ಒಂದೇ ಮನೆಯ ಐವರು ನಿಗೂಢವಾಗಿ ನಾಪತ್ತೆ ..!! ಅಷ್ಟಕ್ಕೂ ಆಗಿದ್ದೇನು ಗೊತ್ತಾ..?

ಮೂಡಬಿದಿರೆ: ಒಂದೇ ಮನೆಯ ಐವರು ನಾಪತ್ತೆಯಾಗಿರುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಕಾರಿಂಜದ‌ ಸುವರ್ಣ ನಗರದಲ್ಲಿ ನಡೆದಿದೆ.

ಕಾರಿಂಜ ಸುವರ್ಣ ನಗರದ ನಿವಾಸಿ ಜ್ಯೋತಿ ಮಣಿ (36 ವರ್ಷ), ದೆಬೋರ (11‌ವರ್ಷ ), ಜುಡಾ ಇಮಾನ್ವೇಲ್ (10 ವರ್ಷ), ಎಪ್ಸಿಬಾ (8 ವರ್ಷ ) ಹಾಗೂ ಮನೋರಂಜಿತಂ (56 ವರ್ಷ )ಎಂಬವರೇ ನಾಪತ್ತೆಯಾದವರು.

ಜಯರಾಜ್ ಶೇಖರ್ ಅವರ ಪತ್ನಿಯಾಗಿರುವ ಜ್ಯೋತಿಮಣಿ ಅವರು ತನ್ನ ಮಕ್ಕಳಾದ ದೆಬೋರ, ಜುಡಾ ಇಮಾನ್ವೇಲ್, ಎಪ್ಸಿಬಾ ಹಾಗೂ ಅತ್ತೆ ಮನೋರಂಜಿತಂ ಜತೆ ನಾಪತ್ತೆಯಾಗಿದ್ದಾರೆ. ಅಲ್ಲದೇ ಮನೆಯಲ್ಲಿ ಇರಿಸಲಾಗಿದ್ದ ಚಿನ್ನದ ಆಭರಣ ಹಾಗೂ 1.40ಲಕ್ಷ ರೂಪಾಯಿ ‌ಹಣ ತೆಗೆದುಕೊಂಡು ಹೋಗಿದ್ದಾರೆ ‌ಎಂದು‌ ಜಯರಾಜ್ ಶೇಖರ್ ಅವರು ಮೂಡಬಿದಿರೆ ಪೊಲೀಸ್ ಠಾಣೆಗೆ‌ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಜ್ಯೋತಿ ಮಣಿ ಅವರು ತನ್ನ ಬಂಗಾರದ ಒಡವೆಗಳನ್ನು ಫೈನಾನ್ಸ್‌ ವೊಂದರಲ್ಲಿ ಅಡಮಾನ ಇಟ್ಟಿದ್ದರು. ಇದರಿಂದ ಬಂದ 1.80 ಲಕ್ಷ ರೂ.ನ್ನು ಆಕೆಯ ಸ್ನೇಹಿತನಿಗೆ ನೀಡಿದ್ದು, ಅಡಮಾನ ಇಟ್ಟಿದ್ದ ಒಡವೆಗಳನ್ನು ಬಿಡಿಸಿಕೊಂಡು ಬರುವಂತೆ ಪತಿ ಸೂಚಿಸಿದ ಬೆನ್ನಲ್ಲೇ ಮನೆಯಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.