ನಿತ್ಯಭವಿಷ್ಯ : 23-01-2021

ಮೇಷರಾಶಿ
ಸ್ಥಾನ ಪಲ್ಲಟ ಭಯ, ಕೆಲಸಕಾರ್ಯಗಳಲ್ಲಿ ಅನುಕೂಲ, ಮಹತ್ವದ ಕಾರ್ಯಕ್ಕೆ ಧನವಿನಿಯೋಗ, ಶತ್ರುಗಳನ್ನು ಮೀರಿಸುವಂತೆ ಸಾಧಿಸುವಿರಿ, ಸ್ಥಿರಾಸ್ತಿ ಮತ್ತು ವಾಹನ ನೋಂದಣಿ, ಆರ್ಥಿಕ ಸಂಕಷ್ಟಗಳು ಬಗೆಹರಿಯುವುದು.

ವೃಷಭರಾಶಿ
ಆರೋಗ್ಯ ಸಮಸ್ಯೆ ಎದುರಾಗಲಿದೆ, ಆದಾಯವಿದ್ದರೂ ಖರ್ಚಿನ ಮೇಲೆ ಹಿಡಿತವಿರಲಿ, ಆಸ್ತಿ ವಿಚಾರದಲ್ಲಿ ಕಿರಿಕಿರಿಗಳು, ಸಾಲದ ಸುಳಿಗೆ ಸಿಲುಕುವ ಸನ್ನಿವೇಶ, ರೋಗ ಬಾಧೆಗಳು, ಆಕಸ್ಮಿಕ ಘಟನೆಗಳಿಂದ ನೆಮ್ಮದಿ ಭಂಗ.

ಮಿಥುನರಾಶಿ
ವೃತ್ತಿಯಲ್ಲಿರುವವರಿಗೆ ವರ್ಗಾವಣೆಯ ಸೂಚನೆ ಗೋಚರಿಸಲಿದೆ, ಧಾರ್ಮಿಕ ಕಾರ್ಯಗಳಿಗೆ ಸಕಾಲ, ಅಧಿಕ ಧನವ್ಯಯ, ಸರ್ಕಾರಿ ಅಧಿಕಾರಿಯಿಂದ ಆರ್ಥಿಕ ನಷ್ಟ, ಅನಾರೋಗ್ಯ ಸಮಸ್ಯೆಗಳು ಭಾದಿಸುವುದು.

ಕಟಕರಾಶಿ
ಕಾರ್ಯಕ್ಷೇತ್ರದಲ್ಲಿ ಒತ್ತಡಕ್ಕೆ ಮಣಿಯದೆ ಮುನ್ನಡೆಯಿರಿ, ಆರ್ಥಿಕ ಚಿಂತೆ ಕಾಡಲಿದೆ, ಅಧಿಕಾರಿ ವರ್ಗದವರಿಗೆ ಕಿರಿಕಿರಿ ಕಂಡುಬರಲಿದೆ, ಇತರರ ಮಾತು ಕೇಳುವುದರಿಂದ ಸಮಸ್ಯೆ ಎದುರಾಗುವ ಸಂಭವ, ಅಹಂಭಾವದ ಮಾತಿನಿಂದ ಮಿತ್ರರಿಗೆ ನೋವು.

ಸಿಂಹರಾಶಿ
ಆರ್ಥಿಕ ಚಿಂತೆ ಕಾಡಲಿದೆ, ಉದ್ಯೋಗ ಲಾಭವಾಗುವುದು, ಧರ್ಮ ಕಾರ್ಯಗಳ್ಲಿ ಆಸಕ್ತಿ, ನಿಮ್ಮ ಔದಾರ್ಯದಿಂದ ಜನಮೆಚ್ಚುಗೆ, ಆರೋಗ್ಯ ವ್ಯತ್ಯಾಸಗಳಿಂದ ಅಧಿಕ ಖರ್ಚು, ಉದ್ಯೋಗ ನಿಮಿತ್ತ ದೂರಪ್ರಯಾಣ.

ಕನ್ಯಾರಾಶಿ
ಆರೋಗ್ಯ ಸಮಸ್ಯೆ ಕಾಡಲಿದೆ, ಪ್ರಯಾಣದಿಂದ ತಲೆ ನೋವು, ಪರಸ್ಥಳದಲ್ಲಿ ಉದ್ಯೋಗ ಲಾಭ, ಅತೃಪ್ತ ಮನೋಭಾವ, ಆತಂಕ ಮತ್ತು ನಿದ್ರಾಭಂಗ, ತಂದೆಯ ಮಿತ್ರರಿಂದ ಅನುಕೂಲ.

ತುಲಾರಾಶಿ
ಕ್ರೀಡಾಪಟುಗಳಿಗೆ ಉತ್ತಮ ದಿನ, ಹಿರಿಯರ ಮನಸ್ತಾಪಕ್ಕೆ ಗುರಿಯಾಗುವಿರಿ, ಉದ್ಯೋಗದಲ್ಲಿ ತೊಂದರೆ, ಉದ್ಯೋಗ ಬದಲಾವಣೆ, ಆತ್ಮಗೌರವಕ್ಕೆ ಅದೃಷ್ಟ ಒಲಿದು ಬರುವುದು, ಕಿರಿಕಿರಿ.

ವೃಶ್ಚಿಕರಾಶಿ
ಪತ್ನಿಯ ಅನಾರೋಗ್ಯ, ಕೈಹಿಡಿದ ಯೋಜನೆಗೆ ಅಡೆತಡೆ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಮಿತ್ರರೊಂದಿಗೆ ಪ್ರಯಾಣ, ಅಡೆತಡೆಗಳ ನಿವಾರಣೆ, ಮನಸ್ಸಿನಲ್ಲಿ ಮಂದಹಾಸ, ಶತ್ರು ನಿವಾರಣೆಯಾದರೂ ಭಯ ತೊಲಗದು.

ಧನಸುರಾಶಿ
ಆತ್ಮಶಕ್ತಿಯ ಭಯದಿಂದ ವ್ಯವಹಾರದಲ್ಲಿ ಲಾಭ, ಸ್ಥಾನ ಪ್ರಾಪ್ತಿಯ ಸೂಚನೆ ಲಭಿಸಲಿದೆ, ಪತ್ನಿಯ ಮಾತನ್ನು ಕೇಳಿರಿ, ರಾಜಕೀಯ ವ್ಯಕ್ತಿಗಳ ಭೇಟಿ, ಸಾಲಗಾರರಿಂದ ಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರಗಳಿಗೆ ಪ್ರಯಾಣ.

ಮಕರರಾಶಿ
ಗೃಹದಲ್ಲಿ ಕಲಹ ಉಂಟಾದೀತು, ಮಕ್ಕಳಿಂದ ಆಕಸ್ಮಿಕವಾಗಿ ಅವಘಡಗಳು, ಆತ್ಮೀಯರಿಂದ ಅಭಿಮಾನ ಭಂಗ, ಪೊಲೀಸ್ ಸ್ಟೇಷನ್,ಕೋರ್ಟ್‍ಗೆ ಅಲೆದಾಟ, ಭಾವನೆ ಮತ್ತು ದುರಾಲೋಚನೆಗಳಲ್ಲಿ ವಿಹರಿಸುವಿರಿ. ಆರ್ಥಿಕ ಒತ್ತಡ.

ಕುಂಭರಾಶಿ
ವ್ಯವಹಾರಗಳಲ್ಲಿ ಬಂಧುಗಳಿಂದ ಮನಸ್ತಾಪ, ಶ್ರೇಯೋಭಿವೃದ್ದಿಯಿದ್ದರೂ ಚಿಂತೆ ತಪ್ಪದು, ಮಂಗಲ ಕಾರ್ಯ, ಆಸ್ತಿ ಅಥವಾ ವಾಹನ ಮಾರಾಟ, ಪ್ರಯಾಣದಲ್ಲಿ ವಸ್ತುಗಳು ಕಳವು, ಶತ್ರುಗಳು ಅಧಿಕ.

https://kannada.newsnext.live/mangalore-city-police-arrest-9-students-raging-case/

ಮೀನರಾಶಿ
ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ವಿದ್ಯಾಭ್ಯಾಸನಿಮಿತ್ತ ಪ್ರಯಾಣ, ಕುಟುಂಬದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ, ಅವಮಾನ, ಅಪಮಾನಗಳಿಗೆ ತಲೆಕೆಡಿಸಿಕೊಳ್ಳದಿರಿ, ಉದ್ಯೋಗದಲ್ಲಿ ಲಾಭದ ಸೂಚನೆ ದೊರಕೀತು, ಆರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ಜಯ.

Comments are closed.