ನಿತ್ಯಭವಿಷ್ಯ : 05-04-2020

0

ಮೇಷರಾಶಿ
ಮಿತ್ರರೊಂದಿಗೆ ಪ್ರೀತಿ, ಹೊಸ ಸಂಬಂಧಗಳು ಕೂಡಿಬರಲು ಕಷ್ಟವಾಗುವುದು. ಆಗಾಗ ಅನಿರೀಕ್ಷಿತ ಖರ್ಚು ವೆಚ್ಚಗಳು ಬಂದೊದಗಬಹುದು. ಉಳಿತಾಯಕ್ಕೆ ಇದು ಉತ್ತಮ ಸಮಯ. ತಾಳ್ಮೆ ಇರಲಿ. ಸಮಾಧಾನವಿರಲಿ. ಯತ್ನ ಕಾರ್ಯದಲ್ಲಿ ಅನುಕೂಲ, ನಿವೇಶನ ಯೋಗ, ಧನ ಲಾಭ, ಅಧಿಕ ತಿರುಗಾಟ, ದಾಂಪತ್ಯ ಕಲಹ, ಪರರ ಮಾತಿಗೆ ಕಿವಿಗೊಡಬೇಡಿ, ಸ್ನೇಹಿತರಿಂದ ನೆರವು.

ವೃಷಭರಾಶಿ
ಅಕಸ್ಮಿಕ ಧನಾಗಮನದಿಂದ ಕೊಂಚ ನೆಮ್ಮದಿ ಕಂಡುಬರುತ್ತದೆ. ಗುರಿ ಸಾಧನೆಗಾಗಿ ನೀವು ನಡೆಸುವ ಪ್ರಯತ್ನದಿಂದ ವಿಮುಖವಾಗದೆ ಮುಂದುವರಿಯಿರಿ. ಮನೆಯಲ್ಲಿ ಗೃಹಿಣಿಯ ಕಿರಿಕಿರಿಯು ಹೆಚ್ಚಲಿದೆ. ಪ್ರಯತ್ನದಿಂದ ಉತ್ತಮ ಫಲ, ಆರೋಗ್ಯದಲ್ಲಿ ಚೇತರಿಕೆ, ಶತ್ರುಗಳ ನಾಶ, ಕುಟುಂಬ ಸೌಖ್ಯ, ದುಷ್ಟ ಜನರಿಂದ ದೂರವಿರಿ, ವಿವಾಹ ಯೋಗ, ತೀರ್ಥಯಾತ್ರೆ ದರ್ಶನ.

ಮಿಥುನರಾಶಿ
ಉತ್ತಮ ವ್ಯಾಪಾರ ವಹಿವಾಟು, ಕುತಂತ್ರದಿಂದ ಹಣ ಸಂಪಾದನೆ, ಸಾಂಸಾರಿಕವಾಗಿ ಮನಸ್ಸಿನ ನೆಮ್ಮದಿ ಇಲ್ಲವಾದೀತು. ಆರ್ಥಿಕವಾಗಿ ಹೆಚ್ಚಿನ ಜಾಗರೂಕತೆಯಿಂದ ವರ್ತಿಸಿದ್ದಲ್ಲಿ ಹೆಚ್ಚಿನ ಸಮಸ್ಯೆಯು ತೋರಿಬರಲಾರದು. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ಮೂಗಿನ ಮೇಲೆ ಕೋಪ, ವಾಹನದಿಂದ ಕಂಟಕ, ಅಕಾಲ ಭೋಜನ, ಸ್ತ್ರೀಯರಿಗೆ ಲಾಭ, ಉತ್ತಮ ಫಲ ಲಭಿಸುವುದು.

ಕಟಕರಾಶಿ
ವೃತ್ತಿರಂಗದಲ್ಲಿ ನಿಮ್ಮ ಯೋಚನೆಗಳಾವುವೂ ನಿಮ್ಮ ನಿಯಂತ್ರಣದಲ್ಲಿರದೆ ಅನ್ಯಮನಸ್ಕರಾಗುವ ಪ್ರಸಂಗ ಕಂಡುಬರುತ್ತದೆ. ಕೆಲವೊಂದು ಸಣ್ಣಪುಟ್ಟ ಬದಲಾವಣೆಗಾಗಿ ನೀವು ಸಜ್ಜಾಗಬೇಕಿದೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಮಕ್ಕಳ ಭಾವನೆಗಳಿಗೆ ಸ್ಪಂದಿಸಿ, ಮಾನಸಿಕ ನೆಮ್ಮದಿ, ಎಷ್ಟೇ ಒತ್ತಡವಿದ್ದರೂ ತಾಳ್ಮೆ ಅತ್ಯಗತ್ಯ, ವಿವೇಚನೆ ಕಳೆದುಕೊಳ್ಳಬೇಡಿ, ಪರಾಕ್ರಮದ ಕೆಲಸಗಳಲ್ಲಿ ಯಶಸ್ಸು.

