ಕೊರೊನಾದಿಂದ ತತ್ತರಿಸಿದ್ದ ಉಡುಪಿಗೆ ಗುಡ್ ನ್ಯೂಸ್ : ಕುಂದಾಪುರದಲ್ಲಿಂದು ಸೋಂಕಿನಿಂದ ಗುಣಮುಖರಾದ 14 ಮಂದಿ ಡಿಸ್ಚಾರ್ಜ್

0

ಕುಂದಾಪುರ : ಕೊರೊನಾ ಸೋಂಕಿನಿಂದ ತತ್ತರಿಸಿದ್ದ ಉಡುಪಿಯ ಜನರಿಗೆ ಜಿಲ್ಲಾಡಳಿತ ಗುಡ್ ನ್ಯೂಸ್ ಕೊಟ್ಟಿದೆ. ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದ 45 ಮಂದಿಯನ್ನು ಬಿಡುಗಡೆ ಮಾಡಿದ್ದ ಜಿಲ್ಲಾಡಳಿತ, ಇಂದು ಕುಂದಾಪುರದಲ್ಲಿ ಕೊರೊನಾ ಸೋಂಕು ಗೆದ್ದ 14 ಮಂದಿಯನ್ನು ಡಿಸ್ಚಾರ್ಜ್ ಮಾಡಿದೆ. ಈ ಮೂಲಕ ಜಿಲ್ಲೆಯಲ್ಲಿರುವ 177 ಕೊರೊನಾ ಸೋಂಕಿತರರ ಪೈಕಿ 59 ಮಂದಿ ಗುಣಮುಖರಾಗಿದ್ದಾರೆ.

ಕುಂದಾಪುರ ಕೋವಿಡ್ ಆಸ್ಪತ್ರೆಯಲ್ಲಿ ಒಟ್ಟು 78 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಈ ಪೈಕಿ 14 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ವರದಿ ಕೂಡ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಮಕ್ಕಳು ಸೇರಿದಂತೆ 14 ಮಂದಿಯನ್ನು ಬಿಡುಗಡೆ ಮಾಡಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ, ಕುಂದಾಪುರ ಸಹಾಯಕ ಆಯುಕ್ತ ರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೋ ಅವರು ಕೊರೊನಾ ಸೋಂಕನ್ನು ಗೆದ್ದವರಿಗೆ ಗುಲಾಬಿ ಹೂವು ವಿತರಿಸುವ ಮೂಲಕ ಬೀಳ್ಕೊಡುಗೆ ನೀಡಿದ್ದಾರೆ.

Leave A Reply

Your email address will not be published.