Horoscope Today : ದಿನಭವಿಷ್ಯ – ಕುಂಭರಾಶಿಗೆ ಗುರು ಪ್ರವೇಶ, ಹೇಗಿದೆ ದ್ವಾದಶ ರಾಶಿಗಳ ಫಲಾಫಲ

ಮೇಷರಾಶಿ
ಆರೋಗ್ಯ ಚೆನ್ನಾಗಿರುತ್ತದೆ, ನಿಮ್ಮ ಹಳೆಯ ಹೂಡಿಕೆಗಳು ಇಂದು ಪ್ರಯೋಜನಕ್ಕೆ ಬರಲಿದೆ, ಸ್ನೇಹಿತ ಹಾಗೂ ಸಂಬಂಧಿಕರ ಜೊತೆಗೆ ಸಮಯವನ್ನು ಕಳೆಯುವಿರಿ, ಇಂದು ನೀವು ನಕ್ಷತ್ರದಂತೆ ವರ್ತಿಸುವಿರಿ, ಪ್ರಶಂಸನೀಯ ಕೆಲಸಗಳನ್ನು ಮಾಡುವಿರಿ, ಆಲೋಚನೆಗಳು ಜಗತ್ತನ್ನು ಸೃಷ್ಟಿಸಲಿದೆ, ಆಲೋಚನಾ ಶಕ್ತಿಯನ್ನು ಸುಧಾರಿಸಿ.

ವೃಷಭರಾಶಿ
ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಿ, ಎಲ್ಲೋ ಹೂಡಿಕೆ ಮಾಡಿದ ಜನರು ಇಂದು ಆರ್ಥಿಕ ಸಂಕಷ್ಟವನ್ನು ಅನುಭವಿಸುವರು, ಲಾಭದಾಯಕವಾಗಿರಲಿದೆ, ಆದರೆ ಆತ್ಮೀಯರು ನಿಮಗೆ ನಿರಾಸೆ ಮಾಡುವ ಸಾಧ್ಯತೆಯಿದೆ, ಮಾನಸಿಕ ಶಾಂತಿಯನ್ನು ಪಡೆಯಲು ಸಮಯವನ್ನು ಏಕಾಂಗಿಯಾಗಿ ಕಳೆಯಲು ಬಯಸುವಿರಿ, ವೈವಾಹಿಕ ಜೀವನದ ದುಃಖದ ನೆನಪುಗಳು ಮರೆಯಾಗಲಿದೆ.

ಮಿಥುನರಾಶಿ
ಯಾವುದೇ ಕಾರಣಕ್ಕೂ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯಬೇಡಿ, ಆತ್ಮವಿಶ್ವಾಸದ ಕೊರತೆ ಎದುರಾಗದಂತೆ ನೋಡಿಕೊಳ್ಳಿ, ನಿಮ್ಮ ಸಮಸ್ಯೆಯನ್ನು ಪರಿಹಾರಿಸಲು ಯತ್ನಿಸಿ, ಸಮಸ್ಯೆಯನ್ನು ಪರಿಹಾರ ಮಾಡಲು ಯತ್ನಿಸಿ, ಹೆಚ್ಚುವರಿ ಹಣವನ್ನು ಪಡೆಯಲು ಯತ್ನಿಸುವಿರಿ, ಮೂರನೇ ವ್ಯಕ್ತಿಯಿಂದ ನಿಮ್ಮ ವೈಯಕ್ತಿಕ ಜೀವನ ಹಾಳಾಗುವ ಸಾಧ್ಯತೆಯಿದೆ. ಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ.

ಕರ್ಕಾಟಕರಾಶಿ
ಇತರರನ್ನು ಟೀಕಿಸುವ ಅಭ್ಯಾಸದಿಂದ ನೀವು ಕೆಲವು ಟೀಕೆಗಗಳನ್ನು ಎದುರಿಸಬೇಕಾಗುತ್ತದೆ, ಹಾಸ್ಯ ಪ್ರಜ್ಞೆಯಿಂದ ನಿಮಗೆ ರಕ್ಷಣೆಯನ್ನು ನೀಡಲಿದೆ, ರಹಸ್ಯವಾದ ಕಾಮೆಂಟ್‌ ನಿವಾರಿಸಲು ಉತ್ತಮ ಸ್ಥಾನದಲ್ಲಿರುತ್ತೀರಿ, ವ್ಯಾಪಾರ ಹಾಗೂ ಉದ್ಯೋಗದಲ್ಲಿ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ, ನೀವಿಂದು ಅದೃಷ್ಟವಂತರಾಗಿರುವಿರಿ.

