kannada must : ಪದವಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ನಡೆಗೆ ಹಿನ್ನಡೆ

ಬೆಂಗಳೂರು : 2021-22ನೇ ಶೈಕ್ಷಣಿಕ ವರ್ಷದಲ್ಲಿ ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯ (kannada must ) ವಿಷಯವನ್ನಾಗಿ ಮಾಡುವ ರಾಜ್ಯ ಸರ್ಕಾರದ ನಡೆಗೆ ಹಿನ್ನಡೆ ಉಂಟಾಗಿದೆ. ಪದವಿ ಶಿಕ್ಷಣದಲ್ಲಿ ಕನ್ನಡವನ್ನು (Kannada) ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ಇಂದು ರಾಜ್ಯ ಹೈಕೋರ್ಟ್ ತಡೆ ನೀಡಿದೆ.

ಉನ್ನತ ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಯಾದ ಕನ್ನಡವನ್ನು ಕಡ್ಡಾಯಗೊಳಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ನೀಡಿತ್ತು. ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಪ್ರಾದೇಶಿಕ ಭಾಷೆಗಳು ಕಡ್ಡಾಯವಲ್ಲ ಎಂದು ವಾದಿಸಿದ್ದ ಸಂಸ್ಕೃತ ಭಾರತಿ ಟ್ರಸ್ಟ್​ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮತ್ತು ಕೆಲವು ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್​ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಪ್ರಾದೇಶಿಕ ಭಾಷೆಯನ್ನು ಕಡ್ಡಾಯಗೊಳಿಸಲೇಬೇಕು ಎಂದು ಕೇಂದ್ರ ಸರ್ಕಾರ ಹೇಳಿಲ್ಲ. ಹೀಗಾಗಿ ರಾಜ್ಯ ಸರ್ಕಾರವು ಆಗಸ್ಟ್​​ 7 ಹಾಗೂ ಸೆಪ್ಟಂಬರ್​ 15, 2021ರಂದು ಹೊರಡಿಸಿರುವ ಆದೇಶಕ್ಕೆ ತಡೆಯಾಜ್ಞೆ ನೀಡುತ್ತಿದ್ದೇವೆ ಎಂದು ಹೇಳಿದೆ.

ಪ್ರಾದೇಶಿಕ ಭಾಷೆಯನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಪ್ರಾದೇಶಿಕ ಭಾಷೆಗಳನ್ನು ಕಡ್ಡಾಯಗೊಳಿಸಿದರೆ ಹೊರಗಿನಿಂದ ಬರುವ ವಿದ್ಯಾರ್ಥಿಗಳ ಮೇಲೆ ಕನ್ನಡ ಹೇರಿಕೆ ಮಾಡಿದಂತೆ ಆಗುತ್ತದೆ , ಹೀಗಾಗಿ ರಾಜ್ಯ ಸರ್ಕಾರವು ತನ್ನ ಆದೇಶದ ಬಗ್ಗೆ ಮತ್ತೊಮ್ಮೆ ಯೋಚಿಸಬೇಕು ಎಂದು ಕೋರ್ಟ್ ಹೇಳಿದೆ.

Karnataka Cabinet Expansion : ಮತ್ತೊಮ್ಮೆ ಸಂಪುಟ ಸರ್ಕಸ್ : ಯಾರು ಇನ್ ಯಾರು ಔಟ್ ಇಲ್ಲಿದೆ ಡಿಟೇಲ್ಸ್

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಸಂಪುಟ ರಚನೆಯ ಸರ್ಕಸ್ ಜೋರಾಗಿದೆ.‌ಒಂದೆಡೆ ಬಾಕಿ ಇರುವ ಒಂದುವರ್ಷವಾದರೂ ಸಚಿವರಾಗೋಣ ಎಂದು ಶಾಸಕರು ಸರ್ಕಸ್ ನಡೆಸಿದ್ದರೇ, ಚುನಾವಣೆಯ ಮತಗಳಿಕೆ ಲೆಕ್ಕಾಚಾರದಲ್ಲಿ ಜಾತಿ ,ಪಂಗಡವನ್ನು ಟಾರ್ಗೆಟ್ ಮಾಡಿ ಸಚಿವ ಸ್ಥಾನ ಹಂಚಿಕೆಗೆ ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಹೀಗಾಗಿ ರಾಜ್ಯ ಸಚಿವ ಸಂಪುಟಕ್ಕೆ (Karnataka Cabinet Expansion) ಯಾರು ಇನ್ ಯಾರು ಔಟ್ ಎಂಬ ಚರ್ಚೆ ಬಲಪಡೆದುಕೊಂಡಿದೆ.

ಸಿಎಂ ಬೊಮ್ಮಾಯಿ ನೀರಿನ ಹಂಚಿಕೆಗಳ ವಿವಾದ ಸೇರಿದಂತೆ ಹಲವು ವಿಚಾರಗಳ ಮಾತುಕತೆಗಾಗಿ ದೆಹಲಿಗೆ ದೌಡಾಯಿಸಿದ್ದಾರೆ.‌ಮುಖ್ಯ ಕೆಲಸ ಕೇಂದ್ರ ಜಲಸಚಿವರ ಭೇಟಿ ಯಾಗಿದ್ದರೂ ಸಂಪುಟ ವಿಸ್ತರಣೆಯೇ ಬೊಮ್ಮಾಯಿ ಆದ್ಯತೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಬೊಮ್ಮಾಯಿ ದೆಹಲಿಗೆ ದೌಡಾಯಿಸುತ್ತಿದ್ದಂತೆ ಸಚಿವ ಸಂಪುಟ ಆಕಾಂಕ್ಷಿಗಳಲ್ಲಿ ಸಂಭ್ರಮ‌ ಮನೆಮಾಡಿದ್ದರೇ, ಈಗಾಗಲೇ ಸಚಿವರಾಗಿರುವ ಹಲವರ ಎದೆಯಲ್ಲಿ ನಡುಕ ಆರಂಭವಾಗಿದೆ.

