ಉಡುಪಿಯ ಶಿಕ್ಷಕಿ ಕೊರೊನಾದಿಂದ ಸಾವು : ಅಂತ್ಯಕ್ರಿಯೆಗೆ ಬಾರದ ಸಂಬಂಧಿಕರು

ಉಡುಪಿ : ಶಿಕ್ಷಕಿಯೋರ್ವರು ಕೊರೊನಾ ಸೋಂಕಿನಿಂದ ಮೃತಪಟ್ಟಿ ದ್ದರು. ಆದರೆ ಕೊರೊನಾ ಸುದ್ದಿ ತಿಳಿಯುತ್ತಲೇ ಸಂಬಂಧಿಕರು ಅಂತ್ಯಕ್ರೀಯೆಗೆ ಹಾಜರಾಗಲು ಹಿಂದೇಟು ಹಾಕಿದ್ದಾರೆ. ಕೊನೆಗೆ ಸಮಾಜ ಸೇವಕ ನಿತ್ಯಾನಂದ ಒಳಕಾಡು ಶವ ಸಾಗಾಟ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಉಡುಪಿಯ ಕುಕ್ಕಿಕಟ್ಟೆಯ ಇಂದಿರಾನಗರದ ಮನೆಯಲ್ಲಿದ್ದ ವಾಸವಾಗಿದ್ದ ಶಿಕ್ಷಕಿ ಸರೋಜ ಅಸೌಖ್ಯದಿಂದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಈ ವೇಳೆಯಲ್ಲಿ ಕೊರೊನಾ‌ ಸೋಂಕು  ದೃಢಪಟ್ಟಿದೆ. ಕೊರೊನಾ ವೈರಸ್ ಸೋಂಕಿನಿಂದಾಗಿ ಭೀತಿಗೊಳಗಾಗಿ ಕುಟುಂಬಿಕರು ಶವದ ಬಳಿ ಸುಳಿಯಲು ಹಿಂದೇಟು ಹಾಕಿದ್ದಾರೆ.

ನಂತರ ಮಾಜಸೇವಕ ನಿತ್ಯಾನಂದ ಒಳಕಾಡು ಅವರು, ಅಜ್ಜರಕಾಡು ಜಿಲ್ಲಾಸ್ಪತ್ರೆಯಿಂದ ತಮ್ಮ ಆಂಬ್ಯುಲೆನ್ಸ್ ನಲ್ಲಿ ಶವ ಸಾಗಿಸಿದ್ದಾರೆ. ಅಲ್ಲದೇ ಯಶೋಧಾಮ ಆಟೋ ಯೂನಿಯನ್ ಕಾರ್ಯಕರ್ತರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

Comments are closed.