ಹುಡುಗ ಕಪ್ಪು ಅಂತಾ ಮದುವೆ ನಿರಾಕರಿಸಿದ ತಂಗಿ : ಕೊಡಲಿಯಿಂದ ಕೊಚ್ಚಿ ತಂಗೆಯನ್ನೇ ಕೊಂದ ಅಣ್ಣ..!!!

ರಾಯಚೂರು : ಮದುವೆ ನಿಶ್ಚಯವಾಗಿದ್ದ ವರ ಕಪ್ಪಗಿದ್ದಾನೆ ಅನ್ನೋ ಕಾರಣಕ್ಕೆ ವಧು ಮದುವೆಯನ್ನು ನಿರಾಕರಿಸಿದ್ದಾರೆ. ಮದುವೆಗೆ ಒಂದೆರಡು ದಿನವಿರುವಾಗ ಮದುವೆ ನಿರಾಕರಿಸಿದ ತಂಗಿಯನ್ನ ಅಣ್ಣ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಎಂಬಲ್ಲಿ ನಡೆದಿದೆ.

ಗಬ್ಬೂರು ಗ್ರಾಮದ ನಿವಾಸಿ ಚಂದ್ರಕಲಾ (22 ವರ್ಷ) ಎಂಬಾಕೆಯೇ ಅಣ್ಣನಿಂದ ಕೊಲೆಯಾದ ಯುವತಿ. ಶ್ಯಾಮ ಸುಂದರ ಎಂಬಾತನೇ ತಂಗಿಯನ್ನು ಕೊಲೆ ಮಾಡಿ ಅಣ್ಣ. ಚಂದ್ರಕಲಾಗೆ ಜುಲೈ 13 ರಂದು ಮದುವೆ ನಿಗಗದಿಯಾಗಿತ್ತು. ಮನೆಯವರು ಮದುವೆಯ ಲಗ್ನಪತ್ರಿಕೆಯನ್ನು ಹಂಚಿಕೆ ಮಾಡಿ, ಮದುವೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಆದರೆ ಚಂದ್ರಿಕಲಾ ಮದುವೆಗೆ ಇನ್ನೇನು ಮೂರು ದಿನವಿರುವಾಗ ಮದುವೆ ಬೇಡ ಎಂದಿದ್ದಾಳೆ.

ಮನೆಯವರು ಮದುವೆ ಯಾವ ಕಾರಣಕ್ಕೆ ಬೇಡಾ ಎಂದಾಗ, ಹುಡುಗ ಕಪ್ಪಾಗಿದ್ದಾನೆ ಅಂತ ತಿಳಿಸಿದ್ದಾಳೆ. ಈ ವೇಳ ಕೋಪಗೊಂಡ ಅಣ್ಣ ಶ್ಯಾಮಸುಂದರ ಮನೆಯಲ್ಲಿದ್ದ ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾನೆ. ಈ ಕುರಿತು ಗಬ್ಬೂರು ಠಾಣೆಯ ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದು, ಶ್ಯಾಮಸುಂದರನನ್ನುಬಂಧಿಸಿದ್ದಾರೆ.

Comments are closed.