ಕೋಟ : ಮಣೂರು ಬಳಿಯಲ್ಲಿ ಅಪಘಾತ : ಓರ್ವ ಸಾವು, ಚಾಲಕ ಪರಾರಿ

ಕೋಟ : ವಿಜಯಪುರದಿಂದ ಮಂಗಳೂರಿಗೆ ಕಲ್ಲಾಪುವಿನ ಎಪಿಎಂಸಿಗೆ ಹಣ್ಣುಗಳನ್ನು ಸರಬರಾಜು ಮಾಡುತ್ತಿದ್ದ ಬೊಲೆರೋ ವಾಹನ ಪಿಕಪ್‌ ವಾಹನ ಉಡುಪಿ ಜಿಲ್ಲೆಯ ಕೋಟ ಸಮೀಪದ ಮಣೂರಿನಲ್ಲಿ ಪಲ್ಟಿಯಾಗಿದೆ. ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಚಾಲಕ ಪರಾರಿಯಾಗಿದ್ದಾನೆ.

ಮಹಾರಾಷ್ಟ್ರದ ಸಾಂಗ್ಲಿಯ ನಿವಾಸಿ ದಿನೇಶ್‌ ಚಂದ್ರ ಮುಂಚಾಂಡಿ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಸಾಂಗ್ಲಿಯ ನಿವಾಸಿ ಶಿವಪುತ್ರ ಎಂಬಾತನೇ ನಾಪತ್ತೆಯಾಗಿರುವ ಪಿಕ್‌ಅಪ್‌ ಚಾಲಕನಾಗಿದ್ದಾನೆ. ವಿಜಯಪುರಿಂದ ಮಂಗಳೂರಿಗೆ ತೆರಳುತ್ತಿದ್ದ ವೇಳೆಯಲ್ಲಿ ಮಣೂರಿನ ರಾಜಲಕ್ಷ್ಮೀ ಸಭಾಭವನದ ಬಳಿಯಲ್ಲಿ ಬರುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಸಹ ಚಾಲಕ ದಿನೇಶ್‌ ಚಂದ್ರಶೇಖರ್‌ ಎಂಬಾತ ವಾಹನದಿಂದ ರಸ್ತೆಗೆ ಬಿದ್ದಿದ್ದು, ವಾಹನ ಹರಿದು ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಕೋಟ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇನ್ನು ಶವವನ್ನು ಬ್ರಹ್ಮಾವರದ ಶವಾಗಾರಕ್ಕೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಕುಂದಾಪುರ : ಭಾರೀ ಗಾಳಿ ಮಳೆಗೆ ಮಗುಚಿದ ದೋಣಿಗಳು : ಆರು ಮಂದಿ ಮೀನುಗಾರರ ರಕ್ಷಣೆ

ಇದನ್ನೂ ಓದಿ : ಕೊಲ್ಲೂರು ದೇವಳ ಪ್ರವೇಶಕ್ಕಿನ್ನು ಆಧಾರ್‌ ಕಡ್ಡಾಯ : ಕೇರಳ ಭಕ್ತರ ನಿಗಾಕ್ಕೆ ಉಡುಪಿ ಜಿಲ್ಲಾಡಳಿತದ ಹೊಸ ಆದೇಶ

(Udupi News : Mahindra pickup Accident one death Driver escape )

Comments are closed.