ಸಿಡಿಲು ಬಡಿದು ಕುಸಿದ ಮನೆ : ಮನೆಯಲ್ಲಿದ್ದ 7 ಮಂದಿಗೆ ಗಂಭೀರ ಗಾಯ

ಚಿಕ್ಕಬಳ್ಳಾಪುರ : ಸಿಡಿಲು ಬಡಿದು ಮನೆಯೊಂದು ಕುಸಿದ ಪರಿಣಾಮ ಮನೆಯಲ್ಲಿದ್ದ 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸೋಮಯಾಜಲಹಳ್ಳಿಯಲ್ಲಿ ನಡೆದಿದೆ.

ಜಗಣ್ಣ (60 ವರ್ಷ), ಅಂಬರೀಶ್ (32 ವರ್ಷ), ಗಾಯತ್ರಿ (28 ವರ್ಷ), ಗೌತಮ್ (3 ವರ್ಷ), ವಾಣಿಶ್ರೀ (6 ವರ್ಷ) ದರ್ಶನ್ (1 ವರ್ಷ) ಹಾಗೂ ಲಾವಣ್ಯ ( 4 ವರ್ಷ) ಗಾಯಗೊಂಡವರು. ಸಂಜೆಯ ವೇಳೆಯಲ್ಲಿ ಆರಂಭವಾದ ಮಳೆಯ ನಡುವಲ್ಲೇ ಚಪ್ಪಡಿ ಕಲ್ಲಿನ ಮನೆಗೆ ಸಿಡಿಲು ಬಡಿದಿದೆ.

ಗಾಯಾಳುಗಳನ್ನು ಚಿಂತಾಮಣಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದ್ರೂ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲ ಮಾಡಲಾಗಿದೆ.

Comments are closed.