ನಿತ್ಯಭವಿಷ್ಯ : 02-08-2020

0

ಮೇಷರಾಶಿ
ಆಕಸ್ಮಿಕ ಧನಲಾಭ, ದೈವ, ಗುರುವಿನ ಹೆಚ್ಚಿನ ಅನುಗ್ರಹ ಮಾಡಿಕೊಂಡಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ. ವೃತ್ತಿರಂಗದಲ್ಲಿ ಲವಲವಿಕೆ, ಉತ್ಸಾಹ ಮೂಡಬಹುದು. ವಿದ್ಯಾರ್ಥಿಗಳು ಮಹತ್ತರ ಯಶಸ್ಸನ್ನು ಸಾಧಿಸಲಿದ್ದಾರೆ. ನಿಶ್ಚಿತ. ಇಷ್ಟ ವಸ್ತುಗಳ ಖರೀದಿ, ಪರಿಶ್ರಮಕ್ಕೆ ತಕ್ಕ ಫಲ, ಮಕ್ಕಳಿಗಾಗಿ ಅಧಿಕ ಖರ್ಚು, ಉತ್ತಮ ಪ್ರಗತಿ, ಆರೋಗ್ಯದಲ್ಲಿ ಏರುಪೇರು.

ವೃಷಭರಾಶಿ
ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ, ಕುಟುಂಬ ಸದಸ್ಯರಿಂದ ಅನಿರೀಕ್ಷಿತ ತೊಂದರೆ, ಖರ್ಚುವೆಚ್ಚಗಳು ಅಧಿಕವಾದರೂ ಸರಿಯಾದ ಸಮಯದಲ್ಲಿ ಧನಾಗಮನವು ನೆಮ್ಮದಿ ತಂದೀತು. ನವದಂಪತಿಗಳಿಗೆ ಸಂತಾನ ಭಾಗ್ಯದ ಸೂಚನೆ ತರಲಿದೆ. ಬಿಡುವಿನ ವೇಳೆಯಲ್ಲಿ ಆದಾಯ ತರುವ ಕೆಲಸಗಳಾದಾವು. ವಿವಾದಗಳಿಗೆ ಆಸ್ಪದ ಕೊಡಬೇಡಿ, ಶೀತ ಸಂಬಂಧವಾದ ರೋಗಗಳು ಪ್ರಾಪ್ತಿ.

ಮಿಥುನರಾಶಿ
ಮಾನಸಿಕ ಒತ್ತಡ,ಯತ್ನ ಕಾರ್ಯಗಳಲ್ಲಿ ವಿಳಂಬ, ನಿರೀಕ್ಷಿತ ವೈವಾಹಿಕ ಸಂಬಂಧವು ನಿಶ್ಚಿತ ರೂಪದಲ್ಲಿ ಫ‌ಲಿಸಲಿದೆ. ಸಾಮಾಜಿಕ ಸ್ತರದಲ್ಲಿ ರಾಜಕೀಯ ವಲಯದಲ್ಲಿ ನಿಮ್ಮ ವರ್ಚಸ್ಸು ಕಳೆ ಗುಂದಲಿದೆ. ಜಾಗ್ರತೆ ವಹಿಸಿರಿ. ವಿದ್ಯಾರ್ಥಿಗಳಿಗೆ ಯಶಸ್ಸಿದೆ. ಸ್ತ್ರೀ ಲಾಭ, ಸ್ನೇಹಿತರಿಂದ ಸಹಾಯ, ವಿದ್ಯಾಭಿವೃದ್ಧಿ, ಹೊರದೇಶ ಪ್ರಯಾಣ, ವಾರಾಂತ್ಯದಲ್ಲಿ ಧನಲಾಭ, ವಿವಾಹಯೋಗ.

ಕಟಕರಾಶಿ
ಯೋಗ್ಯ ವಯಸ್ಕರಿಗೆ ಕಂಕಣಬಲದ ಸಾಧ್ಯತೆ ತೋರಿ ಬರುವುದು. ರಾಜಕೀಯ ವ್ಯಕ್ತಿಗಳಿಗೆ ನೆಮ್ಮದಿಯ ದಿನಗಳಿವು. ಆರೋಗ್ಯದಲ್ಲಿ ಆಗಾಗ ಏರಿಳಿತ ಕಂಡು ಬಂದೀತು. ದಿನಾಂತ್ಯ ಶುಭವಾರ್ತೆ ಇರುವುದು. ಅನ್ಯರಲ್ಲಿ ದ್ವೇಷ ಸಾಮಾನ್ಯ, ಸುಖಕ್ಕೆ ಧಕ್ಕೆ ಕೋಪ ಜಾಸ್ತಿ, ಪಿತ್ರಾರ್ಜಿತ ಆಸ್ತಿ ಗಳಿಕೆ, ತಾಯಿಯಿಂದ ಧನಲಾಭ, ಉದ್ಯೋಗದಲ್ಲಿ ಬಡ್ತಿ, ಅಕಾಲ ಭೋಜನ.

