ನಿತ್ಯಭವಿಷ್ಯ: 18-08-2020

0

ಮೇಷರಾಶಿ
ನಂಬಿಕಸ್ಥರಿಂದ ಮೋಸ, ದಾಂಪತ್ಯದಲ್ಲಿ ಕಲಹ, ಮಾನಸಿಕ ವ್ಯಥೆ, ರೋಗಬಾಧೆ, ಕೃಷಿಕರಿಗೆ ಅಲ್ಪ ಲಾಭ, ಸ್ಥಳ ಬದಲಾವಣೆ. ನ್ಯಾಯಾಲಯದ ವಿವಾದ ರಾಜಿಯಲ್ಲಿ ಮುಕ್ತಾಯಗೊಳ್ಳಲಿದೆ. ವ್ಯಾಪಾರೋದ್ಯಮದಲ್ಲಿ ಹೆಚ್ಚು ಲಾಭದಾಯಕ ಆದಾಯವಿದೆ. ಬೆಳ್ಳಿ, ಬಂಗಾರಕ್ಕೂ ನಿಮ್ಮ ಮನೆ ಸೇರುವ ಸುಯೋಗವಿದೆ. ಆಪ್ತೇಷ್ಟರಲ್ಲಿ ವಿರಸ ಉಂಟಾದೀತು.

ವೃಷಭರಾಶಿ
ದೇವತಾ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರಿಗೆ ಅನುಕೂಲ, ಚಂಚಲ ಮನಸ್ಸು, ವೃತ್ತಿ ನಿರತರಿಗೆ ಶ್ಲಾಘನೆ. ಮೇಲಧಿಕಾರ ಪ್ರಾಪ್ತಿಯ ಸುಯೋಗವಿದೆ. ಮುಂಗೋಪದಿಂದ, ದುಡುಕಿನಿಂದ ಕಾರ್ಯ ಹಾನಿಯಾದೀತು. ಆದಾಯಕ್ಕೆ ಕೊರತೆಬಾರದು. ದೂರ ಪ್ರಯಾಣದಿಂದ ಕಾರ್ಯಸಿದ್ದಿ ಇದೆ. ವಾಹನದಿಂದ ಸಮಸ್ಯೆ. ಉದ್ಯೋಗದಲ್ಲಿ ಕಿರಿಕಿರಿ, ಚೋರಭಯ.

ಮಿಥುನರಾಶಿ
ಮಗಳ ವಿವಾಹ ವಿಚಾರದಿಂದ ಓಡಾಟ ವಿರುತ್ತದೆ. ತೃಪ್ತಿಕರ ಫಲಿತಾಂಶದಿಂದ ಮನಸ್ಸಿಗೆ ನೆಮ್ಮದಿ. ಶಿಕ್ಷಣ ಕ್ಷೇತ್ರದ ವೃತ್ತಿ ನಿರತರಿಗೆ ಕಾರ್ಯಭಾರ ಅಧಿಕವೆನಿಸಿದರೂ ವರ್ಗಾವಣೆ ಇರದು. ಸಂಚಾರದಿಂದ ಅಪಘಾತ ಭಯ. ಸ್ವಲ್ಪ ಹಣ ಬಂದರು ಉಳಿಯುವುದಿಲ್ಲ, ವಾಹನದಿಂದ ತೊಂದರೆ, ಸ್ತ್ರೀಯರಲ್ಲಿ ತಾಳ್ಮೆ ಅತ್ಯಗತ್ಯ, ಕೆಲಸ ಕಾರ್ಯಗಳಲ್ಲಿ ವಿಘ್ನ.

ಕಟಕರಾಶಿ
ಕೈಗಾರಿಕೋದ್ಯಮಿಗಳಿಗೆ ಯಶಸ್ಸು, ಮಾನಸಿಕ ನೆಮ್ಮದಿ, ಕಟ್ಟಡ ಕಾರ್ಮಿಕರಿಗೆ ಆದಾಯದ ಕೊರತೆ ಇದ್ದರೂ ಕೈತುಂಬಾ ಕೆಲಸ ಸಿಗಲಿದೆ. ಅಲರ್ಜಿಯಂತಹ ದೇಹಪೀಡೆಯಿಂದ ಆರೋಗ್ಯ ಹಾನಿ. ಸಹೋದರರೊಳಗೆ ಮನಸ್ತಾಪಕ್ಕೆ ಕಾರಣವಾದೀತು. ದೇವತಾ ಕಾರ್ಯದಲ್ಲಿ ಆಸಕ್ತಿ ತರಲಿದೆ. ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರುಗಳ ಕಾಟ.

