Pramod Muthalik:ಪ್ರಮೋದ್​​ ಮುತಾಲಿಕ್​​ ಶ್ರೇಯೋಭಿವೃದ್ಧಿಗಾಗಿ ಮಹಾಯಾಗ

ಉಡುಪಿ :Pramod Muthalik : ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಶ್ರೇಯೋಭಿವೃದ್ಧಿಗೆ ನರಸಿಂಹ ಯಾಗವೊಂದ ನಡೆದಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ದಂಡ ತೀರ್ಥ ಮಠದಲ್ಲಿ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮಣ್ಣಾಯ ನೇತೃತ್ವದಲ್ಲಿ ಈ ಮಹಾ ಯಾಗ ನಡೆದಿದೆ. ಈ ನರಸಿಂಹ ಯಾಗದ ಪೂರ್ಣಾಹುತಿಯಲ್ಲಿ ಪ್ರಮೋದ್ ಮುತಾಲಿಕ್ ಭಾಗಿಯಾಗಿದ್ದರು.

ಶ್ರೀರಾಮ ಸೇನೆ ಮತ್ತು ಮುತಾಲಿಕ್ ಅಭಿಮಾನಿಗಳು ಈ ಯಾಗವನ್ನು ಹಮ್ಮಿಕೊಂಡಿದ್ದು ಮಹಾಯಾಗದ ಪೂರ್ಣಾವತಿಯ ಬಳಿಕ ಜ್ಯೋತಿಷಿ ಪ್ರಕಾಶ ಅಮ್ಮಣ್ಣಾಯ ಮಾಧ್ಯಮಗಳ ಜೊತೆ ಮಾತನಾಡಿದ್ದು ಶತ್ರುಗಳು ಬಾರದಂತೆ ನರಸಿಂಹ ದೇವರಲ್ಲಿ ಪ್ರಾರ್ಥಿಸಲು ಈ ಯಾಗ ಮಾಡಲಾಗಿದೆ ಎಂದು ಪ್ರಕಾಶ ಅಮ್ಮಣ್ಣಾಯ ಹೇಳಿದ್ದಾರೆ. ಸಜ್ಜನರು ನಿರ್ಭಯದಿಂದ ಓಡಾಡುವಂತಾಗಬೇಕು. ಸಜ್ಜನರು ನಿರ್ಭಯದಿಂದ ಇರಬೇಕಾದರೆ ದುರ್ಜನರು ಇರಬಾರದು. ದುರ್ಜನರಿಗೆ ದೇವರು ಸದ್ಬುದ್ಧಿಯನ್ನು ಕೊಡಬೇಕು ಎಂದರು.

ಪ್ರಮೋದ್ ಮುತಾಲಿಕರಿಗೆ ಯಾಗ ನಡೆಸುವಂತೆ ನಾನು ಪ್ರೇರಣೆ ಕೊಟ್ಟಿದ್ದೆ ಎಂದ ಪ್ರಕಾಶ ಅಮ್ಮಣ್ಣಾಯ, ಸತ್ಕರ್ಮ ಮಾಡುವವರಿಗೆ ಸೂಕ್ತ ರಕ್ಷಣೆ ಇರಬೇಕು. ಸೂಕ್ತ ರಕ್ಷಣೆ ಇಲ್ಲದೆ ಸತ್ಕರ್ಮ ಮಾಡಲು ಹೊರಟವರಿಗೆ ಅಪಾಯ ಮುಂದಾಗುತ್ತೆ. ಮುತಾಲಿಕರು ನಡೆಸುವ ಕಾರ್ಯಗಳಿಗೆ ದೈವಬಲ ಮತ್ತು ರಕ್ಷಣೆಯ ಅಗತ್ಯವಿದೆ. ನರಸಿಂಹ ದೇವರಿಗೆ ಸಂಬಂಧಿಸಿದ ಮನ್ಯು ಸೂಕ್ತ ಯಾಗ ನಡೆಸಿದ್ದೇವೆ. ಶತ್ರುಗಳು ಬಾರದಂತೆ ನರಸಿಂಹ ದೇವರಲ್ಲಿ ಪ್ರಾರ್ಥಿಸಲು ಮಾಡುವ ಯಾಗ ಇದಾಗಿದೆ ಎಂದರು.

