ನಿತ್ಯಭವಿಷ್ಯ : 02-09-2020

0

ಮೇಷರಾಶಿ
ಕಾರ್ಯರಂಗದಲ್ಲಿ ಸಾರ್ವಜನಿಕ ಓಡಾಟ ಹೆಚ್ಚಲಿದೆ. ವ್ಯಾಪಾರ, ವ್ಯವಹಾರಸ್ಥರಿಗೆ ಸಂತಸದ ದಿನಗಳಿವು. ನೂತನ ವ್ಯವಹಾರದಲ್ಲಿ ಆಸಕ್ತಿ, ವಾಹನ ಯೋಗ, ಅಮೂಲ್ಯ ವಸ್ತುಗಳ ಖರೀದಿ, ರಾಜ ವಿರೋಧ, ಕೋರ್ಟ್ ಕೆಲಸಗಳಲ್ಲಿ ತೊಂದರೆ. ಆರೋಗ್ಯ ಭಾಗ್ಯವು ಸುಧಾರಿಸುತ್ತಾ ಹೋಗಲಿದೆ. ವಿದ್ಯಾರ್ಥಿಗಳಿಗೆ ಆಲಸ್ಯವು ಹೆಚ್ಚಲಿದೆ. ದಿನಾಂತ್ಯ ಶುಭವಿದೆ.

ವೃಷಭರಾಶಿ
ಸರಕಾರಿ ಅಧಿಕಾರಿ ವರ್ಗದಲ್ಲಿ ಅಪವಾದ ಭೀತಿ ಇರುತ್ತದೆ. ಚಂಚಲ ಮನಸ್ಸು, ಶತ್ರು ಬಾಧೆ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ, ಮಿತ್ರರಲ್ಲಿ ದ್ವೇಷ, ಸುಖ ಭೋಜನ ಪ್ರಾಪ್ತಿ, ಮನೆಗೆ ಹಿರಿಯರ ಆಗಮನ. ಶುಭಮಂಗಲ ಕಾರ್ಯದ ಚಿಂತನೆಯು ನಡೆಯಲಿದೆ. ಆಗಾಗ ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ನಿಮ್ಮ ಧೈರ್ಯ, ಸ್ಥೆರ್ಯ ಮುನ್ನಡೆಗೆ ಸಾಧಕವಾಗಲಿದೆ.

ಮಿಥುನರಾಶಿ
ವ್ಯವಹಾರಿಕವಾಗಿ ಗೊಂದಲದ ಸ್ಥಿತಿ ಏರ್ಪಟ್ಟಿತು. ಸ್ಥಿರವಾದ ಆಲೋಚನೆ ಇಲ್ಲದೆ ಕೆಲಸ ಗಳಲ್ಲಿ ಗೊಂದಲ ಉಂಟಾದೀತು. ಆತ್ಮೀಯರಲ್ಲಿ ವಿರೋಧ, ಋಣಭಾದೆ, ವ್ಯವಹಾರದಲ್ಲಿ ಏರುಪೇರು, ಇಲ್ಲ ಸಲ್ಲದ ಅಪವಾದ, ತಾಯಿ ಬಂಧುಗಳಿಂದ ಸಹಾಯ. ವ್ಯಾಪಾರ, ವ್ಯವಹಾರಗಳಲ್ಲಿ ನಿಮ್ಮ ಚಿಂತನೆಯು ಉತ್ತಮವಿರುತ್ತದೆ. ಕಿರು ಸಂಚಾರ ತೋರಿ ಬಂದೀತು.

ಕಟಕರಾಶಿ
ಅತಿಥಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿದ್ದಾರೆ. ಹೊಸ ಉದ್ಯೋಗ ಪ್ರಾಪ್ತಿ, ಪರ ಸ್ತ್ರೀಯರಿಂದ ತೊಂದರೆ, ಅನಿರೀಕ್ಷಿತ ದ್ರವ್ಯಲಾಭ, ನೀವು ಆಡುವ ಮಾತಿನಿಂದ ಅನರ್ಥ. ಆರ್ಥಿಕವಾಗಿ ಉತ್ತಮ ಅಭಿವೃದ್ಧಿ ಇದೆ. ಯೋಗ್ಯ ವಯಸ್ಕರಿಗೆ ವೈವಾಹಿಕ ಭಾಗ್ಯದ ಕನಸು ನನಸಾಗಲಿದೆ. ವಿದ್ಯಾರ್ಥಿ ಗಳಿಗೆ ಉತ್ತಮ ಸ್ಥಿತಿಯು ಇದ್ದು ಮುನ್ನಡೆ ಕಂಡು ಬಂದೀತು.

