10 ವರ್ಷದ ಬಾಲಕನನ್ನು ಅಪಹರಿಸಿ ಹತ್ಯೆ: ಪೊದೆಯಲ್ಲಿ ಮೃತದೇಹ ಪತ್ತೆ

ಗುರುಗ್ರಾಮ: (Kidnap and murder) ಯುವಕನೋರ್ವ 10 ವರ್ಷದ ಬಾಲಕನನ್ನು ಅಪಹರಿಸಿ, ಸಂತಾನ ಹರಣ ನಡೆಸಿ ನಂತರ ಹತ್ಯೆಗೈದ ಘಟನೆ ನಡೆದಿದ್ದು, ಬಳಿಕ ಆತನ ಮೃತದೇಹವನ್ನು ಐಎಂಟಿ ಮನೇಸರ್ ಬಳಿಯ ಪೊದೆಯಲ್ಲಿ ಎಸೆದಿದ್ದಾನೆ. ಪ್ರಿನ್ಸ್ ಎಂಬ 24 ವರ್ಷದ ಯುವಕನನ್ನು ಹತ್ಯೆಯ ಆರೋಪಿ ಎಂದು ಬಂಧಿಸಲಾಗಿದೆ.

ಭಾನುವಾರ ಸಂಜೆ 5.30ರ ಸುಮಾರಿಗೆ ಬಾಲಕ ನಾಪತ್ತೆಯಾಗಿದ್ದು, ಬಳಿಕ ಆತನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಅಪ್ರಾಪ್ತ ವಯಸ್ಕನ ತಂದೆ ಪೊಲೀಸರಿಗೆ, ತನ್ನ ಮಗ ಸೆಕ್ಟರ್ 10 ಪ್ರದೇಶದಲ್ಲಿನ ಬಾಡಿಗೆ ವಸತಿಯಿಂದ ಹೊರಗೆ ಆಟವಾಡಲು ಹೊರಬಂದ ನಂತರ ಸುತ್ತಮುತ್ತ ಎಲ್ಲಿಯೂ ಕಾಣಿಸಲಿಲ್ಲ ಎಂದು ತಿಳಿಸಿದ್ದಾರೆ. ಅದೇ ದಿನ ಸಂಜೆ 7.30ರ ಸುಮಾರಿಗೆ ಬಾಲಕನ ಕುಟುಂಬಕ್ಕೆ ಅಪರಿಚಿತ ಕರೆಗಾರರಿಂದ ಸುಲಿಗೆ ಕರೆಯೊಂದು ಬಂದಿದ್ದು, ಆತನ ಬಿಡುಗಡೆಗೆ 2 ಲಕ್ಷ ರೂ ನೀಡುವಂತೆ ಬೇಡಿಕೆ ಇಡಲಾಗಿದೆ.

ಇದರ ಬಗ್ಗೆ ಬಾಲಕನ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕರೆಯ ಆಧಾರದ ಮೇಲೆ ತನಿಖೆ ನಡೆಸಿದ್ದಾರೆ. ನಂತರ ಕರೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದರು ಎಂದು ಸಹಾಯಕ ಪೊಲೀಸ್ ಕಮಿಷನರ್ ಪ್ರೀತ್ ಪಾಲ್ ಸಾಂಗ್ವಾನ್ ಹೇಳಿದರು. ವಿಚಾರಣೆ ವೇಳೆ ಸಂತ್ರಸ್ತ ಬಾಲಕನನ್ನು ತಾನು ಸಂತಾನಹರಣ ಮಾಡಿರುವುದಾಗಿ ಆರೋಪಿ ಪ್ರಿನ್ಸ್ ಒಪ್ಪಿಕೊಂಡಿದ್ದಾನೆ. ಸಂತಾನ ಹರಣದ ನಂತರ ಇದರ ಬಗ್ಗೆ ಹುಡುಗ ಬೇರೆಯವರಿಗೆ ಹೇಳುತ್ತಾನೆ ಎಂಬ ಭಯಕ್ಕೆ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿರುವುದಾಗಿಯೂ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ : ಪಟಾಕಿ ಸಾಗಿಸುತ್ತಿದ್ದ ಇ-ರಿಕ್ಷಾದಲ್ಲಿ ಸ್ಫೋಟ: ಓರ್ವ ವ್ಯಕ್ತಿ ಸಾವು, ಇನ್ನೋರ್ವನಿಗೆ ಗಾಯ

ಇದನ್ನೂ ಓದಿ : Bidar murder: ಜನನಿಬೀಡ ಪ್ರದೇಶದಲ್ಲಿ ಹಾಡಹಗಲೇ ವ್ಯಕ್ತಿಯನ್ನು ಕಡಿದು ಬರ್ಬರ ಹತ್ಯೆ

ಇದೀಗ ಬಾಲಕನ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಆರೋಪಿ ಈ ಹಿಂದೆಯೂ ಇಂತಹ ಕೃತ್ಯ ಎಸಗಿದ್ದಾನಾ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಆರೋಪಿಯಿಂದ ಅಪರಾಧಕ್ಕೆ ಬಳಸಿದಂತಹ ಆಯುಧವನ್ನೂ ಕೂಡ ವಶಪಡಿಸಿಕೊಳ್ಳಲಾಗಿದೆ.

Kidnap and murder: 10-year-old boy kidnapped and killed: Dead body found in bush

Comments are closed.