ಸಿಂಹರಾಶಿ
ಪ್ರಯಾಣದಿಂದ ಆಯಾಸ, ವ್ಯಾಪಾರ ವ್ಯವಹಾರದಲ್ಲಿ ಧನ ಲಾಭ, ಯಾವುದೇ ವಿಚಾರವನ್ನು ನಿರ್ಧರಿಸುವ ಮುನ್ನ ಪುನಹ ಅಲೋಚಿಸುವ ಅಗತ್ಯವಿದೆ. ಸಾಂಸಾರಿಕವಾಗಿ ಶುಭವಿದ್ದರೂ ಹೊಂದಾಣಿಕೆ ಅಗತ್ಯವಿದೆ. ಫೈನಾನ್ಸ್‌ ವೃತ್ತಿಯವರಿಗೆ ಜವಾಬ್ದಾರಿ ಹೊರೆ ಹೊಚ್ಚಾದೀತು. ಶತ್ರುಗಳ ನಾಶ, ಪರಸ್ತ್ರೀಯಿಂದ ತೊಂದರೆ, ದೃಷ್ಠಿ ದೋಷದಿಂದ ಸಮಸ್ಯೆ, ಅಲ್ಪ ಕಾರ್ಯ ಸಿದ್ಧಿ, ಅಕಾಲ ಭೋಜನ.

ಕನ್ಯಾರಾಶಿ
ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ರಾಜಕೀಯ ವರ್ಗದವರು ತಮ್ಮ ಭವಿಷ್ಯದ ಬಗ್ಗೆ ತಾವೇ ಆತ್ಮವಿಮರ್ಶೆ ಮಾಡಿಕೊಳ್ಳುವುದು ಅಗತ್ಯವಿದೆ. ಬಾಳ ಸಂಗಾತಿಯ ಅವಶ್ಯಕತೆಯನ್ನು ಅರಿತು ಸಹಕರಿಸಿ. ಯತ್ನ ಕಾರ್ಯದಲ್ಲಿ ಅಡೆತಡೆ, ಚೋರ ಭಯ, ಅಧಿಕವಾದ ಕೋಪ, ಹಣಕಾಸು ನಷ್ಟ, ಅಧಿಕ ಕೆಲಸ, ವಿಶ್ರಾಂತಿ ಪಡೆಯುವಿರಿ, ಅಲ್ಪ ಲಾಭ, ಚಂಚಲ ಮನಸ್ಸು.

ತುಲಾರಾಶಿ
ಕಾರ್ಯಕ್ಷೇತ್ರದಲ್ಲಿ ನಿಮ್ಮ ಭಾವನೆಗಳಿಗೆ ಬೆಲೆ ಇಲ್ಲವಾದೀತು. ಖಾಸಗಿ ಹಿತಾಸಕ್ತಿಗಾಗಿ ಮಿತ್ರರಿಂದ ದೂರವಿರಿ. ನಿರುದ್ಯೋಗಿಗಳು ಕೊರಗುತ್ತಾ ಕೂರದೆ ಪುನ:ಹ ಅವಕಾಶವನ್ನು ಸದುಪಯೋಗಿಸಿರಿ. ಉದಾಸೀನತೆಯಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ಶ್ರಮಕ್ಕೆ ತಕ್ಕ ಫಲ, ಕೈಗಾರಿಕೋದ್ಯಮಿಗಳಿಗೆ ಯಶಸ್ಸು, ಹಣಕಾಸು ವಿಚಾರದಲ್ಲಿ ಜಾಗ್ರತೆ, ಮಾನಸಿಕ ನೆಮ್ಮದಿ, ಈ ವಾರ ಮಿಶ್ರ ಫಲ.

ವೃಶ್ಚಿಕರಾಶಿ
ವೃತ್ತಿಯಲ್ಲಿ ಬದಲಾವಣೆ, ಕೆಲವೊಂದು ಉತ್ತಮ ಅವಕಾಶಗಳು ಒದಗಿಬರಲಿದೆ. ಚಿಂತೆಯ ಜೊತೆಗೆ ದೇಹಾರೋಗ್ಯವು ಸರಿಯಾಗಿರಲಾರದು. ಕುಟುಂಬಿಕ ಕಲಹವು ಆಗಾಗ ಗೋಚರಕ್ಕೆ ಬಂದಾವು. ವ್ಯಾಪಾರದಲ್ಲಿ ತಲೆಬಿಸಿ ಇರುವುದು. ಸರಿ ತಪ್ಪುಗಳ ಬಗ್ಗೆ ಯೋಚಿಸಿ, ನಿರ್ಧಾರಗಳಲ್ಲಿ ಎಚ್ಚರ, ಪಿತ್ರಾರ್ಜಿತ ಆಸ್ತಿ ಗಳಿಕೆ, ಹಿತ ಶತ್ರುಗಳ ಬಾಧೆ, ದೂರ ಪ್ರಯಾಣ, ಧರ್ಮ ಕಾರ್ಯದಲ್ಲಿ ಆಸಕ್ತಿ.