ಸಿಂಹರಾಶಿ
ಅನಿರೀಕ್ಷಿತ ರೂಪದಲ್ಲಿ ನಿಮ್ಮ ಎಷ್ಟೋ ಕೆಲಸಗಳು ನಡೆ ಹೋದಾವು. ಮನಃಸ್ತಾಪ, ನೆಮ್ಮದಿ ಇಲ್ಲದ ಜೀವನ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದಲ್ಲಿ ಏರುಪೇರು. ಕೂಡಿಟ್ಟ ಹಣ ನೀರಿನಂತೆ ಖರ್ಚಾಗಲಿದೆ. ಕಾರ್ಮಿಕ ವರ್ಗದವರಿಗೆ ತಾಪತ್ರಯಗಳು ಹೆಚ್ಚಾಗಲಿವೆ. ಗೃಹ ನಿರ್ಮಾಣಕ್ಕೆ ಅನುಕೂಲವಾದ ಸಮಯವಿದು.

ಕನ್ಯಾರಾಶಿ
ಸಾಂಸಾರಿಕವಾಗಿ ಕಲಹ ತೋರಿ ಬಂದೀತು. ಸ್ವಯಂಕೃತ ಅಪರಾಧಗಳು ಕಾಡಲಿವೆ. ಬಾಕಿ ವಸೂಲಿ, ದೂರ ಪ್ರಯಾಣ, ಇಷ್ಟವಾದ ವಸ್ತುಗಳ ಖರೀದಿ, ವಾದ-ವಿವಾದಗಳಲ್ಲಿ ಎಚ್ಚರ. ಶ್ರೀ ದೇವತಾ ದರ್ಶನಭಾಗ್ಯದಿಂದ ಶಾಂತಿ ಸಿಗಲಿದೆ. ವೃತ್ತಿರಂಗದಲ್ಲಿ ಹಲವಾರು ಅವಕಾಶಗಳಿವೆ.

ತುಲಾರಾಶಿ
ಅಧಿಕಾರಿ ವರ್ಗದವರಿಗೆ ಮುಂಭಡ್ತಿಯೋಗವಿದೆ. ಪ್ರೀತಿ ಸಮಾಗಮ, ಆತ್ಮೀಯರಲ್ಲಿ ವಿಶ್ವಾಸ, ಮಾನಸಿಕ ಒತ್ತಡ, ಋಣವಿಮೋಚನ, ಸ್ಥಿರಾಸ್ತಿ ಪ್ರಾಪ್ತಿ, ಮನಸ್ಸಿನಲ್ಲಿ ಕೆಟ್ಟ ಆಲೋಚನೆ. ಧನಾಗಮನದಿಂದ ಹಂತಹಂತವಾಗಿ ಋಣ ಸಂದಾಯವಾಗಲಿದೆ. ನಿಮ್ಮ ಕಾರ್ಯ ನಿರ್ವಹಣಾ ರೀತಿಯು ಅಧಿಕಾರಿ ವರ್ಗದವರ ಗಮನ ಸೆಳೆಯಲಿದೆ.

ವೃಶ್ಚಿಕರಾಶಿ
ಸ್ತ್ರೀಯರಿಂದ ತೊಂದರೆ, ವ್ಯವಹಾರದಲ್ಲಿ ಅಲ್ಪ ಲಾಭ, ಪ್ರಯಾಣದಿಂದ ಆಯಾಸ, ಆದಾಯಕ್ಕಿಂತ ಹೆಚ್ಚು ಖರ್ಚು ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ. ಖರ್ಚುವೆಚ್ಚಗಳಲ್ಲಿ ಹಿಡಿತವಿರಲಿ. ಮಕ್ಕಳ ಭವಿಷ್ಯದ ಕುರಿತು ಅನಾವಶ್ಯಕವಾಗಿ ಚಿಂತಿಸದಿರಿ. ಗೆಳೆಯರ ಹಾಗೂ ಬಂಧುಗಳ ಹಿತನುಡಿಗಳು ಮನಸ್ಸನ್ನು ಶಮನಗೊಳಿಸಲಿವೆ.

