ನಿತ್ಯಭವಿಷ್ಯ : ವೃಷಭರಾಶಿಯರಿಗೆ ಪಾಲುದಾರಿಕೆ ವ್ಯವಹಾರ ಬೇಡ

ಮೇಷರಾಶಿ
ವೃತ್ತಿರಂಗದಲ್ಲಿ ಕಾರ್ಯದೊತ್ತಡ, ಶತ್ರು ಕಾಟ, ಮೋಸದ ತಂತ್ರಕ್ಕೆ ಬಲಿಯಾಗುವಿರಿ, ಭೂ ವಿಚಾರದಲ್ಲಿ ಲಾಭ, ಹಣಕಾಸಿನ ವಿಚಾರದಲ್ಲಿ ಒತ್ತಡ, ಅಧಿಕ ಖರ್ಚು.

ವೃಷಭರಾಶಿ
ಆರ್ಥಿಕವಾಗಿ ಪ್ರಗತಿ,  ಪಾಲುದಾರಿಕೆ ವ್ಯವಹಾರ ಬೇಡ, ಮನಸ್ಸಿನಲ್ಲಿ ಕೆಟ್ಟ ಆಲೋಚನೆ, ಮುಖ್ಯ ಕಾರ್ಯದಲ್ಲಿ ಸಾಧನೆ, ಸಾಲ ಮರುಪಾವತಿ, ಶರೀರದಲ್ಲಿ ಆಯಾಸ, ಕೆಲಸದಲ್ಲಿ ವಿಘ್ನ.

ಮಿಥುನರಾಶಿ
ದ್ರವ್ಯನಾಶ, ಮಕ್ಕಳಿಂದ ತೊಂದರೆ, ಸಾಂಸಾರಿಕವಾಗಿ‌ ನೆಮ್ಮದಿ, ಮನಸಿನ‌ ಇಚ್ಚೆ ಪೂರೈಸಲಿದೆ, ಅವಿವಾಹಿತ ರಿಗೆ ಶುಭ ಸುದ್ದಿ,  ದುಶ್ಚಟಗಳಿಗೆ ಖರ್ಚು, ಅಲಂಕಾರಕ್ಕೆ ವೆಚ್ಚ.

ಕರ್ಕಾಟಕರಾಶಿ
ಹಣಕಾಸಿನ ವಿಚಾರದಲ್ಲಿ ಚಿಂತೆ, ನಿರುದ್ಯೋಗಿಗಳ ಕನಸು‌ ನಸನು, ವ್ಯವಹಾರದಲ್ಲಿ ಎಚ್ಚರಿಕೆ, ದಾಂಪತ್ಯ ಜೀವನದಲ್ಲಿ ಸಂತಸ, ಧನಲಾಭ, ಮಹಿಳಾ ಉದ್ಯಮಿ‌ ಗಳಿಗೆ ಉತ್ತಮ, ಮಾನಸಿಕ ನೆಮ್ಮದಿ, ದೂರ ಪ್ರಯಾಣ ಮುಂದೂಡಿಕೆ.

ಸಿಂಹರಾಶಿ
ಆತ್ಮೀಯರ ಸಹಕಾರದಿಂದ ಕಾರ್ಯಸಿದ್ದಿ, ಮನಸ್ಸನ್ನು ಚಂಚಲತೆಯಿಂದ ದೂರವಿರಿ, ವ್ಯಾಪಾರ-ವ್ಯವಹಾರದಲ್ಲಿ ಅಲ್ಪ ಲಾಭ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ಕನ್ಯಾರಾಶಿ
ಮನೆಯಲ್ಲಿ ಅಶಾಂತಿಯ ವಾತಾವರಣ, ಕೋಪದಿಂದ ಜೀವನವೇ ಹಾಳಾಗಲಿದೆ, ಕೋಪವನ್ನು ನಿಯಂತ್ರಣ ದಲ್ಲಿ ಇಟ್ಟುಕೊಳ್ಳಿ, ಅನಗತ್ಯ ವಾಗ್ವಾದಗಳಿಂದ ದೂರವಿರಿ, ಇತರರ ಮಾತಿಗೆ ಮರುಳಾಗದಿರಿ, ವಿಪರೀತ ಹಣವ್ಯಯ, ಹಣಕಾಸು ವಿಚಾರದಲ್ಲಿ ಎಚ್ಚರ.