ನಿಮ್ಮ ಯಾವುದೇ ಸಮಸ್ಯೆಗಳಿಗೂ ಪೋನಿನ ಮೂಲಕ ಶಾಶ್ವತ ಪರಿಹಾರ : ಪಂಡಿತ್.‌ ಪ್ರಮೋದ್‌ ಗುರೂಜಿ : 8123311267

ಸಿಂಹರಾಶಿ
ಕಚೇರಿ ಕೆಲಸದಿಂದ ಬೇಗನೆ ಹೊರಬರಲು ಪ್ರಯತ್ನಿಸಿ, ಸಂಗಾತಿಯ ಕೆಲಸವನ್ನು ಅಭಿನಂದಿಸುವ ಕೆಲಸವನ್ನು ಮಾಡಿ, ಖರ್ಚನ್ನು ನಿಯಂತ್ರಣದಲ್ಲಿಡಿ, ಭಾವನಾತ್ಮಕ ಭರವಸೆಗಳನ್ನು ಬಯಸುವವರಿಗೆ ಹಿರಿಯರು ಸಹಾಯಕ್ಕೆ ಬರಲಿದ್ದಾರೆ, ಬಿಡುವಿನ ವೇಳೆಯಲ್ಲಿ ಕೆಲಸು ಆಧ್ಯಾತ್ಮಿಕ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ, ನಿಮ್ಮ ಹಲವು ತೊಂದರೆಗಳು ನಿವಾರಣೆ ಆಗಲಿದೆ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ.

ಕನ್ಯಾರಾಶಿ
ನಿಮ್ಮನ್ನು ನೀವು ಫಿಟ್‌ ಆಗಿರುವಂತೆ ನೋಡಿಕೊಳ್ಳಿ, ಹೆಚ್ಚಿನ ಕ್ಯಾಲೋರಿ ಹೊಂದಿರುವ ಆಹಾರವನ್ನು ತಪ್ಪಿಸಿಕೊಳ್ಳಿ, ಸಾಧ್ಯವಾದಷ್ಟು ಸಾಂಪ್ರದಾಯಿಕ ಹೂಡಿಕೆಯಲ್ಲಿ ಹೂಡಿಕೆಯನ್ನು ಮಾಡಿದ್ದರೆ ಇಂದು ಉತ್ತಮ ಲಾಭವನ್ನು ಗಳಿಸುವಿರಿ, ಮಕ್ಕಳಿಂದ ನೆಮ್ಮದಿ ದೊರೆಯಲಿದೆ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ, ಹೊಂದಾಣಿಕೆಯಿಂದ ಕಾರ್ಯ ಸಾಧನೆಯಾಗಲಿದೆ.

ತುಲಾರಾಶಿ
ದೈಹಿಕ ಲಾಭಕ್ಕಾಗಿ ಧ್ಯಾನ ಮತ್ತು ಯೋಗವನ್ನು ಪ್ರಾರಂಭಿಸಿ, ಆರ್ಥಿಕ ಲಾಭವನ್ನು ತರುವ ಹೊಸ ಆಲೋಚನೆಯನ್ನು ರೂಢಿಸಿಕೊಳ್ಳಿ, ಕಿಟಕಿಯ ಮೇಲೆ ಹೂವನ್ನು ಇರಿಸುವ ಮೂಲಕ ಪ್ರೀತಿಯನ್ನು ತೋರಿಸಿ, ಬಾಕಿ ಉಳಿದಿರುವ ಸಮಸ್ಯೆಗಳು ಶೀಘ್ರದಲ್ಲಿಯೇ ಪರಿಹಾರವನ್ನು ಕಾಣಲಿದೆ, ಧನಾತ್ಮಕವಾಗಿ ಯೋಚಿಸಲು ಪ್ರಯತ್ನಿಸಿ, ಕೆಲಸವನ್ನು ಯಾವುದೇ ಕಾರಣಕ್ಕೆ ನಾಳೆಗೆ ಮುಂದೂಡಿಕೆ ಮಾಡಬೇಡಿ. ಕೆಲಸ ಕಾರ್ಯಗಳಿಂದ ಉತ್ತಮ ಫಲಿತಾಂಶ ದೊರೆಯಲಿದೆ.

