ನಿತ್ಯಭವಿಷ್ಯ : 20-05-2020

0

ಮೇಷರಾಶಿ
ಯಾರನ್ನೂ ಹೆಚ್ಚು ನಂಬಬೇಡಿ, ನಿರುದ್ಯೋಗಿಗಳ ಅಲೆದಾಟ ಸದ್ಯದ ಮಟ್ಟಿಗೆ ಮುಂದುವರಿಯಲಿದೆ. ವೃತ್ತಿರಂಗದಲ್ಲಿ ಬಂದ ಅವಕಾಶಗಳನ್ನು ಸದುಪಯೋಗಿಸುವುದು. ಅಗತ್ಯವಿದೆ. ಪತ್ನಿಯ ಸಹಕಾರ ಮುನ್ನಡೆಗೆ ಸಾಧಕ. ಪರಿಶ್ರಮಕ್ಕೆ ತಕ್ಕ ಫಲ, ಮನಸ್ಸಿನಲ್ಲಿ ಭಯ ಭೀತಿ, ಪ್ರಿಯ ಜನರ ಭೇಟಿ, ಚಿನ್ನಾಭರಣ ಪ್ರಾಪ್ತಿ, ಗೌರವ-ಕೀರ್ತಿ ಲಾಭ.

ವೃಷಭರಾಶಿ
ಅಧಿಕಾರ ಪ್ರಾಪ್ತಿ, ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ, ಆಗಾಗ ಸಂಚಾರ ಯಂತ್ರ ರಿಪೇರಿಗಾಗಿ ನಾನಾ ರೀತಿಯಲ್ಲಿ ಖರ್ಚುಗಳು ಬರಲಿವೆ. ಅವಿವಾಹಿತರು ಭಾಗ್ಯಶಾಲಿಗಳಾದಾರು. ಆಗಾಗ ಮಾನಸಿಕ ಅಶಾಂತಿ ತೋರಿ ಬಂದರೂ ಆತ್ಮವಿಶ್ವಾಸ ನಮ್ಮನ್ನು ಕಾಪಾಡಲಿದೆ. ಮಾನಸಿಕ ನೆಮ್ಮದಿ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ದೂರ ಪ್ರಯಾಣಕ್ಕೆ ಮನಸ್ಸು.

ಮಿಥುನರಾಶಿ
ದೇವತಾ ಕಾರ್ಯಗಳು ಮನಸ್ಸಿಗೆ ಶಾಂತಿ ಸಮಾಧಾನ ನೀಡಬಲ್ಲದು. ನಿಮ್ಮ ಅಭಿವದ್ಧಿಗೆ ಆಗಾಗ ಹಿತಶತ್ರುಗಳೇ ನಿಮಗೆ ಅಡ್ಡಿ ಮಾಡಲಿದ್ದಾರೆ. ನೂತನ ಕಾರ್ಯಾರಂಭಕ್ಕೆ ಆತುರ ಮಾಡುವುದು ಬೇಡ. ದೇವತಾ ಕಾರ್ಯಗಳಲ್ಲಿ ಒಲವು, ಪತ್ನಿಯಿಂದ ಬುದ್ಧಿಮಾತು, ಶತ್ರುಗಳ ನಾಶ, ಕುತಂತ್ರದಿಂದ ಹಣ ಸಂಪಾದನೆ, ವೃಥಾ ತಿರುಗಾಟ, ಕೆಲಸ ಕಾರ್ಯಗಳಲ್ಲಿ ಪರಿಶ್ರಮ.

ಕಟಕರಾಶಿ
ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭ, ಶೀತ ಸಂಬಂಧಿತ ರೋಗ, ಮಾತಿನಲ್ಲಿ ಹಿಡಿತ ಅಗತ್ಯ, ಧನದಾಯ ಉತ್ತಮವಿದ್ದರೂ ಆಗಾಗ ಅನಿರೀಕ್ಷಿತ ಖರ್ಚುವೆಚ್ಚಗಳು ಆತಂಕಕ್ಕೆ ಕಾರಣವಾದೀತು. ಉದರ ಸಂಬಂಧಿ ಸಮಸ್ಯೆಗಳು ತೋರಿಬರುತ್ತವೆ. ನಿರುದ್ಯೋಗಿಗಳು ಹಲವಾರು ಅವಕಾಶವನ್ನು ನಿರಾಕರಿಸಲಿದ್ದಾರೆ. ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ ಸಾಧ್ಯತೆ, ಇಷ್ಟಾಥ ಸಿದ್ಧಿಗಾಗಿ ಪರಿಶ್ರಮ.

