ದೇಶದಲ್ಲಿ ಮಿತಿಮೀರುತ್ತಿದೆ ಡೆಂಗ್ಯೂ ಜ್ವರ ಪ್ರಕರಣ – ಜಪಾನ್​ ಮೂಲದ ಕ್ಯೂಡೆಂಗಾ ಲಸಿಕೆ ಬಳಿಕೆಗೆ ತಜ್ಞರ ಅನುಮತಿ – ಮಹಾಮಾರಿ ವಿರುದ್ಧ ಸಾರ್ವಜನಿಕರಿಗೆ ವ್ಯಾಕ್ಸಿನ್​ ರಕ್ಷಣೆ

ದೇಶದಲ್ಲಿ ದಿನದಿಂದ ದಿನಕ್ಕೆ ಮಿತಿಮೀರುತ್ತಿರುವ ಡೆಂಗ್ಯೂ ಜ್ವರದಿಂದ ಮುಕ್ತಿ ಪಡೆಯುವ ಕಾಲ ಸನ್ನಿಹಿತವಾಗಿದೆ. ಪ್ಲೇಟ್​ಲೆಟ್​ ಸಂಖ್ಯೆಯಲ್ಲಿ ದಿಢೀರ್​ ಕುಸಿತ ಕಂಡುಬಂದು ಅನೇಕರ ಸಾವಿಗೆ ಮುನ್ನುಡಿ ಬರೆಯುತ್ತಿದ್ದ ಡೆಂಗ್ಯೂ ಜ್ವರಕ್ಕೆ ಲಸಿಕೆ ಸ್ವೀಕರಿಸಲು ಕೇಂದ್ರ ಸರ್ಕಾರ ನಿಯೋಜಿತ ತಜ್ಞರ ಸಮಿತಿ ಅನುಮತಿ ನೀಡಿದ್ದು, ಶೀಘ್ರದಲ್ಲಿಯೇ ಭಾರತದಲ್ಲಿ ಡೆಂಗ್ಯೂ ಲಸಿಕೆಗಳು ಮಾರುಕಟ್ಟೆ ಪ್ರವೇಶಿಸಲಿವೆ.

ಡೆಂಗ್ಯೂ ಜ್ವರದ ವಿರುದ್ಧ ಹೋರಾಡಲು ಜಪಾನ್​ ಮೂಲದ ಟಕೆಡಾ ಕಂಪನಿ ತಯಾರಿಸಿದ ಲಸಿಕೆ ಇದಾಗಿದ್ದು, ಈ ಲಸಿಕೆಗೆ ಕ್ಯೂಡೆಂಗಾ ಎಂದು ಹೆಸರಿಡಲಾಗಿದೆ. ಈ ಲಸಿಕೆಯು ಡೆಂಗ್ಯೂ ವೈರಸ್‌ನ ನಾಲ್ಕೂ ವಿಧಗಳಾದ Serotypes 1, 2, 3, ಮತ್ತು 4 ವಿರುದ್ಧ ರಕ್ಷಣೆ ನೀಡುತ್ತದೆ ಎಂದು ಟಕೆಡಾ ಕಂಪನಿ ಹೇಳಿದೆ. ಈ ಕ್ಯೂಡೆಂಗಾ ಲಸಿಕೆಯನ್ನು ಬಳಕೆ ಮಾಡುವುದರ ಬಗ್ಗೆ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಅಡಿಯಲ್ಲಿ ಬರುವ ವಿಶೇಷ ತಜ್ಞರ ಸಮಿತಿಯು ಸಂಶೋಧನೆ ನಡೆಸಿತ್ತು.ಇದೀಗ ಈ ತಜ್ಞರ ಸಮಿತಿಯು ಕ್ಯೂಡೆಂಗಾ ಲಸಿಕೆಗೆ ಹಸಿರು ನಿಶಾನೆ ತೋರಿದೆ.

ಇದನ್ನೂ ಓದಿ: ವಿಟಮಿನ್ B12 ಕೊರತೆಯಾಗಿದ್ಯಾ? ದಿನಕ್ಕೊಂದು ಚಮಚ ಇದನ್ನು ಸೇವಿಸಿ ಸಾಕು!

ಕ್ಯೂಡೆಂಗಾ ಲಸಿಕೆ ಭಾರತದ ಮಾರುಕಟ್ಟೆ ಪ್ರವೇಶಿಸಲು, ಡಿಜಿಜಿಐ ಅನುಮತಿ ಪಡೆಯಬೇಕಿದೆ. ಈ ಹಂತದಲ್ಲಿಯೂ ಕ್ಯೂಡೆಂಗಾ ಲಸಿಕೆ ಪಾಸ್​ ಆದಲ್ಲಿ,ಡೆಂಗ್ಯೂ ಬಂದವರು ಹಾಗೂ ಬಾರದವರೆಲ್ಲರೂ ಈ ಲಸಿಕೆಯನ್ನು ಪಡೆಯಬಹುದಾಗಿದೆ. ಅಲ್ಲದೇ ಈ ಮೂಲಕ ಕ್ಯೂಡೆಂಗಾ ಲಸಿಕೆಯು, ಭಾರತದಲ್ಲಿ ಲಭ್ಯವಿರುವ ಮೊದಲ ಡೆಂಗ್ಯೂ ವಿರುದ್ಧ ಲಸಿಕೆ ಎಂಬ ಕೀರ್ತಿಗೂ ಪಾತ್ರವಾಗಲಿದೆ.

ಈ ಲಸಿಕೆಯ ಆಗಮನದಿಂದಾಗಿ ಪ್ರತಿ ವರ್ಷ ಡೆಂಗ್ಯೂ ಜ್ವರದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಮತ್ತು ಡೆಂಗ್ಯೂನಿಂದ ಸಂಭವಿಸುವ ಸಾವು-ನೋವುಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಭಾರತೀಯ ವೈದ್ಯಕೀಯ ಲೋಕವಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories