ನಿತ್ಯಭವಿಷ್ಯ : 30-12-2020

ಮೇಷರಾಶಿ
ದ್ರವರೂಪದ ವಸ್ತುಗಳಿಂದ ಲಾಭ, ಆರ್ಥಿಕ ವಿಷಯದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಅನಗತ್ಯ ಖರ್ಚಿಗೆ ಕಡಿವಾಣ ಹಾಕಿ, ಆರ್ಥಿಕವಾಗಿ ಏರಿಳಿತ, ಆರೋಗ್ಯದ ಬಗ್ಗೆ ಎಚ್ಚರ ಅಗತ್ಯ, ಉದ್ಯೋಗದಲ್ಲಿ ಅಸಮಾಧಾನ, ಗುರು ಹಿರಿಯರ ಭೇಟಿ, ಸಮಾಜದಲ್ಲಿ ಗೌರವ, ದೂರ ಪ್ರಯಾಣ ಸಾಧ್ಯತೆ, ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭರಾಶಿ
ಆರೋಗ್ಯದ ಕಾಳಜಿವಹಿಸಿ, ವೈದ್ಯರ ಸಲಹೆ ಅಗತ್ಯ, ವ್ಯಾಪಾರ, ಉದ್ಯೋಗದಲ್ಲಿ ಹಿನ್ನೆಡೆ, ಹಣಕಾಸಿನ ಮುಗ್ಗಟ್ಟು, ಆತ್ಮವಿಶ್ವಾಸವಿರಲಿ, ಸ್ನೇಹಿತರಿಂದ ನೆರವು, ಧನಲಾಭ, ವಾಹನ ರಿಪೇರಿ, ಟ್ರಾವೆಲ್ಸ್‍ನವರಿಗೆ ಲಾಭ, ಮಾತಿನ ಮೇಲೆ ಹಿಡಿತವಿರಲಿ.

ಮಿಥುನರಾಶಿ
ಸರ್ಕಾರಿ ಅಧಿಕಾರಿಗಳಿಂದ ಕಿರಿಕಿರಿ, ಸ್ನೇಹಿತರಲ್ಲಿ ವೈಮನಸ್ಸು, ಆತ್ಮೀಯರಲ್ಲಿ ಕಲಹ, ಅನುಕೂಲವಾದ ಸಮಯವು ನಿಮ್ಮ ಮುಂದಿದೆ, ನಿಮ್ಮ ತಾಳ್ಮೆಗೆ ಸವಾಲು ಎದುರಾಗಲಿದೆ. ಕೆಲವು ವಿಚಾರದಲ್ಲಿ ಹಿನ್ನಡೆ ಕಂಡುಬಂದರೂ ಕೊನೆಗೆ ಜಯ ನಿಮ್ಮದು, ವ್ಯಾಪಾರ, ವ್ಯವಹಾರದಲ್ಲಿ ಒತ್ತಡ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮನೆ ಖರೀದಿಸುವ ಆಲೋಚನೆ.

ಕಟಕರಾಶಿ
ಮಾನಸಿಕ ನೆಮ್ಮದಿ, ಅನ್ಯರಿಂದ ದ್ವೇಷ, ಕೆಲಸದಲ್ಲಿ ವಿಳಂಬ, ಕುಟುಂಬದಲ್ಲಿ ಸಂತೋಷದ ವಾತಾವರಣ, ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ, ಆರೋಗ್ಯವು ಉತ್ತಮ, ಅತಿಯಾದ ಪರಿಶ್ರಮದಿಂದ ಆರ್ಥಿಕ ಅಭಿವೃದ್ಧಿ, ನಾನಾ ರೀತಿಯ ತೊಂದರೆ, ಇಲ್ಲ ಸಲ್ಲದ ಅಪವಾದ, ಹಣಕಾಸು ವಿಚಾರದಲ್ಲಿ ನಷ್ಟ.

