ನಿತ್ಯಭವಿಷ್ಯ : 13-05-2020

0

ಮೇಷರಾಶಿ
ಮಿತ್ರರಿಂದ ಬೆಂಬಲ, ಪ್ರವಾಸ ಯೋಗದಿಂದ ಸಂತಸ ತರಲಿದೆ. ಕುಟುಂಬದ ಸದಸ್ಯರ ಬಗ್ಗೆ ಗಮನಹರಿಸಿರಿ. ವ್ಯಾಪಾರಿ ವರ್ಗದವರು ತಮ್ಮ ವ್ಯವಹಾರದಲ್ಲಿ ತೀವ್ರ ಸ್ಪರ್ಧೆ ಎದುರಿಸಬೇಕು. ಮುಖ್ಯ ಕೆಲಸದಲ್ಲಿ ಮುನ್ನಡೆ, ಕೆಲಸ ಕಾರ್ಯಗಳಲ್ಲಿ ಜಯ, ವಿವಾಹ ಯೋಗ, ಸ್ತ್ರೀಯರಿಗೆ ಅನುಕೂಲ.

ವೃಷಭರಾಶಿ
ಮಕ್ಕಳ ಸಂಬಂಧ ಕೆಲಸ ಕಾರ್ಯಗಳು ಕೈಗೂಡುವುವು. ಪುಣ್ಯ ಸಂಪಾದನೆಯ ಸಲಹೆ ವೈದಿಕರಿಂದ ಬಂದೀತು. ಹೊಸ ಸ್ಥಳಗಳ ಸಂದರ್ಶನದ ಭಾಗ್ಯದಿಂದ ಸಂತಸವಾದೀತು. ಹಣಕಾಸು ಮುಗ್ಗಟ್ಟು, ಆತ್ಮೀಯರಲ್ಲಿ ನಿಷ್ಠೂರ, ಮಾತಿನ ಚಕಮಕಿ, ಶತ್ರುಗಳ ಬಾಧೆ, ಸ್ತ್ರೀಯರಿಗೆ ತಾಳ್ಮೆ ಅತ್ಯಗತ್ಯ.

ಮಿಥುನರಾಶಿ
ಅಲ್ಪ ಆದಾಯ, ಅಧಿಕವಾದ ಖರ್ಚು, ಉದ್ಯೋಗಿಗಳಿಗೆ ಉದ್ಯೋಗ ಬದಲಾವಣೆಯ ಸಾಧ್ಯತೆ ಇರುತ್ತದೆ. ಆರ್ಥಿಕವಾಗಿ ನಾನಾ ರೀತಿಯ ಖರ್ಚುವೆಚ್ಚಗಳಿರುತ್ತವೆ. ರಾಜಕೀಯ ವರ್ಗವರಿಗೆ ಮನಸ್ಸು ಸ್ಥಿರವಿರದು. ಅತೀ ಆತ್ಮವಿಶ್ವಾಸದಿಂದ ಸಂಕಷ್ಟ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ಪರರಿಗೆ ಸಹಾಯ ಮಾಡುವಿರಿ, ಯೋಚಿಸಿ ನಿರ್ಧಾರ ಕೈಗೊಳ್ಳಿ.

ಕಟಕರಾಶಿ
ನಾನಾ ರೀತಿಯ ಲಾಭ, ಕಾರ್ಯಕ್ಷೇತ್ರದಲ್ಲಿ ಶತ್ರುಗಳಿಗೆ ಹಿನ್ನಡೆ ತರಲಿದೆ. ವಾಹನ ಚಾಲನೆಯ ಬಗ್ಗೆ ಜಾಗ್ರತೆ ಇರಲಿ. ವಿದ್ಯಾರ್ಥಿಗಳಿಗೆ ನಿರುತ್ಸಾಹ ಕಾಡಲಿದೆ. ವ್ಯಾಪಾರಿಗಳಿಗೆ ತುಸು ಚೇತರಿಕೆ ಕಂಡು ಬಂದೀತು. ವಿದ್ಯಾರ್ಥಿಗಳಲ್ಲಿ ಗೊಂದಲ, ಚಂಚಲ ಮನಸ್ಸು, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಕಾರ್ಯಗಳಲ್ಲಿ ಅಲ್ಪ ಹಿನ್ನಡೆ.

