fire on hotel : ತಿನ್ನಲು ಏನಿಲ್ಲ ಎಂದಿದ್ದಕ್ಕೆ ಹೋಟೆಲ್​​ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಕೊಪ್ಪಳ :fire on hotel : ಹೋಟೆಲ್​ಗಳಲ್ಲಿ ಬಗೆ ಬಗೆಯ ಭಕ್ಷ್ಯಗಳು ಸಿಗುತ್ತವೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಂತ ಹೊತ್ತಲ್ಲದ ಹೊತ್ತಿಗೆ ಹೋಟೆಲ್​ ನುಗ್ಗಿ ತಿನ್ನಲು ಕೊಡಿ ಅಂದರೆ ಅವರಾದರೂ ಎಲ್ಲಿಂದ ಕೊಡುತ್ತಾರೆ? ಆದರೆ ಕೊಪ್ಪಳದ ಗಂಗಾವತಿಯ ಆನೆಗುಂದಿ ಎಂಬಲ್ಲಿ ಮಾತ್ರ ರಾತ್ರಿ ಹನ್ನೊಂದುವರೆ ಸುಮಾರಿಗೆ ಊಟ ಬೇಕು ಎಂದು ಗ್ರಾಹಕರು ಬೇಡಿಕೆ ಇಟ್ಟಿದ್ದಾರೆ. ಇಷ್ಟು ಹೊತ್ತಲ್ಲಿ ಊಟ ಸಿಗೋದಿಲ್ಲ ಎಂದು ಹೇಳಿದಕ್ಕೆ ಕೋಪಗೊಂಡ ಅಪರಿಚಿತರು ಹೋಟೆಲ್​​ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.


ತಡರಾತ್ರಿಯಾಗಿದ್ದರಿಂದ ಹೋಟೆಲ್​ನಲ್ಲಿ ಗ್ರಾಹಕರಿಗೆ ನೀಡಲು ಯಾವುದೇ ಆಹಾರ ಇರಲಿಲ್ಲ. ಹೀಗಾಗಿ ಈ ಹೊತ್ತಲ್ಲಿ ಊಟ ನೀಡಲು ಆಗೋದಿಲ್ಲ ಎಂದು ಯುವಕರಿಗೆ ಊಟ ನೀಡಲು ಸಾಧ್ಯವಿಲ್ಲ ಎಂದು ಹೋಟೆಲ್​ ಸಿಬ್ಬಂದಿ ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಯುವಕರು ಹೋಟೆಲ್​ ಸಿಬ್ಬಂದಿಗೆ ತಿಳಿಯದಂತೆ ಅಡುಗೆ ಮನೆಯ ಬಾಗಿಲನ್ನು ಲಾಕ್​ ಮಾಡಿದ್ದಾರೆ. ಇಷ್ಟು ಸಾಲದು ಎಂಬಂತೆ ಹೋಟೆಲ್​​ಗೆ ನೀರಿನ ಸಂಪರ್ಕವನ್ನು ಬಂದ್​ ಮಾಡಿದ್ದಾರೆ. ಇದಾದ ಬಳಿಕ ಬೆಂಕಿ ಹಚ್ಚಿದ್ದಾರೆ.


ಮಂಗಳೂರು ಹಂಚಿನ ಹೊದಿಕೆಯನ್ನು ಹೊಂದಿದ್ದ ಈ ಹೋಟೆಲ್​​ಗೆ ಬೆಂಕಿ ತಾಗುತ್ತಿದ್ದಂತೆಯೇ ಧಗ ಧಗ ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಿಗೆಗೆ ಹೋಟೆಲ್​ನ 11 ಕೋಣೆಗಳು ಸುಟ್ಟು ಭಸ್ಮವಾಗಿವೆ. ಅಡುಗೆ ಕೋಣೆಯಲ್ಲಿದ್ದ ಬಂಧಿಯಾಗಿದ್ದ ಹೋಟೆಲ್​ನ ಸಿಬ್ಬಂದಿ ಸ್ಥಳೀಯರಿಗೆ ಕರೆ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಓಡಿ ಬಂದ ಗ್ರಾಮಸ್ಥರು ಅಡುಗೆ ಸಿಬ್ಬಂದಿಯನ್ನು ಕೋಣೆಯಿಂದ ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇದನ್ನು ಓದಿ : ಕುಂದಾಪುರ ಶಿಲ್ಪಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ಸಾವಿನ ಹಿಂದೆ ಲವ್‌ ಜಿಹಾದ್‌ ಆರೋಪ

ಇದನ್ನೂ ಓದಿ : RCB WIN : ಕನ್ನಡಿಗ ಕೆ.ಎಲ್.ರಾಹುಲ್‌ ಆರ್ಭಟ ವ್ಯರ್ಥ : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ ಭರ್ಜರಿ ಗೆಲುವು

miscreants set fire on hotel in koppala

Comments are closed.