ಮೂಲಗಳ ಮಾಹಿತಿ ಪ್ರಕಾರ ಸದ್ಯ ಸಚಿವ ಸಂಪುಟದಲ್ಲಿರೋ 12 ಕ್ಕೂ ಹೆಚ್ಚು ಸಚಿವರಿಗೆ ಹೈಕಮಾಂಡ್ ಖೋಕ್ ನೀಡಲಿದ್ದು, ಹಲವು ಹೊಸ ಸಚಿವರಿಗೆ ಅವಕಾಶ ನೀಡಲಿದೆ ಎನ್ನಲಾಗುತ್ತಿದೆ. ಹಲವು ವಿವಾದಗಳಿಂದ ಪಕ್ಷಕ್ಕೆ ಲಾಭಕ್ಕಿಂತ ಹೆಚ್ಚು ನಷ್ಟ ಉಂಟು ಮಾಡಿರುವ ಹಾಗೂ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿರೋ ಈಶ್ವರಪ್ಪ ಅವರಿಗೆ ಸಂಪುಟದಿಂದ ಹೊರಬೀಳೋ ಭಾಗ್ಯ ಬಹುತೇಕ ಖಚಿತವಾಗಿದೆ.

ಇದನ್ನು ಹೊರತು ಪಡಿಸಿದಂತೆ, ಕೆಲಸ ಕಾರ್ಯ ಹಾಗೂ ಪಕ್ಷದ ಬಲವರ್ಧನೆಗೆ ಕೊಡುಗೆ ನೀಡದ ಕಾರಣಕ್ಕೆ ಸಚಿವೆ ಶಶಿಕಲಾ ಜೊಲ್ಲೆ, ಆನಂದ ಸಿಂಗ್, ಬಾಬುರಾವ್ ಚವ್ಹಾಣ್, ಬಿ.ಸಿ.ಪಾಟೀಲ್‌ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಇದೆ. ಅಲ್ಲದೇ ಸಚಿವ ಸಂಪುಟದ ಏಕೈಕ‌ ಮಹಿಳಾ ಸಚಿವೆ ಖ್ಯಾತಿಯ ಶಶಿಕಲಾ ಜೊಲ್ಲೆ ಕೂಡ ಸಂಪುಟದಿಂದ ಹೊರಬೀಳಲಿದ್ದಾರಂತೆ. ಈ‌ ಮಧ್ಯೆ ಸಚಿವ ಸ್ಥಾನ ಆಕಾಂಕ್ಷಿತರ ದೊಡ್ಡ ಪಟ್ಟಿಯೇ ಇದ್ದು, ಈ ಪೈಕಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮೊದಲ ಸ್ಥಾನದಲ್ಲಿದ್ದಾರೆ.

ಈಗಾಗಲೇ ದೆಹಲಿಗೆ ತೆರಳಿರುವ ರೇಣುಕಾಚಾರ್ಯ ಸಚಿವ ಸ್ಥಾನ ಕ್ಕೆ ಭರ್ಜರಿ ಲಾಭಿ ನಡೆಸಿದ್ದಾರೆ. ಕೇವಲ ರೇಣುಕಾಚಾರ್ಯ ಮಾತ್ರವಲ್ಲ ಶಾಸಕರುಗಳಾದ ಆನಂದ‌ ಮಾಮನಿ, ಹಾಲಪ್ಪ, ರಾಮದಾಸ್ ಸೇರಿದಂತೆ ಹಲವರು ಸಚಿವ ಸ್ಥಾನದ ನೀರಿಕ್ಷೆಯಲ್ಲಿದ್ದಾರೆ. ಇನ್ನೊಂದೆಡೆ ಶಾಸಕಿಯರಾದ ಪೂರ್ಣಿಮಾ ಹಾಗೂ ರೂಪಾಲಿ ನಾಯ್ಕ ಕೂಡ ಸಚಿವ ಸಂಪುಟಕ್ಕೆ ಸೇರಲು ತುದಿಗಾಲಿನಲ್ಲಿ ನಿಂತಿದ್ದು, ತಮ್ಮ ಪರ ಲಾಭಿ ಮುಂದುವರೆಸಿದ್ದಾರೆ. ಒಟ್ಟಿನಲ್ಲಿ ಮತ್ತೊಮ್ಮೆ ಬಿಜೆಪಿಯಲ್ಲಿ ಸಂಪುಟ‌ ವಿಸ್ತರಣೆ ಸರ್ಕಸ್ ಜೋರಾಗಿದೆ.

ಇದನ್ನು ಓದಿ : village gets electricity :75 ವರ್ಷಗಳ ಬಳಿಕ ವಿದ್ಯುತ್​ ಸಂಪರ್ಕ ಕಂಡಿದೆ ಈ ಗ್ರಾಮ..!

ಇದನ್ನೂ ಓದಿ : Vijay’s Beast movie : ಕುವೈತ್​​ನಂತೆಯೇ ತಮಿಳುನಾಡಿನಲ್ಲಿಯೂ ‘ಬೀಸ್ಟ್​’ಗೆ ಬ್ಯಾನ್​ ಸಂಕಷ್ಟ

Comments are closed.