ಸಿಂಹರಾಶಿ
ವ್ಯಾಪಾರಿ ವರ್ಗದವರು ಉತ್ತಮದಾಯಕ ಅಭಿವೃದ್ಧಿಯನ್ನು ಪಡೆಯಲಿದ್ದಾರೆ. ಸಾಮಾಜಿಕವಾಗಿ ಹಲವಾರು ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಹಿರಿಯರ ಮಾರ್ಗದರ್ಶನ ಅನುಗ್ರಹಕಾರಕವಾಗಲಿದೆ. ವ್ಯಾಪಾರ ವ್ಯವಹಾರ ಮೇಲೆ ಕೆಟ್ಟವರ ದೃಷ್ಟಿ ಬೀಳಲಿದೆ. ಶರೀರದಲ್ಲಿ ನೋವು, ಪಾಪದ ಕೆಲಸಕ್ಕೆ ಮನಸ್ಸು, ಮಾನಸಿಕ ಒತ್ತಡ, ಆತುರ ಸ್ವಭಾವದಿಂದ ನಷ್ಟ ಸಾಧ್ಯತೆ.

ಕನ್ಯಾರಾಶಿ
ಸಮಾಜದಲ್ಲಿ ಉತ್ತಮ ಗೌರವ, ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ಹಿತಶತ್ರುಗಳ ಬಗ್ಗೆ ಜಾಗ್ರತೆ ವಹಿಸಿರಿ. ಅನಾವಶ್ಯಕವಾಗಿ ಖರ್ಚುವೆಚ್ಚಗಳು ಅಧಿಕವಾದಾವು. ಕುಟುಂಬದಲ್ಲಿ ಅಸಮಾಧಾನದ ವಾತಾವರಣ ತಂದೀತು. ಆರ್ಥಿಕವಾಗಿ ಆತಂಕಕ್ಕೆ ಕಾರಣವಾಗುವ ಘಟನೆ ನಡೆದೀತು. ವಿದ್ಯಾರ್ಥಿಗಳಿಗೆ ಮುನ್ನಡೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಹಣಕಾಸು ಪರಿಸ್ಥಿತಿ ಚೇತರಿಕೆ.

ತುಲಾರಾಶಿ
ಮನಸ್ಸಿನಲ್ಲಿ ಭಯ, ಆತಂಕ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ವಾಪಾರ, ವ್ಯವಹಾರಗಳು ತುಸು ಅಭಿವೃದ್ಧಿ ಹಾಗೂ ಲಾಭ ತರಲಿವೆ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ಆಗಾಗ ಮಿತ್ರರ ಆಗಮನ ಸಂತಸ ತಂದೀತು. ಹಠ, ಛಲ ಕಡಿಮೆ ಮಾಡಿರಿ. ಸರಿ ತಪ್ಪುಗಳ ಬಗ್ಗೆ ಚಿಂತನೆ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಈ ದಿನ ಎಚ್ಚರಿಕೆಯ ನಡೆ ಅಗತ್ಯ.

ವೃಶ್ಚಿಕರಾಶಿ
ಶುಭ ಮಂಗಲ ಕಾರ್ಯಗಳು ವಿಳಂಬವಾಗಲಿವೆ. ಉದ್ಯೋಗಿಗಳಿಗೆ ಮುನ್ನಡೆಯ ದಿನಗಳಿವು. ಅನಿರೀಕ್ಷಿತ ರೀತಿಯಲ್ಲಿ ಆರೋಗ್ಯಕ್ಕೆ ಸಮಸ್ಯೆ ಬಂದೀತು. ಮಾತಿನಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವಿದೆ. ಇತರರ ಮಾತಿಗೆ ಮರುಳಾಗಬೇಡಿ, ಆತ್ಮೀಯರು-ಬಂಧುಗಳಿಂದ ಎಚ್ಚರಿಕೆ, ಅಧಿಕವಾದ ಖರ್ಚು, ಶತ್ರುಗಳ ಧ್ವಂಸ, ನೆರೆಹೊರೆಯವರಿಂದ ಕುತಂತ್ರ, ಆಸ್ತಿ ವಿಚಾರಗಳಲ್ಲಿ ಕಲಹ.

