲಿ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವೇಳೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಲಕ್ಷ್ಮೀ ಕಾಂತ್ ಭಟ್ ಸ್ವಲ್ಪ ಹೊತ್ತಿನ ಬಳಿಕ ಎದ್ದು ಕಚೇರಿಯಿಂದ ಹೊರಗೆ ಬಂದು ಸಹಾಯಕ್ಕೆ ಯಾಚಿಸಿದ್ದಾರೆ.

https://kannada.newsnext.live/schools-in-tamil-nadu-to-be-shut-from-march-22-due-to-rise-in-covid-19-cases/

ರಕ್ತದ ಮಡುವಲ್ಲಿದ್ದ ಲಕ್ಷ್ಮೀಕಾಂತ್ ಭಟ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಸುಳ್ಳು ಭವಿಷ್ಯ ಹೇಳಿದ್ದೇ ಘಟನೆಗೆ ಕಾರಣವೆನ್ನಲಾಗುತ್ತಿದ್ದು, ಬಂಟ್ವಾಳ ಠಾಣೆಯ ಪೊಲೀಸರು ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇನ್ನು ಜ್ಯೋತಿಷಿ ಲಕ್ಷ್ಮೀಕಾಂತ್ ಭಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Comments are closed.