ವೃಶ್ಚಿಕರಾಶಿ
ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳು ಪ್ರಶಂಸೆಯನ್ನು ನೀಡಲಿದ್ದಾರೆ. ಕೆಲಸದಲ್ಲಿ ನಿಮ್ಮ ಏಕಾಗ್ರತೆಗೆ ಭಂಗ ಬರಲಿದೆ, ಬಹುಕಾಲದಿಂದ ಉಳಿಕೆ ಮಾಡಿದ್ದ ಹಣವು ಇಂದು ಪ್ರಯೋಜನಕ್ಕೆ ಬರಲಿದೆ, ಅಧಿಕ ಖರ್ಚು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡಲಿದೆ, ಪ್ರೇಮಿಗಳ ಪಾಲಿಗೆ ಅನುಕೂಲ ತರಲಿದೆ, ಕೆಲಸದ ನಿಮಿತ್ತ ನೀವು ಇಂದು ಮನೆಯಿಂದ ದೂರ ಉಳಿಯಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಮಕ್ಕಳೊಂದಿಗೆ ಸಮಯ ಕಳೆಯುವಾಗ ಎಚ್ಚರಿಕೆಯನ್ನ ವಹಿಸಿ.

ಧನಸ್ಸುರಾಶಿ
ಸಾಮರ್ಥ್ಯಕ್ಕಿಂತ ಅಧಿಕ ಕಾರ್ಯವನ್ನು ಮಾಡಬೇಡಿ, ವೈವಾಹಿಕ ಜೀವನದಲ್ಲಿ ಸುಂದರವಾದ ಬದಲಾವಣೆ ತರಲಿದೆ, ಕೆಲವೊಂದು ವ್ಯಕ್ತಿಗಳು ನಿಮ್ಮೊಂದಿಗೆ ಸಿಟ್ಟಾಗುವ ಸಾಧ್ಯತೆಯಿದೆ, ನಿಮ್ಮ ಹಲವು ಸಮಸ್ಯೆಗಳು ಇಂದು ಪರಿಹಾರವನ್ನು ಕಾಣಲಿದೆ, ಜನರ ಸಲಹೆಯ ಮೇಲೆ ಹೂಡಿಕೆ ಮಾಡಿದ್ರೆ ಲಾಭವನ್ನು ಪಡೆಯಲಿದ್ದೀರಿ, ದೈನಂದಿನ ಒತ್ತಡದ ನಡುವೆ ಬಿಡುವು ಮಾಡಿಕೊಳ್ಳಿ.

ಮಕರರಾಶಿ
ಹಳೆಯ ಸ್ನೇಹಿತರನ್ನು ಇಂದು ಭೇಟಿಯಾಗುವಿರಿ, ಕುಟುಂಬದ ಅಗತ್ಯತೆಗಳನ್ನು ಪೂರೈಸಲು ಪ್ರಯತ್ನಿಸಿ, ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ, ನಿಮ್ಮ ಕೆಲವು ಗುಣಗಳು ಜನರ ಮೆಚ್ಚುಗೆಗೆ ಪಾತ್ರವಾಗಲಿದೆ, ಕುಟುಂಬದ ಅಗತ್ಯತೆಗಳಿಗೆ ಹೊಂದಿಕೊಳ್ಳಲು ಪ್ರಯತ್ನಿಸಿ, ಇಂದು ನಿಮ್ಮ ಆದಾಯ ಏರಿಕೆಯನ್ನು ಕಾಣಲಿದೆ, ಆದರೂ ಖರ್ಚು ಇನ್ನೂ ಹೆಚ್ಚುವ ಸಾಧ್ಯತೆಯಿದೆ.