ಸಿಂಹರಾಶಿ
ಧರ್ಮಕಾರ್ಯಗಳಲ್ಲಿ ವಿಘ್ನ ಭೀತಿ ಇದೆ. ಉದ್ಯೋಗದಲ್ಲಿ ವಂಚನೆಯಿಂದ ಧನ ಹಾನಿ ಸಂಭವ. ಸಂಗೀತ, ನಾಟ್ಯ, ಚಿತ್ರಕಲಾ ವಿಭಾಗದವರಿಗೆ ಯಶಸ್ಸು. ಎಚ್ಚರಿಕೆಯಿಂದ ಹೆಜ್ಜೆ ಇಟ್ಟಲ್ಲಿ ತಾಂತ್ರಿಕ ವೃತ್ತಿಯವರಿಗೆ ಲಾಭವಿದೆ.ಈ ದಿನ ಶುಭ ಫಲ, ಮಾಡುವ ಕಾರ್ಯದಲ್ಲಿ ಯಶಸ್ಸು, ಕ್ರಯ ವಿಕ್ರಯಗಳಲ್ಲಿ ಲಾಭ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ವ್ಯತ್ಯಾಸ

ಕನ್ಯಾರಾಶಿ
ನಾನಾ ಮೂಲಗಳಿಂದ ಧನಾಗಮನ, ಮಿತ್ರರಿಂದ ಬೆಂಬಲ, ಹಿತಶತ್ರುಗಳ ಬಾಧೆ, ಸ್ಥಿರಾಸ್ತಿ ಖರೀದಿ, ಆಹಾರ, ವ್ಯವಹಾರ, ವಿಲಾಸೀ ಸಾಮಗ್ರಿಗಳ ವ್ಯವಹಾರದಲ್ಲಿ ಮೇರುಗತಿ ಪಡೆಯಲಿದೆ. ಸ್ವರ್ಣಾಭರಣದ ಖರೀದಿ ಇದೆ. ನೂತನ ಕಾರ್ಯಸಿದ್ಧಿ ಇದೆ. ಆಕಸ್ಮಿಕ ಧನಾಗಮನವಿದ್ದು ಕೆಲಸವು ಸುಲಭವಾಗಲಿದೆ. ಜಯವಿದೆ.ಸಾಮಾಜಿಕ ಕಾರ್ಯಗಳಲ್ಲಿ ಲಾಭ.

ತುಲಾರಾಶಿ
ಬಂಧುಗಳಿಗೆ ನೆರವಾಗುವುದರಿಂದ ಖರ್ಚುವೆಚ್ಚ ಹೆಚ್ಚಲಿದೆ. ಕಾರ್ಯದೊತ್ತಡವಿದ್ದರೂ ಧನಾಗಮನವು ಉತ್ತಮವಿದ್ದು ಸತ್ಕಾರ್ಯಗಳಿಂದ ತೃಪ್ತಿ ತರಲಿದೆ. ಪ್ರಯಾಣದಿಂದ ಆರೋಗ್ಯವು ನಷ್ಟವಾದೀತು. ಜಾಗ್ರತೆ ಮಾಡಿರಿ. ಉದಾಸೀನದಿಂದ ವಸ್ತುಗಳನ್ನು ಕಳೆದುಕೊಳ್ಳುವಿರಿ, ಲೇವಾದೇವಿ ವ್ಯವಹಾರದವರಿಗೆ ಲಾಭ, ವ್ಯಾಪಾರದಲ್ಲಿ ಅನುಕೂಲ, ನಾನಾ ಮೂಲಗಳಿಂದ ಧನಾಗಮನ.

ವೃಶ್ಚಿಕರಾಶಿ
ಅಪರಿಚಿತ ವಿಚಾರದಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಉತ್ತಮ ಪ್ರಗತಿ ಇದೆ. ಕೃಷಿ ಚಟುವಟಿಕೆಗಳಿಗೆ ವಿಘ್ನ ತೋರಿ ಬಂದೀತು. ಮನೆಯಲ್ಲಿ ನೂತನ ವಸ್ತುಗಳ ಖರೀದಿಯ ಭರಾಟೆ ಇದೆ. ಕಾರ್ಮಿಕ ವರ್ಗಕ್ಕೆ ವರ್ಗಾವಣೆಯ ಸಾಧ್ಯತೆಯು ಇದೆ.ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಗೆ ಲಾಭ, ಮಗನಿಂದ ಶುಭ ವಾರ್ತೆ, ವೈರಿಗಳಿಂದ ದೂರವಿರಿ.