ಸಿಂಹರಾಶಿ
ಹಿರಿಯರಿಂದ ಮಾರ್ಗದರ್ಶನ, ಪತಿ-ಪತ್ನಿಯಲ್ಲಿ ಪ್ರೀತಿ, ನಿರುದ್ಯೋಗಿಗಳಿಗೆ ಧಾರಾಳ ಅವಕಾಶಗಳು ಒದಗಿ ಬರುವುದು. ವೃತ್ತಿರಂಗದಲ್ಲಿ ಕೊರತೆಗಳನ್ನು ಹೊಂದಾಣಿಕೆಯಿಂದ ಸರಿಪಡಿಸಿಕೊಳ್ಳಿರಿ. ವಿದ್ಯಾರ್ಥಿಗಳ ಕುಶಲತೆಗೆ ಉತ್ತಮ ಫ‌ಲಿತಾಂಶವು ದೊರಕಲಿದೆ. ಮಾನಸಿಕ ನೆಮ್ಮದಿ, ವಿಪರೀತ ಕೋಪ, ಕುಟುಂಬದಲ್ಲಿ ಸೌಖ್ಯ.

ಕನ್ಯಾರಾಶಿ
ಆರ್ಥಿಕ ಅಡಚಣೆಯಿಂದ ಪಾರಾಗಲು ಉತ್ತಮ ಆದಾಯದ ಮೂಲವನ್ನು ಕಂಡುಕೊಳ್ಳಬೇಕಾಗುತ್ತದೆ. ಧರ್ಮಬಾಹಿರ ಕೆಲಸಗಳ ಬಗ್ಗೆ ಯೋಚಿಸಬೇಕಾಗುತ್ತದೆ. ವೃತ್ತಿರಂಗದಲ್ಲಿ ಅಸಮಾಧಾನಕರ ವಾತಾವರಣ. ಆತ್ಮೀಯರೊಂದಿಗೆ ಕಷ್ಟ ಹೇಳಿಕೊಳ್ಳುವಿರಿ, ಕುಲದೇವರ ಆರಾಧನೆಯಿಂದ ನೆಮ್ಮದಿ, ದಿನ ಬಳಕೆ ವಸ್ತುಗಳ ಖರೀದಿ, ಹಣಕಾಸು ವಿಚಾರದಲ್ಲಿ ಎಚ್ಚರ, ವ್ಯವಹಾರಗಳನ್ನು ಮುಂದೂಡುವುದು ಉತ್ತಮ.

ತುಲಾರಾಶಿ
ಅತಿಯಾದ ನೋವು, ಉದಾಸೀನದಿಂದ ಸಂಕಷ್ಟ, ವೃತ್ತಿರಂಗದಲ್ಲಿ ಸ್ಥಗಿತಗೊಂಡ ಕಾರ್ಯಗಳು ಪುನಃ ಚಾಲನೆಗೆ ಬರಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶದಿಂದ ಸಂತಸ ತರಲಿದೆ. ಹಿರಿಯರ ಮಾರ್ಗದರ್ಶನ ಸೂಕ್ತ ಸಲಹೆಗೆ ಸ್ಪಂದಿಸಿರಿ. ಶತ್ರುಗಳಿಂದ ದೂರವಿರಿ, ಮಕ್ಕಳಿಂದ ಸಹಾಯ, ಆತ್ಮೀಯರಿಂದ ಸಲಹೆ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ.

ವೃಶ್ಚಿಕರಾಶಿ
ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಯೋಗ್ಯ ವಯಸ್ಕರು ಭಾಗ್ಯಶಾಲಿಗಳಾದಾರು. ವ್ಯಾಪಾರ ವ್ಯವಹಾರಗಳಲ್ಲಿ ಸಾಲ ವಾಪಸಾತಿಯಿಂದ ನೆಮ್ಮದಿ ಸಿಗಲಿದೆ. ನಿರೀಕ್ಷಿತ ಮನೋಕಾಮನೆಗಳು ಒಂದೊಂದಾಗಿ ನೆರವೇರಲಿವೆ. ಧನಾಗಮನ ಉತ್ತಮವಿರುತ್ತದೆ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಸುಖ ಭೋಜನ ಪ್ರಾಪ್ತಿ, ಕುಟುಂಬ ಸೌಖ್ಯ, ಮಾನಸಿಕ ನೆಮ್ಮದಿ ಲಭಿಸುವುದು.