ಸಿಂಹರಾಶಿ
ಆರ್ಥಿಕ ಪರಿಸ್ಥಿತಿ ಏರುಪೇರು, ಚಿಂತಿತ ವಿಚಾರಗಳನ್ನು ಚಾಲನೆಗೊಳಿಸಲು ಇದು ಸಕಾಲವಾಗಿರುತ್ತದೆ. ಮಕ್ಕಳ ಬಗ್ಗೆ ತುಸು ಕಿರಿಕಿರಿ ಹೊಂದಿದ್ದರೂ ಸುಧಾರಿಸಿಕೊಂಡು ಹೋಗಬಹುದಾಗಿದೆ. ನಿರೀಕ್ಷಿತ ವೈವಾಹಿಕ ಸಂಬಂಧಗಳು ಪೂರ್ಣಗೊಳ್ಳಲಿವೆ.ಮಕ್ಕಳಿಂದ ತೊಂದರೆ, ಅಪವಾದ ನಿಂದನೆ, ಶತ್ರು ಬಾಧೆ ಮನೆಯಲ್ಲಿ ಶಾಂತಿಯ ವಾತಾವರಣ.

ಕನ್ಯಾರಾಶಿ
ಹಣದ ಅಡಚಣೆ, ಸೇವಕರಿಂದ ಸಹಾಯ, ಆರೋಗ್ಯ, ಉಲ್ಲಾಸ ಸಂಪನ್ನವಾಗಲಿದೆ. ಮನೆಯಲ್ಲಿ ಮಂಗಲಕಾರ್ಯದ ಚಿಂತನೆಗೆ ತಾತ್ಕಾಲಿಕ ಅಡಚಣೆ ಕಂಡು ಬಂದೀತು. ವಿದ್ಯಾರ್ಥಿಗಳಿಗೆ ದಿನಾಲು ಓದುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಸಂಚಾರದಲ್ಲಿ ಜಾಗ್ರತೆ. ಸತ್ಕರ್ಮದಲ್ಲಿ ಆಸಕ್ತಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಶೀಘ್ರದಲ್ಲಿ ಸಂತಸದ ಸಮಾಚಾರ ಕೇಳುವಿರಿ.

ತುಲಾರಾಶಿ
ಪ್ರಿಯ ಜನರ ಭೇಟಿ ಯತ್ನ,ಕಾರ್ಯ ಅನುಕೂಲ, ಹಣಕಾಸಿನ ವಿಚಾರದಲ್ಲಿ ಹಲವು ದಾರಿಗಳು ಕಂಡು ಬಂದಾವು. ವೃತ್ತಿರಂಗದಲ್ಲಿ ಎಚ್ಚರದ ನಡೆಯಾಗಿರಲಿ. ಸಾಲಕ್ಕೆ ಜಾಮೀನು ಅಗದಿರಿ. ವಂಚನೆಗೆ ಆಸ್ಪದವಾದೀತು. ವಿದ್ಯಾರ್ಥಿಗಳು ನಿರುತ್ಸಾಹ ಹೊಂದಿಯಾರು. ಕೃಷಿಯಲ್ಲಿ ಲಾಭ, ದೂರ ಪ್ರಯಾಣ, ದಾಯಾದಿ ಕಲಹ, ದುಷ್ಟ ಜನರಿಂದ ದೂರವಿರಿ.

ವೃಶ್ಚಿಕರಾಶಿ
ವ್ಯಾಪಾರದಲ್ಲಿ ಲಾಭ, ಅನಾರೋಗ್ಯ, ಜೀವನದ ಹಲವಾರು ಅವಕಾಶಗಳು ನಿಮಗೆ ಒದಗಿಬಂದಾವು. ಅವಿವಾಹಿತರು ಮಂಗಲ ಕಾರ್ಯವನ್ನು ಶೀಘ್ರವಾಗಿ ಮುಗಿಸುವ ಚಿಂತನೆ ತೋರಿ ಬರಲಿದೆ. ಸರಕಾರಿ ಅಧಿಕಾರಿಗಳಿಗೆ ಮುನ್ನಡೆ ಇದೆ. ಶತ್ರುಗಳಿಂದ ತೊಂದರೆ, ಊರೂರು ಸುತ್ತಾಟ, ಮನಸ್ಸಿನಲ್ಲಿ ಭಯಭೀತಿ, ವ್ಯಾಪಾರದಲ್ಲಿ ಎಚ್ಚರವಹಿಸಿ.

