ಲಾಕ್ ಡೌನ್ ನಲ್ಲಿ ಆಶ್ರಮ ಸೇರಿದ ದರ್ಶನ್….! ಅಂತಹದ್ದೇನಾಯ್ತು ಡಿ ಬಾಸ್ ಗೆ? ಇಲ್ಲಿದೆ ಡಿಟೇಲ್ಸ್…!!

ಸ್ಯಾಂಡಲ್ ವುಡ್ ಬಾಕ್ಸಾಫೀಸ್ ಕಿಂಗ್ ಖ್ಯಾತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲರಂತಲ್ಲ. ಸ್ಟಾರ್ ಗಳು ಪಾರ್ಟಿ,ಪ್ರೋಗ್ರಾಂ ಅಂತ ಓಡಾಡಿದ್ರೇ ನಟ ದರ್ಶನ್ ಪ್ರಾಣಿ,ಪಕ್ಷಿ,ತೋಟ ಅಂತ ಸಮಯ ಕಳೆಯುತ್ತಾರೆ.

ಈಗಲೂ ರಾಜ್ಯದ ಎಲ್ಲೆಡೆ ಲಾಕ್ ಡೌನ್ ಜಾರಿಯಾಗಿದ್ದು ದಚ್ಚು ಸೇಫಾಗಿ ತಮ್ಮ ಮೈಸೂರಿನ ತೋಟದ ಮನೆ ಸೇರಿಕೊಂಡಿದ್ದಾರೆ.

ಆದರೆ ತೋಟದ ಮನೆಯಲ್ಲಿ ಕೃಷಿ,ಪ್ರಾಣಿಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದ ದರ್ಶನ್ ಇದ್ದಕಿದ್ದಂತೆ ಆಶ್ರಮದ ಮೊರೆ ಹೋಗಿದ್ದಾರಂತೆ.
ದಚ್ಚು ಈಗ್ಯಾಕೆ ಆಶ್ರಮದ ಮೊರೆ ಹೋದ್ರು ಅಂತ ಕಂಗಾಲಾದ್ರಾ ಇಷ್ಟ ಕ್ಕೂ ದರ್ಶನ್ ಹೋಗಿರೋದು ಮೈಸೂರಿನ ಸಚ್ಚಿದಾನಂದ‌ಗಣಪತಿ ಆಶ್ರಮಕ್ಕೆ.

https://kannada.newsnext.live/karnataka-covid-update-2013913-total-case/amp/

ಪ್ರಾಣಿ ಪಕ್ಷಿಗಳನ್ನು ಅಪಾರವಾಗಿ ಪ್ರೀತಿಸುವ ದರ್ಶನ್ , ಸಚ್ಚಿದಾನಂದ ಗಣಪತಿ ಆಶ್ರಮಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದುಕೊಂಡಿದ್ದಾರೆ.ಅಷ್ಟು ಮಾತ್ರವಲ್ಲ ಅಲ್ಲಿನ ಪ್ರಮುಖ ಆಕರ್ಷಣೆಯಾಗಿರುವ ಶುಕವನಕ್ಕೂ ಭೇಟಿ ನೀಡಿದ್ದಾರೆ. ಅಲ್ಲಿನ ಸುಂದರವಾದ ಹಾಗೂ ಮನಸೆಳೆಯುವ ದೊಡ್ಡ ದೊಡ್ಡ ಗಿಳಿಗಳ ಜೊತೆ ಆಟವಾಡಿ ಸಂಭ್ರಮಿಸಿದ್ದಾರೆ.

https://kannada.newsnext.live/teachers-death-corona-relations-not-attend-crimitions/amp/

ಕೇವಲ ಆಟ ಆಡಿದ್ದು ಮಾತ್ರವಲ್ಲದೇ ತಮ್ಮ ಸ್ಟಾರ್ ಗಿರಿ ಹಮ್ಮುಬಿಮ್ಮು ಬಿಟ್ಟು ಕೆಲವು ಗಂಟೆಗಳ ಆಶ್ರಮದ ಪ್ರಾಣಿ ಹಾಗೂ ಪಕ್ಷಿಗಳ ಸೇವೆ ಕೂಡ ಮಾಡಿದ್ದಾರಂತೆ.ದರ್ಶನ್ ಗೆ ಸ್ವಾಮೀಜಿ ಗಿಳಿಯೊಂದನ್ನು ಗಿಫ್ಟ್ ಆಗಿ ನೀಡಿದ್ದು ಈಗ ಆ ಗಿಳಿ ದರ್ಶನ್ ಫಾರ್ಮ್ ಹೌಸ್ ಸೇರಿದೆ.

https://kannada.newsnext.live/ccb-police-fire-gagster-soorya-arrest-bangalore/amp/

ಒಟ್ಟಿನಲ್ಲಿ ಲಾಕ್ ಡೌನ್ ನಲ್ಲೂ ದಚ್ಚು ತಮ್ಮಿಷ್ಟದ ಕೆಲಸದಲ್ಲಿ ಬ್ಯುಸಿಯಾಗಿದ್ದು ಯಜಮಾನನ ಪ್ರೀತಿ,ಆದರ ಹಾಗೂ ಸೇವೆಗೆ ಪ್ರಾಣಿ ಪಕ್ಷಿಗಳು ಫುಲ್ ಖುಷಿಯಾದಂತಿದೆ.

Comments are closed.