ಧನಸ್ಸುರಾಶಿ
ಖರ್ಚುಗಳ ಬಗ್ಗೆ ನಿಗಾವಹಿಸಿ, ಶತ್ರುಗಳ ಬಾಧೆ, ತಾಳ್ಮೆ ಸಮಾಧಾನದಿಂದ ಮುಂದುವರಿಯಿರಿ. ಹಿತೈಷಿಗಳ ಸಹಕಾರವು ಮುನ್ನಡೆಗೆ ಸಾಧಕವಾಗಲಿದೆ. ಯೋಗ್ಯ ವಯಸ್ಕರಿಗೆ ಅದೃಷ್ಟವು ಒದಗಿ ಬಂದೀತು. ದೇವತಾ ಕಾರ್ಯಗಳಿಗೆ ಖರ್ಚುವೆಚ್ಚ ಬರಲಿದೆ. ಕೆಲಸ ಕಾರ್ಯಗಳಲ್ಲಿ ಪ್ರಗತಿ, ಯಾರನ್ನೂ ಹೆಚ್ಚು ನಂಬಬೇಡಿ, ಮೋಸದ ಜಾಲಕ್ಕೆ ಸಿಲುಕುವ ಸಾಧ್ಯತೆ, ಎಚ್ಚರಿಕೆಯಲ್ಲಿರುವುದು ಉತ್ತಮ.

ಮಕರರಾಶಿ
ಶಕ್ತಿ ಮೀರಿ ಕೆಲಸ ಒಪ್ಪಿಕೊಳ್ಳಬೇಡಿ, ಪರಿಶ್ರಮಕ್ಕೆ ತಕ್ಕ ಫಲ, ಧನಾದಾಯ ಉತ್ತಮವಿದ್ದರೂ ಅನಿರೀಕ್ಷಿತ ಖರ್ಚು ಆತಂಕಕ್ಕೆ ಕಾರಣವಾದೀತು. ವೃತ್ತಿರಂಗದಲ್ಲಿ ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ಜಾಗ್ರತೆ ವಹಿಸಿರಿ. ಗೃಹದಲ್ಲಿ ನೆಮ್ಮದಿ ತಂದೀತು. ದಾಂಪತ್ಯದಲ್ಲಿ ಕಲಹ, ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಪರಿಸ್ಥಿತಿ ಮುಗ್ಗಟ್ಟು, ವ್ಯಾಪಾರದಲ್ಲಿ ನಷ್ಟ.

ಕುಂಭರಾಶಿ
ಅಪರಿಚಿತರಿಂದ ತೊಂದರೆ, ಆಲಸ್ಯ ಮನೋಭಾವ, ನಿಮ್ಮ ಅಭಿವೃದ್ಧಿಗೆ ಶತ್ರುಗಳು ಅಸೂಯೆ ಪಟ್ಟಾರು. ಉದರ ಸಂಬಂಧಿ, ನರಗಳ ಸಂಬಂಧ ಜಾಗ್ರತೆ ವಹಿಸಿರಿ. ರಾಜಕೀಯ ವರ್ಗದವರಿಗೆ ಅನೇಕ ಗೊಂದಲಗಳು ಕಂಡು ಬರುತ್ತವೆ. ದಿನಾಂತ್ಯ ಶುಭ. ಕೃಷಿಕರಿಗೆ ಲಾಭ, ಮಾನಸಿಕ ನೆಮ್ಮದಿ, ಕೀಲು ನೋವು.

ಮೀನರಾಶಿ
ವಿರೋಧಿಗಳಿಂದ ತೊಂದರೆ, ಸಾಧಾರಣ ಲಾಭ, ಉದ್ಯೋಗಿಗಳಿಗೆ ಉದ್ಯೋಗದ ಬದಲಾವಣೆಯ ಸಾಧ್ಯತೆ ಇದೆ. ಅನ್ಯರ ಮಾತಿನಿಂದ ಅನಾವಶ್ಯಕ ತಪ್ಪು ಅಭಿಪ್ರಾಯ ತೋರಿಬರುತ್ತದೆ. ಉತ್ತಮ ಆದಾಯದಿಂದ ಪರಿಸ್ಥಿತಿ ಸುಧಾರಿಸಲಿದೆ. ಋಣ ಬಾಧೆ, ಹಣಕಾಸು ನಷ್ಟ, ವಾಗ್ವಾದಗಳಲ್ಲಿ ಎಚ್ಚರಿಕೆ, ಅನ್ಯ ಜನರಲ್ಲಿ ವೈಮನಸ್ಸು.

Leave A Reply

Your email address will not be published.