ಉಡುಪಿಯಲ್ಲಿ ಚಿನ್ನದ ಪಾಲಿಶ್ ಅಂಗಡಿಯ ಬಾಗಿಲು ಮುರಿದು ಕಳವು

ಉಡುಪಿ : ಚಿನ್ನದ ಪಾಲಿಶ್ ಮಾಡುವ ಅಂಗಡಿಯ ಬಾಗಿಲು ಮುರಿದು ಚಿನ್ನ ಕಳವು ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಅಂಗಡಿಯಲ್ಲಿದ್ದ ಸುಮಾರು 80 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ.

ಉಡುಪಿಯ ತೆಂಕಪೇಟೆಯ ರಾಮಭವನ ಹೋಟೆಲ ಮುಂಭಾಗದಲ್ಲಿರುವ ಮನೀಶ್ ಚಿನ್ನದ ಪಾಲಿಶ್ ಅಂಗಡಿಯಲ್ಲಿ ಕಳವು ನಡೆದಿದೆ. ಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳರು. ಡ್ರಾವರ್ ನಲ್ಲಿದ್ದ ಸುಮಾರು 80 ಸಾವಿರ ಮೌಲ್ಯದ 15 ಗ್ರಾಂ ತೂಕದ ಚಿನ್ನವನ್ನು ಕಳವು ಮಾಡಿದ್ದಾರೆ.

ನಿತ್ಯವೂ ಅಂಗಡಿಗೆ ಬಾಗಿಲು ಹಾಕುವ ವೇಳೆಯಲ್ಲಿ ಪಾಲಿಶ್ ಅಂಗಡಿಯ ಮಾಲೀಕ ಸದಾನಂದ ಅವರು ಚಿನ್ನವನ್ನು ಮನೆಗೆ ಕೊಂಡೊಯ್ಯುತ್ತಿದ್ದರು. ಆದರೆ ನಿನ್ನೆ ಅವರು ಅನ್ಯ ಕಾರ್ಯದ ನಿಮಿತ್ತ ಅವರು ಚಿನ್ನವನ್ನು ಅಂಗಡಿಯಲ್ಲಿಯೇ ಇಟ್ಟು ಹೋಗಿದ್ದಾರೆನ್ನಲಾಗುತ್ತಿದೆ.

ಅಂಗಡಿಯಲ್ಲಿ ಚಿನ್ನಾಭರಣವಿರುವ ಮಾಹಿತಿಯನ್ನು ಪಡೆದೇ ಈ ಕೃತ್ಯವನ್ನೆಸಲಾಗಿದೆ ಎನ್ನಲಾಗುತ್ತಿದೆ. ಕಳ್ಳತನದ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಉಡುಪಿ ನಗರ ಠಾಣೆಯ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Comments are closed.