Dubai Crime News : ದುಬೈಗೆ ಪದವಿ ಶಿಕ್ಷಣಕ್ಕೆಂದು ಹೋದ ಉಡುಪಿ ವಿದ್ಯಾರ್ಥಿ ಮೃತ್ಯು

ದುಬೈ : ದುಬೈಗೆ ಪದವಿ ಶಿಕ್ಷಣಕ್ಕೆಂದು ತೆರಳಿದ್ದ ಕರಾವಳಿಯ ವಿದ್ಯಾರ್ಥಿಯೊಬ್ಬ ಅನಾರೋಗ್ಯದಿಂದ ಮೃತಪಟ್ಟಿರುವ ಘಟನೆ ನಡೆದಿದೆ. (Dubai Crime News) ಮೃತ ಪಟ್ಟ ವಿದ್ಯಾರ್ಥಿ ಮೂಲತಃ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ವಿದ್ಯಾರ್ಥಿ ಉನ್ನತ ಶಿಕ್ಷಣಕ್ಕೆಂದು ದುಬೈಗೆ ತೆರೆಳಿದ್ದು, ತೀವ್ರ ಅನಾರೋಗ್ಯದಿಂದ ವಿಧಿವಶನಾಗಿದ್ದಾನೆ.

ಮೃತ ಅಹ್ಮದ್‌ ಬಿಲಾಲ್‌ ಉಡುಪಿಯಲ್ಲಿ ಪಿಯುಸಿ ಮುಗಿಸಿ, ಪದವಿ ಶಿಕ್ಷಣಕ್ಕಾಗಿ ದುಬೈಗೆ ತೆರೆಳಿದ್ದಾನೆ. ಶಾರ್ಜಾದಲ್ಲಿರುವ ಆಸ್ಪತ್ರೆಗೆ ಅನಾರೋಗ್ಯಕ್ಕೆ ತುತ್ತಾದ ವಿದ್ಯಾರ್ಥಿಯನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಶಾರ್ಜಾ ಆಸ್ಪತ್ರೆಯ ವೈದ್ಯರು ಕಳೆದ ೨೦ ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ಆದರೆ ಅಹ್ಮದ್‌ ಬಿಲಾಲ್‌ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಅಹ್ಮದ್‌ ಬಿಲಾಲ್‌ ತಂದೆ ಅಬ್ದುಸ್ಸಲಾಂ ಸೂರಿಂಜೆ ೩೫ ವರ್ಷಗಳಿಂದ ದುಬೈಯಲ್ಲಿ ಅನವಾಸಿ ಭಾರತೀಯನಾಗಿ ದುಡಿಯುತ್ತಿದ್ದು, ಹಾಗಾಗಿ ಪದವಿ ಶಿಕ್ಷಣಕ್ಕಾಗಿ ಬಿಲಾಲ್‌ ನಾಲ್ಕು ತಿಂಗಳ ಹಿಂದೆ ದುಬೈಗೆ ತೆರಳಿದ್ದಾನೆ. ಮೃತ ವಿದ್ಯಾರ್ಥಿಯ ಅಂತ್ಯ ಸಂಸ್ಕಾರವು ದುಬೈಯ ಅಲ್ಕೂಝ್‌ ಮಸೀದಿಯಲ್ಲಿ ನಡೆದಿದೆ. ಸದ್ಯ ಬಿಲಾಲ್‌ ಕುಟುಂಬ ದುಬೈನಲ್ಲಿದೆ ಎಂದು ಬಿಲಾಲ್‌ ಸಂಬಂದೀ ಆಸಿಫ್‌ ಉಚ್ಚಿಲದಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : Jharkhand Crime News : ಸೋದರ ಸಂಬಂಧಿಯ ಶಿರಚ್ಛೇದ ಮಾಡಿ : ಸೆಲ್ಫಿ ತೆಗೆದು ವಿಕೃತಿ ಮೆರೆದ ವ್ಯಕ್ತಿ

ಇದನ್ನೂ ಓದಿ : Twist in murder case: 7 ವರ್ಷದ ಹಿಂದೆ ಕೊಲೆಗೀಡಾಗಿದ್ದ ಬಾಲಕಿ ಪ್ರತ್ಯಕ್ಷ; ಮಾಡದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಿದನೇ ಅಮಾಯಕ?

ಇದನ್ನೂ ಓದಿ : Polytechnic College Violence : ಎಸ್ಎಫ್ಐ ನಾಯಕಿ, ಪೊಲೀಸರ ಮೇಲೆ ಹಲ್ಲೆ ಪ್ರಕರಣ : ಡ್ರಗ್ಸ್ ಮಾಫಿಯಾದ ಐವರ ಬಂಧನ

ಇದನ್ನೂ ಓದಿ : Colombia landslide: ಕೊಲಂಬಿಯಾದಲ್ಲಿ ಭಾರೀ ದುರಂತ: ಏಕಾಏಕಿ ರಸ್ತೆ ಕುಸಿದು 8 ಮಕ್ಕಳು ಸೇರಿದಂತೆ 34ಕ್ಕೂ ಹೆಚ್ಚು ಮಂದಿ ದುರ್ಮರಣ

ಇದನ್ನೂ ಓದಿ : Newborns death: ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತಗೊಂಡು 4 ನವಜಾತ ಶಿಶುಗಳ ಸಾವು: ತನಿಖೆಗೆ ಆದೇಶಿಸಿದ ಸರ್ಕಾರ

ಮೃತ ಅಹ್ಮದ್‌ ಬಿಲಾಲ್‌ ತಂದೆ ಅಬ್ದುಸ್ಸಲಾಂ ಸೂರಿಂಜೆ, ತಾಯು ಝೀನತ್‌ ಗುರುಪುರ ಸೇರಿದಂತೆ ಇಬ್ಬರು ಸಹೋದರಿಯರು, ಒಬ್ಬ ಸಹೋದರ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Dubai Crime News : Udupi student who went to Dubai for graduate studies dies

Comments are closed.