ಧನಸ್ಸುರಾಶಿ
ಸ್ವಸ್ಥ ಮನಸ್ಸಿನಿಂದ ನೆಮ್ಮದಿ, ನೂತನ ಗೃಹ ಪ್ರವೇಶಕ್ಕೆ ಸಕಾಲವಿದು. ರಾಜಕೀಯದಲ್ಲಿ ಪಕ್ಷಾಂತರದ ಪಿಡುಗು ತೋರಿ ಬರಲಿದೆ. ನೆಂಟರಿಷ್ಟರು ನಿಮ್ಮಿಂದ ಅಭಿವೃದ್ಧಿ ಹೊಂದಲಿದ್ದಾರೆ. ನಿರುದ್ಯೋಗಿಗಳಿಗೆ ವೃತ್ತಿ ಲಾಭವಿದೆ. ಕೋರ್ಟು ಕಚೇರಿಯಲ್ಲಿ ಜಯವಿದೆ. ಆರೋಗ್ಯದಲ್ಲಿ ಚೇತರಿಕೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ದಾಯಾದಿಗಳ ಕಲಹ.

ಮಕರರಾಶಿ
ವಿವಾಹ ಯೋಗ, ಮಿತ್ರರಿಂದ ಬೆಂಬಲ, ವಿಪರೀತ ಕೋಪ, ಶತ್ರುಗಳ ಬಾಧೆ, ಹೊಸ ಉದ್ಯೋಗ ಪ್ರಾರಂಭಿಸುವವರಿಗೆ ಸಕಾಲ. ತಂದೆಯ ಆರೋಗ್ಯ ಹದಗೆಡಲಿದೆ. ಜಾಗ್ರತೆ ವಹಿಸುವುದು. ಕೋರ್ಟುಕಚೇರಿ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಒಟ್ಟಿನಲ್ಲಿ ಸುಖದುಃಖದ ಸಮ್ಮಿಶ್ರ ಅನುಭವ ನಿಮ್ಮದಾಗಲಿದೆ. ವ್ಯಾಪಾರಗಳಿಂದ ಲಾಭ.

ಕುಂಭರಾಶಿ
ಶ್ರಮಕ್ಕೆ ತಕ್ಕ ಫಲ, ಗಣ್ಯವ್ಯಕ್ತಿಗಳ ಬೇಟೆ, ರಾಜಕೀಯದಲ್ಲಿ ಪಕ್ಷಾಂತರದ ಪಿಡುಗು ಫಲಕೊಟ್ಟಿತು. ಹೊಸ ಉದ್ಯೋಗ ಪ್ರಾರಂಭಿಕರಿಗೆ ದೂರ ಸಂಚಾರದ ಯೋಗವಿದೆ. ಪದೇ ಪದೇ ಕಾರ್ಯವಿಘ್ನ ಭಯದಿಂದ ವಿಳಂಬವಾದೀತು. ದಾಂಪತ್ಯದಲ್ಲಿ ಪ್ರೀತಿ, ಬಡ ರೋಗಿಗಳಿಗೆ ಸಹಾಯ.

ಮೀನರಾಶಿ
ಇಲ್ಲ ಸಲ್ಲದ ಅಪವಾದ, ಯತ್ನ ಕಾರ್ಯದಲ್ಲಿ ಜಯ, ಸುಖ ಭೋಜನ, ಇತರರ ಮಾತಿಗೆ ಮರುಳಾಗಬೇಡಿ. ಜೀರ್ಣ ಕ್ರಿಯೆಯಲ್ಲಿ ಉಷ್ಣವಾಯು ದೋಷ. ಹಣವು ನೀರಿನಂತೆ ಖರ್ಚಾದೀತು. ಆದರೂ ಆದಾಯದಲ್ಲಿ ಕೊರತೆ ಕಾಣದು. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗಾಗಿ ವಿದೇಶ ಪ್ರಯಾಣದ ಸಾಧ್ಯತೆ ಇದೆ. ಉದ್ಯೋಗ ರಸಿಗರಿಗೆ ಉದ್ಯೋಗ ಸಿಕ್ಕಲಿದೆ.

Leave A Reply

Your email address will not be published.