Udupi : ಮಾದಕ ವಸ್ತು ಸೇವಿಸಿ ಸೌಮ್ಯ ಕೊಲೆ : ಸಂದೇಶ್‌ ವಿರುದ್ದ ಪೋಷಕರ ಆಕ್ರೋಶ

ಉಡುಪಿ : ಕಳೆದೊಂದು ವಾರದ ಹಿಂದೆಯಷ್ಟೆ ಉಡುಪಿ ಜಿಲ್ಲೆಯ ಸಂತೆಕಟ್ಟೆಯ ಬಳಿಯಲ್ಲಿ ನಡೆದಿದ್ದ ಪ್ರೇಯಸಿಯನ್ನು ಹತ್ಯೆಗೈದು, ನಂತರ ಯುವಕ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಇದೀಗ ಬಿಗ್‌ ಟ್ವೀಸ್ಟ್‌ ಸಿಕ್ಕಿದ್ದು, ಕೊಲೆಯಾದ ಸೌಮ್ಯ ಭಂಡಾರಿ ಪೋಷಕರು ಆರೋಪಿ ಸಂದೇಶ್‌ ಕುಲಾಲ್‌ ಮಾದಕ ವಸ್ತು ಸೇವನೆ ಮಾಡಿ ಈ ಕೃತ್ಯ ಎಸಗಿದ್ದಾನೆ ಅಂತಾ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಮ್ಯ ಭಂಡಾರಿ ಹಾಗೂ ಸಂದೇಶ್‌ ಕುಲಾಲ್‌ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಮಾತುಕತೆಗೆ ಅವರ ಮನೆಗೆ ತೆರಳಿದ್ದೇವೆ ಆದರೆ ಸಂದೇಶ್‌ ಹಾಗೂ ಆತನ ಮನೆಯವರು ಸೂಕ್ತ ಉತ್ತರವನ್ನೇ ನೀಡಿರಲಿಲ್ಲ. ಒಮ್ಮೆ ಮಾವ, ಇನ್ನೊಮ್ಮೆ ಅಣ್ಣನಿಗೆ ಮದುವೆಯಾಗಬೇಕು ಎಂದಿದ್ದ. ಸೌಮ್ಯ ಭಂಡಾರಿ ತಂದೆಗೆ ಹೃದಯಾಘಾತವಾದ ಸಂದರ್ಭದಲ್ಲಿ ಮದುವೆಯಾಗುವಂತೆ ಮನವಿ ಮಾಡಿದ್ದೇವು. ರಿಜಿಸ್ಟ್ರಾರ್‌ ಮದುವೆ ಆಗೋದಕ್ಕೆ ತಿಳಿಸಿದ್ದರೂ ಕೂಡ ಆತ ಹಾಗೂ ಮನೆಯವರು ಒಪ್ಪಿಗೆ ಸೂಚಿಸಿರಲಿಲ್ಲ. ಸೌಮ್ಯ ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಮದುವೆಗೆ ಒಪ್ಪಿಗೆ ಸೂಚಿಸಿದ್ದೇವು. ಅಂತಿಮವಾಗಿ ಬೇಸತ್ತ ಸೌಮ್ಯಳಿಗೆ ಬೇರೊಬ್ಬ ಯುವಕನ ಜೊತೆಗೆ ಮದುವೆ ನಿಶ್ಚಯ ಮಾಡಲಾಗಿತ್ತು ಎಂದಿದ್ದಾರೆ.

ಸೌಮ್ಯ ಭಂಡಾರಿ ಖಾಸಗಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಸಂದೇಶ ಕುಲಾಲ್‌ ಆಕೆಯಿಂದ ಹಲವು ಬಾರಿ ತನ್ನ ಕೆಲಸಗಳನ್ನು ಮಾಡಿಕೊಂಡಿದ್ದಾನೆ. ಕೆಲವು ಬಾರಿ ಬ್ಯಾಂಕಿಗೆ ತೆರಳಿ ಕಿರುಕುಳವನ್ನೂ ನೀಡಿದ್ದ. ಸಂದೇಶ ಮೆಡಿಕಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾದಕ ವಸ್ತು ಸೇವನೆ ಮಾಡಿ ಈ ಕೃತ್ಯವನ್ನು ಮಾಡಿರ ಬಹುದು ಎಂದು ಆರೋಪಿಸಿದ್ದಾರೆ. ಮೂರು ತಿಂಗಳಿಂದಲೂ ಪರಸ್ಪರ ಇಬ್ಬರೂ ಭೇಟಿಯಾಗಿರಲಿಲ್ಲ, ಬೈಕಿನಲ್ಲಿ ಸುತ್ತಾಡಿದ್ದಾರೆ ಅನ್ನೋದು ಸುಳ್ಳು ಎಂದಿರುವ ಪೋಷಕರು. ಸೌಮ್ಯ ಗೆ ಸಂದೇಶ ಕಿರುಕುಳ ನೀಡುತ್ತಿರುವ ಕುರಿತು ಉಡುಪಿ ಮಹಿಳಾ ಪೊಲೀಸ್‌ ಠಾಣೆಗೆ ಕಳೆದೊಂದು ತಿಂಗಳ ಹಿಂದೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ಸೌಮ್ಯ ತಾಯಿ ಸುಶೀಲಾ ಕಣ್ಣೀರಿಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸೌಮ್ಯ ಭಂಡಾರಿ ಅವರ ಅಣ್ಣ ಸುನಿತ್‌, ಅತ್ತಿಗೆ ನಿರೀಕ್ಷಾ ಅಲ್ಲದೇ ಸೋಮಶೇಖರ ಭಂಡಾರಿ, ಅಶೋಕ್‌ ಕುಮಾರ್‌ ಅಲೆವೂರು ಹಾಗೂ ಜಗದೀಶ್‌ ಉಪಸ್ಥಿತರಿದ್ದರು.

ಇದನ್ನೂ ಓದಿ : ಪ್ರೀತಿಸಿದಾಕೆಗೆ ಮತ್ತೋರ್ವನ ಜೊತೆ ನಿಶ್ವಿತಾರ್ಥ : ಉಡುಪಿಯಲ್ಲಿ ಪ್ರೇಯಸಿಯ ಕತ್ತು ಕೊಯ್ದ ಪ್ರಿಯಕರ

ಇದನ್ನೂ ಓದಿ : ಪ್ರಿಯತಮೆಯ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

( Udupi : Soumya Bhandari murder Sandesh Kulal near Santhekatte story follow up )

Comments are closed.