PRAMOD MUTHALIK : ಬಿಜೆಪಿ ನಂಬಿ ಕೂತರೆ ಪ್ರಯೋಜನವಿಲ್ಲ, ಹಿಂದೂಗಳೇ ಮನೆಯಲ್ಲಿ ತಲವಾರ್​ ಇಟ್ಟುಕೊಳ್ಳಿ : ಮುತಾಲಿಕ್​ ವಿವಾದಿತ ಹೇಳಿಕೆ

ಶಿರಸಿ : PRAMOD MUTHALIK :ರಾಜ್ಯದಲ್ಲಿ ಹಿಂದೂಗಳ ಮೇಲೆ ಸಾಲು ಸಾಲು ಮಾರಕ ದಾಳಿಗಳು ನಡೆಯುತ್ತಿರುವುದು ಬಿಜೆಪಿ ಸರ್ಕಾರದ ಮೇಲೆ ಕೈ ಮಾಡಿ ತೋರಿಸುವಂತಾಗಿದೆ. ಶಿವಮೊಗ್ಗ ಹರ್ಷ ಕೊಲೆ ಪ್ರಕರಣ, ದಕ್ಷಿಣ ಕನ್ನಡದಲ್ಲಿ ಪ್ರವೀಣ್​ ನೆಟ್ಟಾರು ಹತ್ಯೆ ಬಳಿಕ ಇದೀಗ ಶಿವಮೊಗ್ಗದಲ್ಲಿ ಮತ್ತೆ ಇಬ್ಬರು ವ್ಯಕ್ತಿಗಳ ಮೇಲೆ ಚಾಕು ಇರಿತವಾಗಿದ್ದು ರಾಜ್ಯದ ಜನತೆ ತಮ್ಮ ಸುರಕ್ಷತೆಯ ಬಗ್ಗೆ ಪ್ರಶ್ನೆ ಮಾಡಿಕೊಳ್ಳುವಂತಾಗಿದೆ. ರಾಜ್ಯದಲ್ಲಿ ಶಾಂತಿ ಕದಡುವ ಘಟನೆಗಳು ನಡೆಯುತ್ತಿರುವ ನಡುವೆಯೇ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಹಿಂದೂಗಳು ಇನ್ಮುಂದೆ ಮನೆಯಲ್ಲಿ ತಲವಾರ್​ ಇಟ್ಟುಕೊಳ್ಳಬೇಕೆಂದು ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದಾರೆ.

ಹಿಂದೂಗಳು ಕ್ಷತ್ರಿಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ತಮ್ಮ ರಕ್ಷಣೆಗಾಗಿ ಮನೆಯಲ್ಲಿ ತಲವಾರ್​ಗಳನ್ನು ಇಟ್ಟುಕೊಳ್ಳಬೇಕು. ಇನ್ನು ನಾವು ಬಿಜೆಪಿಯನ್ನು ನಂಬಿ ಕೂತರೆ ಪ್ರಯೋಜನವಿಲ್ಲ. ನಾವು ಹಿಂದೂ ಸಂಘಟನೆಗಳು ಒಂದಾಗಬೇಕಿದೆ. ಬಿಜೆಪಿ ಸರ್ಕಾರದ ಕಠಿಣ ಕ್ರಮವೆಂಬ ಬೊಗಳೆಯನ್ನು ನಂಬಲು ಜನರು ತಯಾರಿಲ್ಲ.ಸಾಥ್​ ಕೊಟ್ಟರೆ ಕೊಡಿ, ಇಲ್ಲವೇ ಒದ್ದು ಮುನ್ನಡೆಯುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.


ಹಿಂದೂ ಸಮಾಜಕ್ಕೆಂದು ಹೋರಾಡುವ ನನ್ನಂಥವನಿಗೆ ರಾಜ್ಯದ 21 ಜಿಲ್ಲೆಗಳಲ್ಲಿ ನಿರ್ಬಂಧ ಹೇರಿದ್ದಾರೆ. ಬಿಜೆಪಿಯೇ ಅಧಿಕಾರದಲ್ಲಿರುವ ಗೋವಾಗೆ ಕಳೆದ 8 ವರ್ಷಗಳಿಂದ ನನಗೆ ಪ್ರವೇಶಿಸಲು ನಿರ್ಬಂಧ ಹೇರಲಾಗಿದೆ. ಕಾಂಗ್ರೆಸ್​ ನಾಯಕರು ತುಷ್ಟೀಕರಣಕ್ಕಾಗಿ ದೇಶದ್ರೋಹಿಗಳನ್ನೂ ದೇಶಭಕ್ತರೆಂದು ಕರೆದಿದ್ದಾರೆ . ಹೀಗಾಗಿಯೇ ಹಿಂದೂ ವಿರೋಧಿಯಾಗಿದ್ದ ಟಿಪ್ಪು ಸುಲ್ತಾನನ್ನು ಕಾಂಗ್ರೆಸ್ಸಿಗರು ಮೆರೆಸುತ್ತಿದ್ದಾರೆ, ವೀರ ಸಾವರ್ಕರ್​​ನನ್ನು ಅವಮಾನಿಸುವ ಮುಸ್ಲಿಂ ಗೂಂಡಾಗಳನ್ನು ಹುಡುಕಿ ಗುಂಡೇಟು ಹಾಕಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ .

ಇದನ್ನು ಓದಿ : Shivamogga riot case: ಶಿವಮೊಗ್ಗದಲ್ಲಿ ಸಾವರ್ಕರ್​ ಫೋಟೋ ವಿವಾದ : ರಾಜ್ಯ ಸರ್ಕಾರಕ್ಕೆ ನನ್ನ ಧಿಕ್ಕಾರ ಎಂದ ಪ್ರಮೋದ್​ ಮುತಾಲಿಕ್​​

ಇದನ್ನೂ ಓದಿ : Shivamogga School College Holiday : ಶಿವಮೊಗ್ಗ, ಭದ್ರಾವತಿಯಲ್ಲಿ ನಿಷೇಧಾಜ್ಞೆ ಜಾರಿ ; ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

PRAMOD MUTHALIK SPEAK AGAINST BJP IN SHIRASI

Comments are closed.