ಧನಸ್ಸುರಾಶಿ
ಆರ್ಥಿಕವಾಗಿ ಸಾಧ್ಯವಾದಷ್ಟು ಜಾಗ್ರತೆ ವಹಿಸಿದರೆ ಉತ್ತಮ. ನಿಮ್ಮ ವಿಳಂಬ ನೀತಿಯಿಂದಾಗಿ ಕೆಲಸ ಕಾರ್ಯಗಳು ಹಿಂದೆ ಬಿದ್ದಾವು. ಬೇಜವಾಬ್ದಾರಿ ಕೆಲಸದಿಂದಾಗಿ ಧನವ್ಯಯವಾಗಲಿದೆ. ದಿನಾಂತ್ಯ ಅಶುಭ ವಾರ್ತೆ. ನಂಬಿಕಸ್ಥರಿಂದ ಹಣ ಮೋಸ ಸಾಧ್ಯತೆ, ಕೆಲಸ ಕಾರ್ಯದಲ್ಲಿ ಜಯ, ವಿದೇಶ ಪ್ರಯಾಣ, ತಂದೆ-ತಾಯಿಯೊಂದಿಗೆ ಪ್ರೀತಿ ವಾತ್ಸಲ್ಯ, ಋಣ ಬಾಧೆ, ತೀರ್ಥಯಾತ್ರೆ ದರ್ಶನ.

ಮಕರರಾಶಿ
ಅನಾವಶ್ಯಕ ಖರ್ಚುಗಳಿಂದ ದೂರವಿರಿ, ಪ್ರಭಾವಿ ವ್ಯಕ್ತಿಗಳ ಭೇಟಿ, ಶತ್ರುಗಳ ಬಾಧೆ, ಕುಟುಂಬಸ್ಥರಿಂದ ಧನ ಸಹಾಯ, ವೃತ್ತಿರಂಗದಲ್ಲಿ ಸ್ತ್ರೀ ಮೂಲಕ ಅಡಚಣೆ ಗಳಿರುತ್ತವೆ. ಅಶಾವಾದಿಗಳಾಗಿ ಭರವಸೆಯಿಂದ ಮುನ್ನಡೆಯಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶ ದೊರಕಲಾರದು. ಕೆಲವೊಮ್ಮೆ ಅನೃತವೂ ಅಮೃತವಾದೀತು. ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಚಂಚಲ ಮನಸ್ಸು.

ಕುಂಭರಾಶಿ
ನಿಮ್ಮ ಉದಾಸೀನತೆಯಿಂದ ಮನೆಯಲ್ಲಿ ಅಸಮಾಧಾನದ ವಾತಾವರಣ ಕಂಡುಬರುತ್ತದೆ. ಯಾವುದಕ್ಕೂ ಅನಾವಶ್ಯಕವಾಗಿ ಕೋಪತಾಪಗಳು ಹೆಚ್ಚಲಿವೆ. ಯೋಗ್ಯ ವಯಸ್ಕರಿಗೆ ವೈವಾಹಿಕ ಪ್ರಸ್ತಾವಗಳಿರುವುದು. ಈ ವಾರ ಸಮಾಧಾನದಿಂದ ವರ್ತಿಸಿ, ಪರಸ್ಥಳ ವಾಸ, ದುಡುಕು ಸ್ವಭಾವ, ಸುಖ ಭೋಜನ, ವೈರಿಗಳಿಂದ ಎಚ್ಚರ, ಸರ್ಕಾರಿ ನೌಕರರಿಗೆ ಬಡ್ತಿ, ಕೃಷಿಕರಿಗೆ ಲಾಭ.

ಮೀನರಾಶಿ
ವಿವಾಹದ ಮಾತುಕತೆ, ಕೆಲಸ ಕಾರ್ಯಗಳಲ್ಲಿ ಮಂದಗತಿ, ಗೃಹಿಣಿಗೆ ತುಸು ಸಮಾಧಾನ ಸಿಗಲಿದೆ. ಆರ್ಥಿಕವಾಗಿ ಹೆಚ್ಚಿನ ಜಾಗರೂಕತೆಯಿಂದ ನಿರ್ವಹಿಸಿದ್ದಲ್ಲಿ ಉತ್ತಮ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಭಾವನೆಗಳಿಗೆ ನಿರಾಶೆಯಾಗಲಿದೆ. ಆರೋಗ್ಯದಲ್ಲಿ ಸಮಸ್ಯೆ, ಚಿಂತನೆಯಿಂದ ನಿದ್ರಾಭಂಗ, ಗುರುಹಿರಿಯರಿಂದ ಹಿತನುಡಿ, ಅಧಿಕಾರ ಪ್ರಾಪ್ತಿ, ನಾನಾ ರೀತಿಯ ಸಂಪಾದನೆ, ಮಿತ್ರರದಲ್ಲಿ ದ್ವೇಷ. ದಿನಾಂತ್ಯ ಶುಭ ವಾರ್ತೆ.

Leave A Reply

Your email address will not be published.