ತುಲಾರಾಶಿ
ಆರ್ಥಿಕವಾಗಿ ಅನುಕೂಲಕರ, ಮಹತ್ವದ ಕಾರ್ಯಗಳಲ್ಲಿ ಚಿಂತನೆ, ಅರೋಗ್ಯದ ಬಗ್ಗೆ ಎಚ್ಚರ ವಿರಲಿ, ಗೆಳೆಯರೊಂದಿಗೆ ವೈಮನಸ್ಸು, ವಿಪರೀತ ವ್ಯಸನ, ಸ್ನೇಹಿತರ ಭೇಟಿ, ಮಾನಸಿಕ ಗೊಂದಲ, ಉನ್ನತ ಅಧಿಕಾರಿಗಳ ಭೇಟಿ.

ವೃಶ್ಚಿಕರಾಶಿ
ಹಿತೈಷಿಗಳಿಂದ ಸಲಹೆ ಅಗತ್ಯ, ಚಿನ್ನದ ವ್ಯಾಪಾರಿಗಳಿಗೆ ಅನುಕೂಲ, ಕೃಷಿಕರಿಗೆ ಬೆಳೆನಷ್ಟ,  ಹಣಕಾಸು ಸಮಸ್ಯೆ, ಕುಟುಂಬದಲ್ಲಿ ಉತ್ತಮ ಪ್ರಗತಿ, ಸಲ್ಲದ ಅಪವಾದ, ನಿಂದನೆ.

ಧನಸ್ಸುರಾಶಿ
ಬಂದ ಅವಕಾಶವನ್ನು ಬಳಸಿಕೊಳ್ಳಿ, ಉದ್ಯೋಗದಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ, ಕೃಷಿ ಕಾಯಕ ಮಾಡುವವರು ಬುದ್ದಿವಂತಿಕೆ ಬಳಸಿ, ಉದ್ಯೋಗಿಗ ಳಿಗೆ  ಮೇಲಧಿಕಾರಿಗಳಿಂದ ಪ್ರಶಂಸೆ, ಆಕಸ್ಮಿಕ ಧನಾಗಮನ, ಅಮೂಲ್ಯ ವಸ್ತುಗಳ ಖರೀದಿ.

ಮಕರರಾಶಿ
ಸಾಮಾಜಿಕವಾಗಿ ಗೌರವ,‌ ವ್ಯಾಪಾರದಲ್ಲಿ ಲಾಭ, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ತಾಳ್ಮೆ ಅತ್ಯಗತ್ಯ, ಶತ್ರುಗಳ ಬಾಧೆ, ತೀರ್ಥಕ್ಷೇತ್ರ ದರ್ಶನ ಮುಂದೂಡಿಕೆ, ಆದಾಯಕ್ಕೆ ತಕ್ಕ ಖರ್ಚು.

ಕುಂಭರಾಶಿ
ವೃತ್ತಿರಂಗದಲ್ಲಿ ದೃಢ ನಿರ್ಧಾರ, ನಿರೀಕ್ಷಿತ ಫಲ ದೊರೆಯಲಿದೆ, ಆರೋಗ್ಯದಲ್ಲಿ ಏರುಪೇರು, ಬಂಧುಗಳ ಆಗಮನ, ಆದಾಯಕ್ಕಿಂತ ಖರ್ಚು ಹೆಚ್ಚು, ಋಣಭಾದೆ, ಮಾನಸಿಕ ಒತ್ತಡ.

ಮೀನರಾಶಿ
ಕಾರ್ಯಕ್ಷೇತ್ರದಲ್ಲಿ ಚಟುವಟಿಕೆ ಸ್ಥಗಿತ, ಉತ್ತಮ ಬುದ್ಧಿಶಕ್ತಿ, ಕೃಷಿಯಲ್ಲಿ ಲಾಭ, ವಿವಾಹ ಯೋಗ, ಪತಿ ಪತ್ನಿಯ ನಡುವೆ ಹೊಂದಾಣಿಕೆಯ ಕೊರತೆ, ಮಾನಸಿಕ ಒತ್ತಡ, ತಾಳ್ಮೆ ಅಗತ್ಯ.

Comments are closed.