ಧನಸ್ಸುರಾಶಿ
ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಪರಿಶ್ರಮಕ್ಕೆ ತಕ್ಕ ಫಲ, ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯಲಿದ್ದಾರೆ. ಹಣಕಾಸಿನ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು. ಹಿರಿಯರ ವಿರೋಧ ಮನಸ್ಸಿಗೆ ಬೇಸರ ತಂದೀತು. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಹಣಕಾಸು ಲಾಭ, ಉದ್ಯೋಗದಲ್ಲಿ ಕಿರಿಕಿರಿ, ಮಹಿಳೆಯರಿಗೆ ತೊಂದರೆ, ವಿಪರೀತ ಯೋಚನೆಯ ದಿನ.

ಮಕರರಾಶಿ
ಬೇಡವಾದ ವಿಚಾರಗಳಲ್ಲಿ ಆಸಕ್ತಿ, ಕ್ರೀಡಾಳುಗಳಿಗೆ ಶುಭವಾರ್ತೆ ಇರುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಹಂತಹಂತವಾಗಿ ಸುಧಾರಿಸಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ ನಿಮಗೆ ಸಾಧಕವಾಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ಅಭಿವದ್ಧಿ ಇದೆ.ಅನಾವಶ್ಯಕ ವಸ್ತುಗಳ ಖರೀದಿ, ಭೂ ವ್ಯವಹಾರದಲ್ಲಿ ಲಾಭ, ಭವಿಷ್ಯದ ಆಲೋಚನೆ, ಋಣ ವಿಮೋಚನೆ.

ಕುಂಭರಾಶಿ
ರಫ್ತು ವ್ಯವಹಾರಸ್ಥರಿಗೆ ಲಾಭ, ಆಗಾಗ ಮನಸ್ಸಿಗೆ ಅಸಮಾಧಾನದ ಘಟನೆಗಳು ತೋರಿಬಂದಾವು. ಆರ್ಥಿಕವಾಗಿ ಸಹ ಆತಂಕಕ್ಕೆ ಒಳಗಾಗುವ ಸಾಧ್ಯತೆ ಇದೆ. ವೃತ್ತಿರಂಗದಲ್ಲಿ ನಿಮ್ಮ ಕರ್ತವ್ಯಭಾವದಿಂದ ಮುಂದುವರಿಯಿರಿ. ಬಿಡುವಿಲ್ಲದ ಕೆಲಸ ಕಾರ್ಯಗಳು, ವಿಪರೀತ ಒತ್ತಡ, ರಾಜಕಾರಣಿಗಳಿಗೆ ಯಶಸ್ಸು, ಕಾರ್ಯದಲ್ಲಿ ನಿರ್ವಿಘ್ನ.

ಮೀನರಾಶಿ
ಮೇಲಾಧಿಕಾರಿಗಳಿಂದ ಪ್ರಶಂಸೆ, ಸಾಂಸಾರಿಕ ಹಾಗೂ ಕೌಟುಂಬಿಕವಾಗಿ ಅಭಿವೃದ್ಧಿ ಹಾಗೂ ಉತ್ತಮ ಬೆಳವಣಿಗೆ ಗೋಚರಕ್ಕೆ ಬರಲಿದೆ. ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ. ನೆಂಟರಿಷ್ಟರ ಸಹಕಾರದಿಂದ ಅಭಿವೃದ್ಧಿ ಇದೆ. ವಿಪರೀತ ಕೆಲಸ, ವಿಶ್ರಾಂತಿ ಪಡೆಯುವಿರಿ, ಆರೋಗ್ಯದಲ್ಲಿ ಏರುಪೇರು, ವೈರಿಗಳಿಂದ ದೂರವಿರಿ, ಇಷ್ಟಾರ್ಥ ಸಿದ್ಧಿ.

Leave A Reply

Your email address will not be published.