ಗುಜರಾತ್​ ಟೈಟನ್ಸ್​ ವಿರುದ್ಧ ರಣರೋಚಕ ವಿಜಯ : ಸತತ 2ನೇ ಬಾರಿ ಕಪ್​ ಎತ್ತಿ ಹಿಡಿದ ಆರ್​ಸಿಬಿ

ಗುಜರಾತ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ ಫೈನಲ್​ ಕಾದಾಟದಲ್ಲಿ ಗುಜರಾತ್​ ಟೈಟನ್ಸ್​ ವಿರುದ್ಧ ಸೆಣೆಸಿದ ಆರ್​ಸಿಬಿ, ರಣರೋಚಕ ಜಯ ದಾಖಲಿಸಿದೆ.ಈ ಮೂಲಕ ಆರ್​ಸಿಬಿ ತಂಡವು ಐಪಿಎಲ್​ ಚಾಂಪಿಯನ್​ ಟ್ರೋಫಿಗೆ 2ನೇ ಬಾರಿಗೆ ಮುತ್ತಿಡುವ ಮೂಲಕ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದೆ.

ಗುಜರಾತ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ ಫೈನಲ್​ ಕಾದಾಟದಲ್ಲಿ ಗುಜರಾತ್​ ಟೈಟನ್ಸ್​ ವಿರುದ್ಧ ಸೆಣೆಸಿದ ಆರ್​ಸಿಬಿ, ರಣರೋಚಕ ಜಯ ದಾಖಲಿಸಿದೆ.ಈ ಮೂಲಕ ಆರ್​ಸಿಬಿ ತಂಡವು ಐಪಿಎಲ್​ ಚಾಂಪಿಯನ್​ ಟ್ರೋಫಿಗೆ 2ನೇ ಬಾರಿಗೆ ಮುತ್ತಿಡುವ ಮೂಲಕ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದೆ. ಕಳೆದ 17 ವರ್ಷಗಳಲ್ಲಿ ಒಂದೆ ಒಂದು ಕಪ್​ ಗೆಲ್ಲದಿದ್ದರೂ ಅಭಿಮಾನಿಗಳಿಂದ ಅತೀವ ಪ್ರೀತಿ ಸಂಪಾದಿಸಿಕೊಂಡೇ ಬಂದಿದ್ದ ಆರ್​ಸಿಬಿ, ಇದೀಗ ಸತತ 2 ಬಾರಿ ಕಪ್​ ಗೆಲ್ಲುವ ಮೂಲಕ ಅಭಿಮಾನಿಗಳ ಋಣ ತೀರಿಸುವ ಕಾರ್ಯ ಮಾಡಿದೆ.

ಟಾಸ್​ ಗೆದ್ದ ಆರ್​ಸಿಬಿ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿತು.ಗುಜರಾತ್​ ಟೈಟನ್ಸ್​ನ ಜೋಡೆತ್ತುಗಳಾದ ಶುಭಮನ್​ ಗಿಲ್​ ಹಾಗೂ ಸಾಯಿ ಸುದರ್ಶನ್​ಗೆ ಹೆಚ್ಚು ಕಾಲ ಜೊತೆಯಾಟವಾಡಲು ಬಿಡದ ಆರ್​ಸಿಬಿ ಬೌಲರ್ಸ್ ಇಬ್ಬರನ್ನು ಬೇಗ ಔಟ್​ ಮಾಡಿತು. ಗಿಲ್​ ಕೇವಲ 10 ರನ್​ಗಳಿಗೆ ಪೆವಿಲಿಯನ್​ಗೆ ಮರಳಿದ್ರೆ, ಸಾಯಿ ಸುದರ್ಶನ್​ 12 ರನ್​ಗಳಿಸಿ ಔಟ್​ ಆದರು.

ಈ ರೀತಿಯಾಗಿ ಗುಜರಾತ್​ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ಆರ್​ಸಿಬಿ 156 ರನ್​ಗಳ ಸವಾಲನ್ನು ಪಡೆದುಕೊಂಡಿತು. ವಿರಾಟ್ ಕೊಹ್ಲಿ ಅವರ ಅಜೇಯ ಅರ್ಧಶತಕದ ನೆರವಿನಿಂದ 18 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಫಿನಾಲೆ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಇತ್ತ ಗುಜರಾತ್​ ಟೈಟನ್ಸ್​ ಐಪಿಎಲ್​ ಆವೃತ್ತಿಯಲ್ಲಿ 2ನೇ ಬಾರಿಗೆ ತವರು ಮೈದಾನದಲ್ಲೇ ನಡೆದ ಫೈನಲ್​ ಕಾದಾಟದಲ್ಲಿ ಸೋಲು ಕಂಡಂತಾಗಿದೆ.

Also Read: RCB vs GT IPL 2026 Final: ಸತತ 2ನೇ ಬಾರಿ ಟ್ರೋಫಿ ಗೆದ್ದ RCB; ಯಾರಿಗೆ ಸಿಕ್ತು Tata EV ಕಾರ್?

ಇನ್ನು ಈ ಗೆಲುವಿನ ಜೊತೆಯಲ್ಲಿ ಆರ್​ಸಿಬಿ, ಐಪಿಎಲ್​ ಇತಿಹಾಸದಲ್ಲಿ ಹಲವು ಇತಿಹಾಸಗಳನ್ನು ಬರೆದಿದೆ. ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಮುಂಬೈ ಇಂಡಿಯನ್ಸ್​ ಬಳಿಕ ಸತತ 2ನೇ ಬಾರಿ ಐಪಿಎಲ್​ ಫೈನಲ್​ ಪಂದ್ಯ ಗೆದ್ದ ತಂಡ ಎಂಬ ಕೀರ್ತಿಗೆ ಪಾತ್ರವಾಗಿದೆ. ಮಾತ್ರವಲ್ಲದೇ ಆರ್​ಸಿಬಿ ಫ್ರಾಂಚೈಸಿಗೆ ಕಳೆದ ಮೂರು ವರ್ಷಗಳಲ್ಲಿ ಒಲಿದು ಬಂದ 4ನೇ ಟ್ರೋಫಿ ಇದಾಗಿದೆ. ಅಲ್ಲದೇ ಮಹಿಳಾ ಹಾಗೂ ಪುರುಷರ ಆವೃತ್ತಿಗಳೆರಡರಲ್ಲಿಯೂ ಸತತ 2 ವರ್ಷಗಳಿಂದ ಆರ್​ಸಿಬಿಯೇ ಚಾಂಪಿಯನ್​ ಸ್ಥಾನದಲ್ಲಿ ಭದ್ರವಾಗಿ ಬೇರೂರಿದೆ.

A thrilling victory over Gujarat Titans RCB lifts the cup for the second time in a row

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories