ನಿತ್ಯಭವಿಷ್ಯ : 31-08-2020

0

ಮೇಷರಾಶಿ
ಉತ್ತಮ ಬುದ್ಧಿಶಕ್ತಿ, ಸ್ಥಗಿತ ಕಾರ್ಯಗಳು ಮುಂದುವರಿಯುತ್ತದೆ, ವಿದ್ಯಾಭ್ಯಾಸದಲ್ಲಿ ಮಕ್ಕಳು ಮೆಚ್ಚುಗೆಯನ್ನು ಗಳಿಸಿಯಾರು. ನೂತನ ಕಟ್ಟಡಕ್ಕೆ ಶಿಲಾನ್ಯಾಸದ ಚಿಂತನೆಯು ಸಾಕಾರಗೊಳ್ಳಲಿದೆ. ಕೃಷಿ ಕಾರ್ಯಕ್ಕೆ ಹಂತಹಂತವಾಗಿ ಅಭಿವೃದ್ಧಿಯು ಕಂಡು ಬರಲಿದೆ. ಕಿರು ಸಂಚಾರವಿದೆ, ವಾಹನ ರಿಪೇರಿಯಿಂದ ಖರ್ಚು, ಮನಸ್ಸಿನಲ್ಲಿ ಭಯ ಭೀತಿ.

ವೃಷಭರಾಶಿ
ಅನ್ಯ ಜನರಲ್ಲಿ ವೈಮನಸ್ಸು, ಕೈ ಹಾಕಿದ ಕೆಲಸ ಕಾರ್ಯಗಳಲ್ಲಿ ವಿಳಂಬ, ಸಮಷ್ಟಿ ವೃತ್ತಿಯಲ್ಲಿ ವಿವಾದ, ವಂಚನೆ ಕಂಡು ಬರಲಿದೆ. ನೂತನ ವಸ್ತ್ರಾಭರಣದ ಖರೀದಿಯಿಂದ ಖರ್ಚುವೆಚ್ಚಗಳಿದ್ದರೂ ನಾನಾ ರೀತಿಯಲ್ಲಿ ಧನಾಗಮನವಿರುತ್ತದೆ. ವ್ಯವಹಾರದಲ್ಲಿ ಅಭೀಷ್ಟೆ ಸಿದ್ಧಿಯಾಗಲಿದೆ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ,

ಮಿಥುನರಾಶಿ
ಅನೇಕ ವಿಷಯಗಳ ಚರ್ಚೆ, ಧನಹಾನಿ, ಆಲಸ್ಯ ಮನೋಭಾವ, ಧರ್ಮಕಾರ್ಯಗಳಿಂದ ಸಮಾಧಾನ ಸಿಗಲಿದೆ. ಆದರೂ ಧನವಿನಿಯೋಗದಲ್ಲಿ ಎಚ್ಚರ ವಹಿಸುವುದು. ತರಕಾರೀ ವ್ಯವಹಾರದಲ್ಲಿ ಪ್ರಗತಿ ಕುಂಠಿತಗೊಳ್ಳಲಿದೆ. ಸರಕಾರಿ ನೌಕರರಿಗೆ ಸ್ಥಾನ ಪ್ರಾಪ್ತಿ ಇದ್ದರೂ ಕಿರಿಕಿರಿ ತಪ್ಪದು, ಮನಸ್ಸಿನ ವೇದನೆ, ಗೊಂದಲಮಯ ವಾತಾವರಣ.

ಕಟಕರಾಶಿ
ಕುಟುಂಬದ ಸದಸ್ಯರಿಂದ ಬೋಧನೆ, ದಂಡ ಕಟ್ಟುವ ಯೋಗ, ದೂರ ಸಂಚಾರವು ಉತ್ತಮವಲ್ಲ. ಸ್ನೇಹಿ ವರ್ಗದವರಿಂದ ದುರ್ವ್ಯಸನದ ದಾಸರಾಗದಿರಿ. ಜಾಗ್ರತೆ ಮಾಡಿರಿ. ಧರ್ಮಪತ್ನಿಯ ಸೂಕ್ತ ಸಲಹೆಗಳಿಗೆ ಸ್ಪಂದಿಸುವುದು ಅಗತ್ಯವಿದೆ. ವಿದೇಶಿ ವಾಸಿಗಳಿಗೆ ಸರಕಾರಿ ಅಧಿಕಾರಿಯ ಭಯವಿರುತ್ತದೆ, ಅತಿಯಾದ ಕೋಪ, ಶೀತ ಸಂಬಂಧ ರೋಗಗಳು, ಚಿಕಿತ್ಸೆಗಾಗಿ ಹಣ ವ್ಯಯ.

ಸಿಂಹರಾಶಿ
ಆರೋಗ್ಯ ಕೊಂಚ ಕೈಕೊಟ್ಟರೂ ಸುಧಾರಣೆ ತಂದಿಕ್ಕಿ ತೃಪ್ತಿ ತಂದೀತು. ಮನೆಯಲ್ಲಿ ಬಂಧುಬಳಗದವರ ಆಗಮನದಿಂದ ಸಂತೋಷವಾದೀತು. ಮನೆ ನಿರ್ಮಾಣಕ್ಕೆ ಇದು ಉತ್ತಮ ಕಾಲ. ಆಭರಣ ಖರೀದಿಗೆ ಅಡೆತಡೆ ಬರುತ್ತದೆ, ನಾನಾ ರೀತಿ ಚಿಂತೆ, ದುಡುಕು ಸ್ವಭಾವ, ದುರಾಲೋಚನೆ, ಅಧಿಕ ಖರ್ಚು, ಮಾತಿನ ಮೇಲೆ ನಿಗಾ ಇರಲಿ.

ಕನ್ಯಾರಾಶಿ
ಷೇರು ವ್ಯವಹಾರದಲ್ಲಿ ಲಾಭ, ಖರ್ಚಿನ ಮೇಲೆ ನಿಯಂತ್ರಣವಿರಲಿ, ಸಾಲು ಸಾಲಾಗಿ ತಲೆತಿನ್ನುವ ಕೆಲಸಗಳಿಂದ ಮನಸ್ಸಿಗೆ ಭೀತಿ ತರಲಿದೆ. ವಿವಾಹ ಭಾಗ್ಯಕ್ಕೆ ತಯಾರಿ ನಡೆದೀತು. ವೃತ್ತಿಯಲ್ಲಿ ಮುಂಭಡ್ತಿ ಯೋಗವಿದೆ. ಹಿತಶತ್ರುಗಳ ಕಾಟದಿಂದ ವಿದೇಶ ಯಾನವು ತಪ್ಪಿ ಹೋಗಲಿದೆ, ಕೆಲಸದ ಒತ್ತಡ ಜಾಸ್ತಿ, ವಿದೇಶ ಪ್ರಯಾಣ, ಪಿತ್ರಾರ್ಜಿತ ಆಸ್ತಿ ಲಭ್ಯ.

ತುಲಾರಾಶಿ
ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಅಧಿಕ ಖರ್ಚಿನ ಜೊತೆಗೆ, ರಕ್ತದೊತ್ತಡದಂತಹ ಅನಿಷ್ಟಗಳು ದೇಹ ಶೋಷಣೆಗೆ ಕಾರಣವಾಗಬಹುದು. ಸಾಲದ ಹೊರೆಯ ಬಗ್ಗೆ ಆಗಾಗ ಕಲಹ, ತಕರಾರು ತಂದೀತು. ಬಂಧು ದ್ವೇಷಾದಿಗಳು ನೆಮ್ಮದಿ ಕೆಡಿಸಲಿವೆ, ಕಷ್ಟದಲ್ಲಿರುವವರಿಗೆ ಸಹಾನುಭೂತಿ ತೋರುವಿರಿ, ಆರೋಗ್ಯದಲ್ಲಿ ಏರುಪೇರು.

ವೃಶ್ಚಿಕರಾಶಿ
ಕ್ರಯ ವಿಕ್ರಯದಲ್ಲಿ ಆರ್ಥಿಕವಾಗಿ ಲಾಭವಾದೀತು. ನೆಂಟರಿಷ್ಟರ ಸಮಾಗಮ ಸಮಾಧಾನ ತಂದೀತು. ಸೋದರ ವರ್ಗದ ಪಾಲು ಪಂಚಾಯ್ತಿಯಿಂದ ಮೋಸ ಹೋಗುವ ಪ್ರಸಂಗ ಎದುರಾಗಲಿದೆ, ವಾದ ವಿವಾದಗಳಿಂದ ದೂರವಿರಿ, ಆಲಸ್ಯ ಮನೋಭಾವ, ಶತ್ರು ಬಾಧೆ, ಯಾರನ್ನು ನಂಬಬೇಡಿ, ದೂರ ಪ್ರಯಾಣ.

ಧನಸ್ಸುರಾಶಿ
ಕಾರ್ಯಸಾಧನೆಗಾಗಿ ಶ್ರಮ ಪಡುವಿರಿ, ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ನೆರೆಹೊರೆಯವರ ಸಹಕಾರದಿಂದ ಕಾರ್ಯಸಾಧನೆಯಾಗಲಿದೆ. ಒಮ್ಮೊಮ್ಮೆ ಆದಾಯಕ್ಕಿಂತ ಖರ್ಚು ವೆಚ್ಚಗಳೇ ಅಧಿಕವಾಗದಂತೆ ಜಾಗ್ರತೆ ಇರಲಿ, ಅಮೂಲ್ಯ ವಸ್ತುಗಳ ಖರೀದಿ, ತೀರ್ಥಯಾತ್ರೆಯಲ್ಲಿ ಹಣ ವಿನಿಯೋಗ, ಮನಃ ಶಾಂತಿ.

ಮಕರರಾಶಿ
ಹಿರಿಯರಲ್ಲಿ ಭಕ್ತಿ, ಸಣ್ಣಪುಟ್ಟ ವಿಚಾರಗಳಿಂದ ಮನಸ್ತಾಪ, ಗೃಹ ಬದಲಾವಣೆಯಿಂದ ಸಂತಸವಾಗಲಿದೆ. ನಿರಂತರ ಕಾರ್ಯಭಾರದಿಂದ ಬಿಡುವೇ ದೊರಕದು. ಮಕ್ಕಳಿಗೆ ಪ್ರವಾಸದಿಂದ ಸಂತಸ. ದೇವತಾ ಸಂದರ್ಶನದಿಂದ ಹಿರಿಯರಿಗೆ ತೃಪ್ತಿ ಸಿಗಲಿದೆ. ಶುಭವಾರ್ತೆ ಇದೆ, ಸಾರ್ವಜನಿಕ ಕ್ಷೇತ್ರಗಳಲ್ಲಿ ಭಾಗಿ, ಕೃಷಿಯಲ್ಲಿ ಲಾಭ.

ಕುಂಭರಾಶಿ
ಯೋಗ್ಯ ವಯಸ್ಕರಿಗೆ ಉತ್ತಮ ಸಂಬಂಧಗಳು ಕೂಡಿ ಬರಲಿದೆ. ಮನೆಯಲ್ಲಿ ಪತ್ನಿಗೆ ಅಲರ್ಜಿಯಂತಹ ಕಿರಿಕಿರಿ ಕಾಣಿಸಲಿದೆ. ಹೊಸ ವ್ಯವಹಾರದಲ್ಲಿ ಜಾಗ್ರತೆಯಿಂದ ಮುಂದುವರಿಯ ಬೇಕಾದೀತು, ಅಧಿಕ ತಿರುಗಾಟ, ಮನೆಯಲ್ಲಿ ತೊಂದರೆ, ಸಲ್ಲದ ಅಪವಾದ, ತಾಳ್ಮೆಯಿಂದ ಇರಿ, ಉದ್ಯೋಗದಲ್ಲಿ ಉನ್ನತ ಸ್ಥಾನ.

ಮೀನರಾಶಿ
ಸ್ಥಾನಪಲ್ಲಟ ಯೋಗವಿದೆ. ಆದಾಯಕ್ಕೆ ಕೊರತೆ ಇರದು. ದುಡುಕು ವರ್ತನೆಯಿಂದ ಕಾರ್ಯ ಸಾಧನೆಗೆ ಅಡ್ಡಿಯಾಗಲಿದೆ. ಲಾಭಸ್ಥಾನದ ಶನಿಯಿಂದ ನಾನಾ ರೀತಿಯಲ್ಲಿ ಧನಸಂಗ್ರಹವು ಕೂಡಿ ಬರಲಿದ, ಮಿತ್ರರಲ್ಲಿ ಸ್ನೇಹ ವೃದ್ಧಿ, ಅಲ್ಪ ಕಾರ್ಯಸಿದ್ಧಿ, ಅಪರೂಪದ ವ್ಯಕ್ತಿ ಬೇಟೆ, ಹೊಸ ವ್ಯವಹಾರದಿಂದ ಲಾಭ, ಸುಖ ಭೋಜನ.

Leave A Reply

Your email address will not be published.