ಮಗು ಎತ್ತಿಕೊಂಡೆ, ಅಣ್ಣನೇ ಪಕ್ಕದಲ್ಲಿ ನಿಂತಂತಾಯ್ತು…! ಭಾವುಕರಾದ ಧ್ರುವ ಸರ್ಜಾ…!!

ಕಳೆದ ನಾಲ್ಕು ತಿಂಗಳಿನಿಂದ ನೋವಲ್ಲೇ ಮುಳುಗಿದ್ದ ನಟ ಚಿರಂಜೀವಿ ಸರ್ಜಾ ಕುಟುಂಬದಲ್ಲಿ ಈಗ ಖುಷಿಗಳಿಗೆಯೊಂದು ಮಗುವಾಗಿ ಜನಿಸಿದ್ದು, ಎಲ್ಲ ಅಂದುಕೊಂಡಂತೆ ಜ್ಯೂನಿಯರ್ ಚಿರುಗೆ ಮೇಘನಾ ಸರ್ಜಾ ಜನ್ಮ ನೀಡಿದ್ದಾರೆ.

ಅಣ್ಣನ ಅನುಪಸ್ಥಿತಿಯಲ್ಲಿ ನೊಂದಿರುವ ಧ್ರುವ, ಮಗುವನ್ನು ಎತ್ತಿಕೊಳ್ಳುತ್ತಿದ್ದಂತೆ ಅಣ್ಣನೇ ಜೊತೆ ನಿಂತಂತೆ ಆಯ್ತು ಎಂದು ಬಾವುಕರಾಗಿ ದ್ದಾರೆ.

ಚಿರು ಆಸೆಯಂತೆ ಮೇಘನಾ ಚಿರು ಸ್ನೇಹಿತನ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದರು. ದೇವರ ಆಶೀರ್ವಾದದಿಂದ ಸುರಕ್ಷಿತವಾಗಿ ಹೆರಿಗೆಯಾಗಿದ್ದು ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಅತ್ತಿಗೆ ಆಸ್ಪತ್ರೆಗೆ ದಾಖಲಾದಾಗಿನಿಂದ ಆಸ್ಪತ್ರೆಯಲ್ಲೇ ಇದ್ದು ಅವರಿಗೆ ಧೈರ್ಯ ತುಂಬುತ್ತಿದ್ದ ಧ್ರುವ ಸರ್ಜಾ ಮಗುವನ್ನು ಎತ್ತಿಕೊಂಡು ಕಣ್ಣೀರಿಟ್ಟಿದ್ದಾರೆ.  

ಆಗ ತಾನೇ ಜನಿಸಿ ಪಿಳಿ ಪಿಳಿ ಕಣ್ಣುಬಿಡುತ್ತಿದ್ದ ಆ ಪುಟ್ಟ ಕಂದನನ್ನು ಎತ್ತಿಕೊಂಡು ಅಣ್ಣನ ಪೋಟೋ ಬಳಿ ಇಟ್ಟು ಸಂಭ್ರಮಿಸಿದ ಧ್ರುವ ಸೇರಿದಂತೆ ಸರ್ಜಾ ಕುಟುಂಬ ಭಾವುಕವಾಗಿತ್ತು.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಧ್ರುವ, ಮಗುವನ್ನು ಎತ್ತಿಕೊಳ್ಳುತ್ತಿದ್ದಂತೆ ಅಣ್ಣ ನನ್ನ ಜೊತೆ ನಿಂತಂತೆ ಭಾಸವಾಯಿತು. ಆ ಖುಷಿಯನ್ನು ವರ್ಣಿಸಲು ಶಬ್ಧಗಳಿಲ್ಲ.  ಅಭಿಮಾನಿಗಳ ಆಶೀರ್ವಾದದಿಂದ ಅತ್ತಿಗೆ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದರು.

ಅಣ್ಣನಿಗೆ ತನಗೆ ಗಂಡು ಮಗುವೇ ಆಗೋದು ಅನ್ನೋ ಕಾನ್ಪಿಡೆನ್ಸ್ ಇತ್ತು. ಯಾವಾಗಲೂ ಹೇಳಿಕೊಳ್ತಿದ್ದ.ನಾನು ಅವನನ್ನು ರೇಗಿಸುತ್ತಿದ್ದೆ. ಚಿಕ್ಕವನಿದ್ದಾಗ ನಿನ್ನ ಮೇಲೆ ಜಾಸ್ತಿ ಕಂಪ್ಲೆಂಟ್ ಇತ್ತು ಅಂತ. ಅದಕ್ಕೆ ಅವನು ನನ್ನ ಮಗನ ಮೇಲೂ ಇರುತ್ತೆ ನೋಡು ಅಂತ ರೇಗಿಸುತ್ತಿದ್ದ ಎಂದು ಅಣ್ಣನ ಜೊತೆಗಿನ ಮಾತುಕತೆಯನ್ನು ಮೆಲುಕು ಹಾಕಿದ್ದಾರೆ.

ಇದನ್ನು ಓದಿ : ಗಜಕೇಸರಿ ಯೋಗದಲ್ಲಿ ಧರೆಗೆ ಬಂದ ಜ್ಯೂನಿಯರ್ ಚಿರು…! ಜ್ಯೋತಿಷ್ಯಿಗಳು ಏನಂತಾರೆ ಗೊತ್ತಾ…!!

ಆಸ್ಪತ್ರೆ ಮೂಲಗಳ ಪ್ರಕಾರ ಧ್ರುವ ಮಗುವನ್ನು ಎತ್ತಿಕೊಳ್ಳಲು ಕಾತುರದಿಂದ ಕಾಯುತ್ತಲೇ ಇದ್ದು, ಪ್ರತಿಕ್ಷಣ ಚಡಪಡಿಕೆಯಿಂದ ಓಡಾಡುತ್ತಿದ್ದರಂತೆ. ಗಂಡು ಮಗು ಎನ್ನುತ್ತಿದ್ದಂತೆ ನನ್ನ ಅಣ್ಣ ಚಿರು ಮತ್ತೆ ಹುಟ್ಟಿ ಬಂದ ಎಂದು ಸಂತೋಷದಿಂದ ಕಣ್ಣೀರಿಟ್ಟರಂತೆ.

ಇದನ್ನು ಓದಿ : ತೊಟ್ಟಿಲು ಹರಕೆಯನ್ನು ಕಟ್ಟಿದರೆ, ಸಂತಾನ ಭಾಗ್ಯ ಕರುಣಿಸುವ ಅಪ್ರಮೇಯ ಸ್ವಾಮಿ..! ಈ ದೇಗುಲದ ಮಹಾತ್ಮೆಯ ಬಗ್ಗೆ ನೀವು ತಿಳಿಯಲೇ ಬೇಕು.

ಒಟ್ಟಿನಲ್ಲಿ ಎಲ್ಲರ ಹಾರೈಕೆ ಹಾಗೂ ಆಶೀರ್ವಾದದಿಂದ ಮೇಘನಾ ಸುರಕ್ಷಿತವಾಗಿ ಮಗುವಿಗೆ ಜನ್ಮ ನೀಡಿದ್ದು ಬಾಳಿಬದುಕಬೇಕಿದ್ದ ಮಗನನ್ನು ಕಳೆದುಕೊಂಡು ಕಂಗಲಾಗಿದ್ದ ಕುಟುಂಬಕ್ಕೆ ಪುಟ್ಟ ಕಂದ ಭರವಸೆಯ ಸೆಲೆಯಾಗಿದೆ.

Comments are closed.