ಧನುರಾಶಿ
ವಿಪರೀತ ವ್ಯಸನ, ಅನ್ಯರಲ್ಲಿ ವೈಮನಸ್ಸು, ದೂರ ಪ್ರಯಾಣ, ಆತ್ಮೀಯರನ್ನು ದ್ವೇಷಿಸುವಿರಿ, ಉತ್ತಮ ಬುದ್ಧಿಶಕ್ತಿ. ಸಿಡುಕಿನ ಸ್ವಭಾವದ ನೀವು ಆಗಾಗ ತಾಳ್ಮೆಗೆಡುವ ಪ್ರಸಂಗಗಳು ಎದುರಾದರೂ ಸಮಾಧಾನಚಿತ್ತದಿಂದ ವರ್ತಿಸಿರಿ. ಇದರಿಂದ ನಿಮಗೆ ಕ್ಷೇಮ. ಸಂಚಾರದಲ್ಲಿ ಅತೀ ಮಾಡಿದೆ. ಖರ್ಚಿನಲ್ಲಿ ಮಿತಿ ಇರಲಿ.

ಮಕರರಾಶಿ
ಮನಸ್ಸಿಟ್ಟು ಇಡೀ ದಿನ ಕಾರ್ಯವನ್ನು ನಿರ್ವಹಿಸುವ ರೀತಿ ಮೆಚ್ಚುವಂತಹದು. ಆಕಸ್ಮಿಕ ಧನಲಾಭ, ದಂಡ ಕಟ್ಟುವ ಸಾಧ್ಯತೆ, ಹಿತಶತ್ರುಗಳಿಂದ ತೊಂದರೆ, ಮಾನಹಾನಿ, ವ್ಯಾಪಾರದಲ್ಲಿ ಅಭಿವೃದ್ಧಿ. ಆರ್ಥಿಕ ಅಡಚಣೆಗಳು ಎದುರಾದರೆ ಎದೆ ಗುಂದಲಿದೆ. ಸಮಾಧಾನ ಚಿತ್ತದಿಂದ ಮುನ್ನಡೆಯಿರಿ. ಜಯವಿದೆ.

ಕುಂಭರಾಶಿ
ಕುಟುಂಬದಲ್ಲಿ ಅಹಿತಕರ ವಾತಾವರಣ, ಸ್ತ್ರೀಯರಿಗೆ ನೆಮ್ಮದಿ, ಪರರಿಂದ ಮೋಸ, ಸ್ಥಿರಾಸ್ತಿ ಮಾರಾಟ, ಶತ್ರು ಬಾಧೆ. ಸಂಸಾರದಲ್ಲಿ ಸಂತಸ, ನೆಮ್ಮದಿ ಲಭಿಸೀತು. ಕಾರ್ಯರಂಗದಲ್ಲಿ ಅತೀಯಾದ ಒತ್ತಡವಿದ್ದರೂ ಅದನ್ನು ನಿರ್ವಹಿಸುವ ಚಾಕಚಕ್ಯತೆ ನಿಮಗಿದೆ. ಆದರೆ ದುಡುಕು ನಿರ್ಧಾರದಿಂದ ಕೆಲಸ ಹಾಳು ಮಾಡದಿರಿ.

ಮೀನರಾಶಿ
ದಾನ ಧರ್ಮದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ, ಮಾತಿನ ಚಕಮಕಿ, ಆರೋಗ್ಯದಲ್ಲಿ ಏರುಪೇರು, ದಾಂಪತ್ಯದಲ್ಲಿ ಅನ್ಯೂನ್ಯತೆ, ಗೆಳೆಯರೊಂದಿಗೆ ಜಗಳ. ಸಹೋದ್ಯೋಗಿಗಳೊಂದಿಗೆ ಉತ್ತಮ ರೀತಿಯಲ್ಲಿ ನಡವಳಿಕೆ ಇರಲಿ. ವೃತ್ತಿರಂಗದಲ್ಲಿ ಅತಿಯಾದ ಒತ್ತಡವು ತೋರಿ ಬಂದೀತು. ಮೇಲಧಿಕಾರಿಗಳ ವಿಶ್ವಾಸ ಗಳಿಸಿರಿ. ಆರ್ಥಿಕವಾಗಿ ಇತಿಮಿತಿ ಇಟ್ಟುಕೊಳ್ಳಿರಿ

Leave A Reply

Your email address will not be published.