ಕೆಲವರು ಅನಿವಾರ್ಯತೆಯಲ್ಲಿ ನಮಗೆ ಶತ್ರುಗಳಾಗುತ್ತಾರೆ, ಅವರಿಗೆ ಕೇಡು ಬಯಸಬಾರದು. ಆದರೆ ಉದ್ದೇಶಪೂರ್ವಕವಾಗಿ ಕೇಡು ಬಯಸುವವರು, ಅನ್ಯ ದೇಶದಿಂದ ದಾಳಿ ಇತ್ಯಾದಿ ಮಾಡುವಂತರನ್ನು ಪರಿವರ್ತನೆ ಮಾಡಲು ಸಾಧ್ಯವಿಲ್ಲ ನಾಶ ಮಾಡಲೇಬೇಕು‌. ಈ ಬಗ್ಗೆ ನರಸಿಂಹ ದೇವರನ್ನು ಪ್ರಾರ್ಥನೆ ಮಾಡಲಾಗಿದೆ ಎಂದು ಪ್ರಕಾಶ ಅಮ್ಮಣ್ಣಾಯ ಹೇಳಿದರು. ಪ್ರಮೋದ್ ಮುತಾಲಿಕ್ ಅವರ ರಾಜಕೀಯ ಭವಿಷ್ಯ ವಿಚಾರ‌. ರಾಜಕೀಯ ಅಂದರೆ ಗವರ್ನಿಂಗ್ ದ ವರ್ಕ್ ಅಂಡ್ ಐಡಿಯಾಲಜಿ‌. ಈ ಗುಣ ಮುತಾಲಿಕ್ ಅವರಲ್ಲಿದೆ. ಕೆಲಸ ಮತ್ತು ಚಿಂತನೆಯನ್ನು ಸಮರ್ಥವಾಗಿ ಮಾಡುವ ಶಕ್ತಿ ಮುತಾಲಿಕ್ ಗೆ ಇದೆ. ಮುತಾಲಿಕ್ ರಾಜಕೀಯಕ್ಕೆ ಹೋಗುತ್ತಾರೋ ಇಲ್ಲವೋ ಅನ್ನೋದು ಅವರ ಸೇನೆ ಸಂಘಟನೆಗೆ ಬಿಟ್ಟ ವಿಚಾರ. ಮುತಾಲಿಕ್ ಅವರ ಮನಸ್ಥಿತಿಯನ್ನು ಸ್ಥಿರವಾಗಿಡುವ ದೇವತಾ ಪ್ರಾರ್ಥನೆ ಮಾಡಿದ್ದೇವೆ‌. ರಾಜಕೀಯಕ್ಕೆ ಬರಬೇಕು ಬೇಡವೋ ಅನ್ನೋದು ಅವರಿಗೆ ಬಿಟ್ಟ ವಿಚಾರ ಎಂದರು.

ಇನ್ನೂ ಈ ಯಾಗ ನಡೆಸಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಪ್ರಮೋದ್ ಮುತಾಲಿಕ್, ಹಿಂದೂ ಸಮಾಜ ಮತ್ತು ಹಿಂದೂ ರಾಷ್ಟ್ರಕ್ಕೆ ಬಲಕ್ಕಾಗಿ ಯಾಗ, ಹಿಂದುಗಳ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದ ಯಾಗ ಇದು ಎಂದು ಹೇಳಿದ್ದಾರೆ. ಅತ್ಯಂತ ಶಾಸ್ತ್ರೋಕ್ತವಾಗಿ ಯಾಗ- ಹೋಮವನ್ನು ಮಾಡಲಾಯಿತು. ಹಿಂದೂ ಸಮಾಜಕ್ಕೆ ಬಲ ಸಿಗಬೇಕು ಎಂಬುದೇ ಈ ಯಾಗದ ಉದ್ದೇಶ. ನನ್ನ ಜೀವನದಲ್ಲಿ ವೈಯಕ್ತಿಕ ಎಂಬುದೇ ಇಲ್ಲ. ಕಳೆದ 46 ವರ್ಷಗಳಿಂದ ನಾನು ಇರುವುದೇ ಹಿಂದೂ ಸಮಾಜಕ್ಕೋಸ್ಕರ‌. ನನ್ನ ಶಕ್ತಿಯನ್ನು ಹಿಂದೂ ಸಮಾಜಕ್ಕೆ ಅರ್ಪಣೆ ಮಾಡಿದ್ದೇನೆ. ಹಿಂದೂ ರಾಷ್ಟ್ರ ನಿರ್ಮಾಣ ಆಗಬೇಕು ಶತ್ರುಗಳ ನಾಶ ಆಗಬೇಕು ಎಂದು ಸಂಕಲ್ಪ ಮಾಡಿದ್ದೇವೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ಇದನ್ನು ಓದಿ : Selfless Virat Kohli: ದಾಖಲೆಗಾಗಿ ಆಡಲ್ಲ ವಿರಾಟ್, ಇಲ್ಲಿದೆ ಮತ್ತೊಂದು ಸಾಕ್ಷಿ, ಕಿಂಗ್ ಕೊಹ್ಲಿ ನಿಸ್ವಾರ್ಥತೆಗೆ ಫ್ಯಾನ್ಸ್ ಫಿದಾ

ಇದನ್ನೂ ಓದಿ : Yellow Alert : ಮತ್ತೆ ಶುರುವಾಯ್ತಾ ವರುಣನ ನರ್ತನ : ಹಳದಿ ಅಲರ್ಟ್‌ ಘೋಷಣೆ

Pramod Muthalik Mahayaga for career development

Comments are closed.