ಶಿವಮೊಗ್ಗ : ಹೊಸನಗರದಲ್ಲಿರುವ ರಾಮಚಂದ್ರಾಪುರ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಭೇಟಿ ನೀಡಿದ್ದಾರೆ. ರಾಮಚಂದ್ರಾಪುರ ಮಠದಲ್ಲಿ ನಡೆದ ಕೃಷ್ಣಾರ್ಪಣಂ ಕಾರ್ಯಕ್ರಮದಲ್ಲಿ ಜಶೋದಾ ಬೆನ್ ಅವರು ಪಾಲ್ಗೊಂಡಿದ್ದಾರೆ. ರಾಘವೇಶ್ವರ ಭಾರತೀ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಜಶೋದಾ ಬೆನ್ ಅವರು ಆಶೀರ್ವಾದ ಪಡೆದಿದ್ದಾರೆ. ನಂತರ ಮಾತನಾಡಿದ ಅವರು, ಗೋ ಸೇವೆಗೆ ಸಂಕಲ್ಪ ತೊಟ್ಟು ಅದನ್ನು ಕಾರ್ಯರೂಪಕ್ಕೆ ತರುತ್ತಿರುವ ರಾಘವೇಶ್ವರ ಶ್ರೀಗಳಲ್ಲಿ ನಾನು ಆದಿಶಂಕರಾಚಾರ್ಯರನ್ನು ಕಾಣುತ್ತಿದ್ದೇಣೆ. ಅವರ ಉದ್ದೇಶದಂತೆ ಗೋ ರಕ್ಷಣೆಗೆ ಇನ್ನಷ್ಟು ಮಹತ್ವ ಸಿಗುವಂತಾಗಲಿ ಎಂದಿದ್ದಾರೆ. ಇನ್ನು ಮಠದ ಗೋಶಾಲೆಗೆ ತೆರಳಿ ಅಲ್ಲಿನ ಅಪರೂಪದ ಗೋ ತಳಿ ಬಗ್ಗೆ ಜಶೋದ ಬೆನ್ ಮೆಚ್ಚುಗೆ ವ್ಯಕ್ತಪಡಿಸಿದರು.