ಧನಸ್ಸುರಾಶಿ
ಅಧಿಕಾರಿಗಳಿಂದ ಪ್ರಶಂಸೆ, ಕೆಲಸ ಕಾರ್ಯಗಳಲ್ಲಿ ಜಯ, ರಾಹುವಿನ ಪ್ರತಿಕೂಲತೆಯಿಂದ ಆಗಾಗ ಅಡಚಣೆಗಳು ತೋರಿ ಬಂದಾವು. ಸಾಂಸಾರಿಕವಾಗಿ ಆರೋಗ್ಯ ಸ್ಥಿತಿಯಲ್ಲಿ ಸಮಸ್ಯೆಗಳು ತೋರಿ ಬರುತ್ತವೆ. ಕೌಟುಂಬಿಕವಾಗಿ ತಲೆಮಾರಿನ ಅಂತರದಿಂದ ಕಲಹ ತಂದೀತು. ವಾಹನ ಪ್ರಾಪ್ತಿ, ಅಧಿಕ ತಿರುಗಾಟ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವಿವಾಹಯೋಗ.

ಮಕರರಾಶಿ
ಮಾತಿನ ಕಲಹ, ನೆಮ್ಮದಿ ಇಲ್ಲದ ಜೀವನ, ಪಾಪದ ಕೆಲಸಗಳಿಗೆ ಪ್ರಚೋದನೆ, ರಾಜಕೀಯ ವಲಯದಲ್ಲಿ ನಿಮ್ಮ ಕಾರ್ಯಸಾಧನೆಯಾಗಲಿದೆ. ಆರ್ಥಿಕವಾಗಿ ಕೂಡಾ ದಿನದಿಂದ ದಿನ ಅಭಿವೃದ್ಧಿ ಕಂಡು ಬರುವುದು. ಇದರ ಮಧ್ಯೆ ಮಾನಸಿಕವಾಗಿ ಋಣಾತ್ಮಕ ಚಿಂತೆ ತೋರಿ ಬರಲಿದೆ. ಆರೋಗ್ಯಪ್ರಾಪ್ತಿ.

ಕುಂಭರಾಶಿ
ಹಿರಿಯರಿಂದ ಬೋಧನೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಕೋರ್ಟುಕಚೇರಿ ವ್ಯವಹಾರಗಳು ನಿಮ್ಮ ಪರವಾಗಿ ಮುಕ್ತಾಯಗೊಳ್ಳಲಿವೆ. ಆದರೂ ಪಂಚಮದ ರಾಹು ಆಗಾಗ ಆತಂಕಗಳನ್ನು ಸೃಷ್ಟಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಅಪರಿಚಿತರಿಂದ ದೂರವಿರಿ. ಅಧಿಕ ಕೋಪ, ಮಂಗಳ ಕಾರ್ಯಗಳಲ್ಲಿ ಭಾಗಿ, ಮಕ್ಕಳಿಂದ ಸಹಾಯ, ಮನಶಾಂತಿ.

ಮೀನರಾಶಿ
ಇಷ್ಟಾರ್ಥಸಿದ್ಧಿ, ಅನಾವಶ್ಯಕವಾಗಿ ಋಣಾತ್ಮಕ ಚಿಂತೆಗಳು ಹೆಚ್ಚಾದಾವು. ವೈಯಕ್ತಿಕವಾಗಿ ಆರೋಗ್ಯ ಭಾಗ್ಯ ಕ್ಷೀಣಿಸಲಿದೆ. ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯವಾದೀತು. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫ‌ಲ ಸಿಗಲಿದೆ. ಕೋರ್ಟ್ ವ್ಯವಹಾರಗಳಲ್ಲಿ ಜಯ, ತೀರ್ಥಯಾತ್ರೆ, ಮನಸ್ಸಿನಲ್ಲಿ ಭಯಭೀತಿ ನಿವಾರಣೆ, ದ್ವಿಚಕ್ರವಾಹನದಿಂದ ತೊಂದರೆ.

Leave A Reply

Your email address will not be published.