ಸಿಂಹರಾಶಿ
ಪ್ರಯತ್ನ ಮಾಡುವ ಮುನ್ನವೇ ಫ‌ಲದ ಚಿಂತೆ ಬೇಡ, ನಿಮ್ಮ ಕೆಲಸ ಕಾರ್ಯಗಳನ್ನು ಅತೀಯಾದ ಶ್ರದ್ಧೆಯಿಂದ ಮಾಡಿದ್ರೆ ಫಲ ಖಚಿತ, ಕೆಲಸ ಕಾರ್ಯಗಳು ನಿಧಾನವಾಗಿ ಮಂದಗತಿಯಲ್ಲಿ ಸಾಗಲಿದೆ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಉದ್ಯೋಗದಲ್ಲಿ ಅಭಿವೃದ್ಧಿ, ನಾನಾ ರೀತಿಯ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ವಿಫಲ, ಸ್ತ್ರೀಯಿಂದ ಧನಲಾಭ.

ಕನ್ಯಾರಾಶಿ
ಯಾರನ್ನು ಹೆಚ್ಚು ನಂಬಬೇಡಿ, ಒಂದಲ್ಲ ಒಂದು ಸಮಸ್ಯೆಯಿಂದ ಹೈರಾಣಾಗುವಿರಿ, ಮಾಡುವ ಪ್ರತಿಯೊಂದು ಕೆಲಸದಲ್ಲೂ ಮುಂಜಾಗ್ರತೆ ಅತ್ಯಗತ್ಯ, ಮೈಮರೆತಲ್ಲಿ ಬಹು ಬೆಲೆ ತೆರ ಬೇಕಾದೀತು, ಆರ್ಥಿಕ ಸ್ಥಿತಿಯು ಪೂರಕವಾಗಿರುವುದಿಲ್ಲ, ಜಾಗ್ರತೆ. ಹಿತಶತ್ರುಗಳಿಂದ ತೊಂದರೆ, ಮನಸ್ಸಿನಲ್ಲಿ ಭಯಭೀತಿ, ಉದ್ಯೋಗದಲ್ಲಿ ನೆಮ್ಮದಿ ಪ್ರಾಪ್ತಿ, ಅಲ್ಪ ಲಾಭ.

ತುಲಾರಾಶಿ
ನೆಮ್ಮದಿಗೆ ಭಂಗವಾಗದ ರೀತಿಯಲ್ಲಿ ತಣ್ಣಗಾಗಿದ್ದರೆ ಉತ್ತಮ, ವಿನಾಕಾರಣ ಓಡಾಟದಿಂದ ಆಯಾಸವಾಗಲಿದೆ, ಆನಾರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲದು, ವ್ಯವಹಾರಗಳು ಅಡ್ಡಿ , ಆತಂಕವಿಲ್ಲದೆ ಮುನ್ನಡೆ ಕಾಣಲಿದೆ, ಯತ್ನ ಕಾರ್ಯದಲ್ಲಿ ವಿಳಂಬ, ಮಿತ್ರರಿಂದ ನಿಂದನೆ ಅಪವಾದ, ಸ್ಥಳ ಬದಲಾವಣೆ ಚಿಂತನೆ, ವಾದ ವಿವಾದಗಳಿಂದ ಕಿರಿಕಿರಿ, ಮನೆ ವಾತಾವರಣದಲ್ಲಿ ಅಶಾಂತಿ.

ವೃಶ್ಚಿಕರಾಶಿ
ಚಂಚಲ ಮನಸ್ಸು, ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಫ‌ಲತೆಯನ್ನು ಕಾಣುವಿರಿ, ಯಶಸ್ಸು ನಿಮಗೆ ದೊರಕಲಿದೆ, ಕುಟುಂಬದಲ್ಲಿ ಸಂತೋಷ ನೆಲೆ ನಿಲ್ಲುವುದು. ವಿಶೇಷ ಲಾಭ ಹೊಂದುವಿರಿ. ಅಪರಿಚಿತರ ಆಗಮನದಿಂದ ತೊಂದರೆ ಇದೆ, ಆತ್ಮೀಯರಲ್ಲಿ ವಿರೋಧ, ಅನಗತ್ಯ ತಿರುಗಾಟ, ಆಸ್ತಿ ವಿಚಾರದಲ್ಲಿ ಕಲಹ.

ಧನಸುರಾಶಿ
ಸಮಯ ಪೂರಕವಾಗಿರುವುದರಿಂದ ಕೆಲಸ ಕಾರ್ಯದಲ್ಲಿ ಪ್ರಗತಿ, ಆದಾಯದಲ್ಲಿ ಗಣನೀಯ ಏರಿಕೆ ಕಾಣಲಿದೆ, ಮಹಿಳೆಯರಿಗೆ ಉತ್ತಮ ಅವಕಾಶ, ಬರಬೇಕಾದ ಹಣ ಕೈಸೇರುವುದು, ದೂರ ಪ್ರಯಾಣ, ಆರ್ಥಿಕ ಪರಿಸ್ಥಿತಿ ಚೇತರಿಕೆ.

ಮಕರರಾಶಿ
ದುಷ್ಟರಿಂದ ದೂರವಿರಿ, ದಾಯಾದಿಗಳ ಕಲಹ, ಮಾನಸಿಕ ವ್ಯಥೆ, ಒಂದಲ್ಲಾ ಒಂದು ಕಾರಣದಿಂದ ಒತ್ತಡ ಆವರಿಸುವುದರಿಂದ ಮನಸ್ಸು ಅಶಾಂತಿ, ನಿಮ್ಮ ಅವಸರ ಬುದ್ಧಿಯೇ ನಿಮಗೆ ಯಾತನೆ ನೀಡಲಿದೆ, ನಿರ್ಲಕ್ಷ್ಯವು ಸಲ್ಲದು. ಸಹನೆ ಇರಲಿ, ವ್ಯವಹಾರದಲ್ಲಿ ಸಾಮಾನ್ಯ ಪ್ರಗತಿ, ಅಲ್ಪ ಕಾರ್ಯಸಿದ್ದಿ, ನಾನಾ ಮೂಲಗಳಿಂದ ಧನಾಗಮನ.

ಕುಂಭರಾಶಿ
ಉತ್ತಮ ಪ್ರಗತಿ, ಶತ್ರುಗಳ ಭಾದೆ, ಸಮಯ ಅಷ್ಟೊಂದು ಉತ್ತಮವಲ್ಲದಿದ್ದರೂ ಒತ್ತಡ, ಬಳಲಿಕೆಯು ತುಂಬಾ ಕಂಡುಬರುವುದು, ವಿನಾ ಕಾರಣ ಓಡಾಟವು ಹೆಚ್ಚು ಆಯಾಸವನ್ನು ನೀಡಲಿದೆ, ಸಂತಾನಾಪೇಕ್ಷಿಗಳಿಗೆ ವ್ಯಾಕುಲತೆಯು ಕಾಡಲಿದೆ. ಕ್ರಯ ವಿಕ್ರಯಗಳಲ್ಲಿ ಲಾಭ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ಸ್ತ್ರೀಯರಿಗೆ ಅನಾರೋಗ್ಯ, ಧನಯೋಗ ಫಲಪ್ರಾಪ್ತಿ.

ಮೀನರಾಶಿ
ಕೃಷಿಯಲ್ಲಿ ಅಲ್ಪ ಲಾಭ, ಅಧಿಕವಾದ ಹಣ ಖರ್ಚು, ನಿಮ್ಮ ಪ್ರಯತ್ನ ಬಲಕ್ಕೆ ಹಲವರ ಸಹಕಾರ ದಿಂದ ಫ‌ಲ, ಯಾರೊಂದಿಗೂ ಕಾರಣ ವಿಲ್ಲದೆ ವಾಗ್ವಾದಕ್ಕೆ ಇಳಿಯುವುದು ಅನಗತ್ಯ, ಆರ್ಥಿಕ ಪರಿಸ್ಥಿತಿಯಲ್ಲಿ ಮುನ್ನಡೆ ಇದ್ದರೂ ಖರ್ಚು ಅಧಿಕ, ಸೇವಕರಿಂದ ತೊಂದರೆ, ಮನೆಯಲ್ಲಿ ಅಶಾಂತಿ, ಋಣ ವಿಮೋಚನೆ, ಇಲ್ಲ ಸಲ್ಲದ ಅಪವಾದ.

Comments are closed.