ಕುಂಭರಾಶಿ
ಒತ್ತಡದ ಹೊರತಾಗಿ ಆರೋಗ್ಯವು ಪರಿಪೂರ್ಣವಾಗಿ ಇರಲಿದೆ, ಅವಾಸ್ತವಿಕ ಯೋಜನೆ ಹಣದ ಕೊರತೆಗೆ ಕಾರಣವಾಗುತ್ತದೆ. ನೀವು ಮನೆಯಲ್ಲಿ ಸಮಸ್ಯೆಗಳನ್ನು ನಿರೀಕ್ಷಿಸಬಹುದು, ವ್ಯಾಪಾರ ಹಾಗೂ ಉದ್ಯಮಿಗಳಿಗೆ ಅಧಿಕ ಲಾಭ ದೊರೆಯಲಿದೆ, ಹೊಂದಾಣಿಕೆಯಿಂದ ಕಾರ್ಯ ಸಾಧನೆಯಾಗಲಿದೆ, ದೂರದ ಬಂಧುಗಳು ಇಂದು ಮನೆಗೆ ಭೇಟಿ ನೀಡಲಿದ್ದಾರೆ. ಶಿವ ದೇವಸ್ಥಾನಕ್ಕೆ ಭೇಟಿ ಮಾಡುವುದರಿಂದ ನೆಮ್ಮದಿ ದೊರೆಯಲಿದೆ.

ಮೀನರಾಶಿ
ಕೆಲಸದ ಸ್ಥಳದಲ್ಲಿ ಹಿರಿಯರಿಂದ ಒತ್ತಡ ಏಕಾಗ್ರತೆಗೆ ಭಂಗ ತರುತ್ತದೆ. ಹೂಡಿಕೆಗಳಿಂದ ಅಧಿಕ ಲಾಭ ದೊರೆಯಲಿದೆ, ಯಾರೊಂದಿಗೂ ವಾರದಲ್ಲಿ ತೊಡಗಿಕೊಳ್ಳಬೇಡಿ, ವೈವಾಹಿಕ ಜೀವನ ಇಂದು ನಿಜವಾಗಿಯೂ ಉತ್ತಮಾಗಿರಲಿದೆ, ನಿಮ್ಮ ಮನಸ್ಥಿತಿ ಇಂದು ಹಾಳಾಗಲಿದೆ, ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಪ್ರಯತ್ನಿಸಿ, ಸಂಗಾತಿಯೊಂದಿಗೆ ಅದ್ಬುತವಾದ ಸಂಜೆಯನ್ನು ಕಳೆಯುವಿರಿ, ನಿಮ್ಮ ಮನಸ್ಥಿತಿ ಇಂದು ಹಾಳಾಗುವ ಸಾಧ್ಯತೆಯಿದೆ.

ನಿಮ್ಮ ಯಾವುದೇ ಸಮಸ್ಯೆಗಳಿಗೂ ಪೋನಿನ ಮೂಲಕ ಶಾಶ್ವತ ಪರಿಹಾರ : ಪಂಡಿತ್.‌ ಪ್ರಮೋದ್‌ ಗುರೂಜಿ : 8123311267

ಇದನ್ನೂ ಓದಿ : Kailaasa: ಶಿವ ಕೈಲಾಸದಲ್ಲಿ ನಡೆಯುತ್ತೆ ಇಂದಿಗೂ ವಿಸ್ಮಯ : ಕೈಲಾಸದ ಒಳಗೆ ಏನು ನಡೆಯುತ್ತೆ ಗೊತ್ತಾ?

ಇದನ್ನೂ ಓದಿ : ಶಬರಿಮಲೆ ದರ್ಶನಕ್ಕೆ 13 ಲಕ್ಷ ಭಕ್ತರಿಂದ ನೋಂದಣಿ : ಮಂಡಲ-ಮಕರವಿಳಕ್ಕು ಯಾತ್ರೆಗೆ ಮಳೆಯ ಭೀತಿ

(Horoscope today astrological prediction for November 21)

Comments are closed.